newsics. com
ಬೆಂಗಳೂರು: ಮಂತ್ರಾಲಯದಲ್ಲಿ ಗುರುವಾರ ಬೆಳಗ್ಗೆ ಸಾಮಾನ್ಯ ಭಕ್ತರ ಸಾಲಿನಲ್ಲಿ ದರ್ಶನ್ ಪತ್ನಿ ಕಾಣಿಸಿಕೊಂಡಿದ್ದರು.
ಬುಧವಾರ ರಾತ್ರಿಯೇ ಮಂತ್ರಾಲಯಕ್ಕೆ ಬಂದಿಳಿದಿದ್ದ ವಿಜಯಲಕ್ಷ್ಮಿ ಹಾಗೂ ದರ್ಶನ್ ಸೋದರ ದಿನಕರ್ ಪ್ರಹ್ಲಾದರಾಜರಿಗೆ ಪಾದಪೂಜೆ ಮಾಡಿದ್ದರು.
ಪ್ರಹ್ಲಾದರಾಜರಿಗೆ ಪಾದಪೂಜೆ ಸೇವೆ ಮಾಡಿದರೆ ಒಳಿತಾಗುತ್ತೆ ಎಂಬ ನಂಬಿಕೆ ಇದೆ. ಪತಿ ದರ್ಶನ್ ಗೆ ಬಂದೊದಗಿರುವ ಕಷ್ಟಗಳು ದೂರಾಗಲಿ ಎಂದು ರಾಯರ ಮೊರೆ ಹೋಗಿದ್ದಾರೆ ವಿಜಯಲಕ್ಷ್ಮಿ. ಮಠದವರಿಗೂ ಮಾಹಿತಿ ನೀಡದೇ ಬಂದು ಹೋಗಿರುವ ದರ್ಶನ್ ಪತ್ನಿ. ಜನ ಸಾಮಾನ್ಯರಂತೆ ಸೇವಾ ಟಿಕೆಟ್ ಮೂಲಕವೇ ರಾಯರ ದರ್ಶನ ಪಡೆದಿದ್ದಾರೆ.
ತಮ್ಮ ಪತಿಯನ್ನು ಕಾನೂನಿನ ಯುದ್ಧದ ಮೂಲಕ ಉಳಿಸಿಕೊಳ್ಳಲು ರಾಯರ ಪಾದವನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾರೆ