newsics.com
ಬೆಂಗಳೂರು: ನಟ ದರ್ಶನ್ ಗೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ ಆಪರೇಷನ್ ಅವಶ್ಯಕತೆ ಇದೆಯೋ ಇಲ್ಲವೋ ಎಂಬುದನ್ನ ವೈದ್ಯರು ಇವತ್ತು ನಿರ್ಧರಿಸಲಿದ್ದಾರೆ.
ಬುಧವಾರದೊಳಗೆ ಕೋರ್ಟ್ ಗೆ ದರ್ಶನ್ ವೈದ್ಯಕೀಯ ರಿಪೋರ್ಟ್ ಗೆ ಸಲ್ಲಿಸುವ ಸಾಧ್ಯತೆ ಇದೆ. ನುರಿತ ವೈದ್ಯರ ತಂಡ ದರ್ಶನ್ ಗೆ ಚಿಕಿತ್ಸೆ ನೀಡುತ್ತಿದ್ದು, ಆರೋಗ್ಯದ ಬಗ್ಗೆ ನಿಗಾ ಇಟ್ಟಿದ್ದಾರೆ.
ಫಿಸಿಯೋ ಥೆರಪಿ ಅಥವಾ ಶಸ್ತ್ರಚಿಕಿತ್ಸೆ ಮಾಡುವ ಬಗ್ಗೆ ವೈದ್ಯರು ತೀರ್ಮಾನ ಮಾಡಲಿದ್ದಾರೆ. ಎಲ್ಲಾ ರಿಪೋರ್ಟ್ ಸಿದ್ಧವಾದ ನಂತರ ಬಹುತೇಕ ಬುಧವಾರ ಕೋರ್ಟ್ ಗೆ ವರದಿ ಸಲ್ಲಿಸಲಾಗುತ್ತದೆ. ಕಳೆದ ವಾರವಷ್ಟೇ ಕೋರ್ಟ್ ನಟ ದರ್ಶನ್ ಗೆ 45 ದಿನಗಳ ಕಾಲ ಮಧ್ಯಂತರ ಜಾಮೀನು ನೀಡಿತ್ತು.
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ 131 ದಿನಗಳ ಕಾಲ ಜೈಲುವಾಸ ಅನುಭವಿಸಿದ್ದರು. ತೀವ್ರ ಬೆನ್ನು ನೋವು ಅನುಭವಿಸಿದ ನಂತರ ಆಸ್ಪತ್ರೆಗೆ ಅಡ್ಮಿಟ್ ಅನಿವಾರ್ಯ ಎಂದು ಡಾಕ್ಟರ್ ವರದಿ ನೀಡಿದ್ದರು.