newsics.com
ಬೆಂಗಳೂರು: ಮಹಾಲಕ್ಷ್ಮಿ ಹಂತಕ ಮುಕ್ತಿ ರಂಜನ್ ಪ್ರತಾಪ್ ರಾಯ್ ಸಾವಿನಿಂದ ಪೊಲೀಸರಿಗೆ ತಲೆನೋವು ಹೆಚ್ಚಾಗಿದೆ. ಕೊಲೆ ಪ್ರಕರಣ ಇನ್ನಷ್ಟು ಜಟಿಲವಾಗಲಿದೆ.
ಒಡಿಶಾದ ತನ್ನ ಸ್ವಗ್ರಾಮದಲ್ಲಿ ನೇಣಿಗೆ ಶರಣಾಗಿರುವುದು ಖಚಿತವಾಗಿದೆ. ಆದರೆ ಮಹಾಲಕ್ಷ್ಮಿ ಕೊಲೆ ಪ್ರಕರಣವನ್ನು ಹಂತಕನ ಆತ್ಮಹತ್ಯೆಯಿಂದಾಗಿ ಮುಚ್ಚಿಹಾಕಲು ಸಾಧ್ಯವಿಲ್ಲ. ಕೊಲೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಲೇಬೇಕಾದ ಹೊಣೆಗಾರಿಕೆ ಪೊಲೀಸರ ಮೇಲಿದೆ.
ನೇಪಾಳಿ ಮೂಲದ ಮಹಿಳೆ ಮಹಾಲಕ್ಷ್ಮಿಯನ್ನು ವಯ್ಯಾಲಿಕಾವಲ್ನ ಆಕೆಯ ಮನೆಯಲ್ಲಿಯೇ ರಂಜನ್ ಕೊಲೆ ಮಾಡಿ ಮೃತದೇಹವನ್ನು 59 ಪೀಸ್ ಮಾಡಿ ಫ್ರಿಡ್ಜ್ನಲ್ಲಿ ತುಂಬಿ ಪರಾರಿಯಾಗಿದ್ದ. ಸೆಪ್ಟೆಂಬರ್ 3 ರಂದು ಹತ್ಯೆ ಮಾಡಿದ್ದ ಆರೋಪಿ ಅಂದೇ ತನ್ನ ಊರು ಒಡಿಶಾಗೆ ಪರಾರಿಯಾಗಿದ್ದ.
ಪ್ರಕರಣ ಬೆಳಕಿಗೆ ಬಂದ ಮೇಲೆ ಪೊಲೀಸರ ತಂಡ ಒಡಿಶಾಗೆ ತೆರಳಿದೆ. ಈ ನಡುವೆ ತನ್ನ ಮನೆಯವರೊಂದಿಗೆ ರಾತ್ರಿ ಊಟ ಮಾಡಿದ್ದ ಆರೋಪಿ ಮನೆಯ ಬಳಿಯಿರುವ ಸ್ಮಶಾನದಲ್ಲಿ ನೇಣಿಗೆ ಶರಣಾಗಿದ್ದಾನೆ. ಡೆತ್ ನೋಟ್ನಲ್ಲಿ ತಾನೇ ಮಹಾಲಕ್ಷ್ಮಿ ಹತ್ಯೆ ಮಾಡಿದ್ದಾಗಿ ಹೇಳಿದ್ದಾನೆ. ಆದರೆ ಅಷ್ಟಕ್ಕೇ ಈ ಪ್ರಕರಣ ಕ್ಲೋಸ್ ಆಗಲ್ಲ.
ಪೊಲೀಸರಿಗೆ ಈಗಲೇ ನಿಜವಾದ ಸಮಸ್ಯೆ ಎದುರಾಗಿದೆ. ಆರೋಪಿ ಬದುಕಿದ್ದರೆ ಆತನ ಬಳಿಯಿಂದಲೇ ಸತ್ಯ ಬಾಯಿ ಬಿಡಿಸಬಹುದಿತ್ತು. ಆದರೆ ಈಗ ಆತನೂ ತೀರಿಕೊಂಡಿರುವುದರಿಂದ ಸಾಬೀತುಪಡಿಸುವುದೇ ಕಷ್ಟವಾಗಿದೆ.
ಅಲ್ಲದೆ, ಕೊಲೆಯಲ್ಲಿ ಇನ್ನೂ ಬೇರೆಯವರಿದ್ದಾರಾ ಎಂಬುದನ್ನೂ ಕಂಡುಹಿಡಿಯಬೇಕಿದೆ. ಹೀಗಾಗಿ ಆರೋಪಿ ಸಾವನ್ನಪ್ಪಿರುವುದರಿಂದ ಪೊಲೀಸರಿಗೆ ಹೊಸ ತಲೆನೋವುಗಳು ಶುರುವಾಗಿವೆ.
ರೀಲ್ಸ್ ಮಾಡಲು ಓಡುತ್ತಿದ್ದ ರೈಲಿನ ಮೇಲೆ ಸಾಹಸ, ಯುವಕನಿಗೆ ವಿದ್ಯುತ್ ಶಾಕ್, ಗಂಭೀರ ಗಾಯ, ವೈರಲ್ ವಿಡಿಯೋ ನೋಡಿ