newsics.com
ತೆಲಂಗಾಣದ : ಇತ್ತೀಚೆಗೆ ಹೋಟೆಲ್ ಗಳಲ್ಲಿ ನಡೆದ ಘಟನೆಗಳು ಆಹಾರದ ನೈರ್ಮಲ್ಯದ ಬಗ್ಗೆ ಗಂಭೀರ ಆತಂಕವನ್ನು ಉಂಟುಮಾಡಿದೆ.
ಟಿಫಿನ್ ಸೆಂಟರ್ನಲ್ಲಿ ನೀಡಲಾದ ಇಡ್ಲಿಯಲ್ಲಿ ಜಿರಳೆ ಕಾಣಿಸಿಕೊಂಡು ಗ್ರಾಹಕರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಹೋಟೆಲ್ ಮಾಲೀಕರ ನಿರ್ಲಕ್ಷ್ಯಕ್ಕೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವು ಹೋಟೆಲ್ಗಳು ಕ್ರಿಮಿಕೀಟಗಳ ಸಮೇತ ಊಟ ಬಡಿಸಿ ಜನರಲ್ಲಿ ಭಯ ಹುಟ್ಟಿಸುತ್ತಿವೆ. ತೆಲಂಗಾಣದ ಜಗಿತ್ಯಾದ ಜಿಲ್ಲಾ ಕೇಂದ್ರದ ಟಿಫಿನ್ ಸೆಂಟರ್ನಲ್ಲಿ ಇಡ್ಲಿಯಲ್ಲಿ ಜಿರಳೆ ಕಾಣಿಸಿಕೊಂಡು ಸಂಚಲನ ಮೂಡಿಸಿದೆ.