Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಚಹಾಕ್ಕೆ ಈ 3 ಪದಾರ್ಥಗಳನ್ನ ಸೇರಿಸೋದ್ರಿಂದ ಅದ್ಭುತ ಸುವಾಸನೆ, ರುಚಿ ಸಿಗುತ್ತದೆ
ಲೈಫ್‌ಸ್ಟೈಲ್

ಚಹಾಕ್ಕೆ ಈ 3 ಪದಾರ್ಥಗಳನ್ನ ಸೇರಿಸೋದ್ರಿಂದ ಅದ್ಭುತ ಸುವಾಸನೆ, ರುಚಿ ಸಿಗುತ್ತದೆ

Share
3 Min Read
SHARE

newsics.com/ನ್ಯೂಸಿಕ್ಸ್

ನಮ್ಮ ದೇಶದಲ್ಲಿ ಅನೇಕರು ಚಹಾ ಪ್ರಿಯರಿದ್ದಾರೆ. ಅದೆಷ್ಟೋ ಜನರ ಬೆಳಗು ಆರಂಭವಾಗುವುದೇ ಒಂದು ಕಪ್‌ ಚಹಾದಿಂದ. ಆದರೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯಬಾರದು..ಜಾಸ್ತಿ ಚಹಾ ಕುಡಿಯಬಾರದು ಎಂಬುದೂ ಆರೋಗ್ಯದ ದೃಷ್ಟಿಯಿಂದ ಅಷ್ಟೇ ಸತ್ಯ. ಚಹಾ ತುಂಬ ಕುಡಿದರೆ ಆಮ್ಲೀಯತೆ ಆಗುತ್ತದೆ ಎಂದು ಹೇಳಲಾಗುತ್ತದೆ.

ಚಹಾ ಮಾತ್ರವಲ್ಲ, ಯಾವುದನ್ನೂ ಅತಿಯಾಗಿ ಸೇವನೆ ಮಾಡಬಾರದು. ಅತಿಯಾದರೆ ಅಮೃತವೂ ವಿಷ ಎಂಬ ಒಂದು ಗಾದೆಯಿದೆ. ಅದರಂತೆ ಚಹಾ ಕೂಡ ಅತಿಯಾದ ಸೇವನೆ ಒಳ್ಳೆಯದಲ್ಲ.

ದಿನಕ್ಕೆ ಎರಡರದಿಂದ ಮೂರು ಕಪ್‌ ಚಹಾ ಕುಡಿಯಬಹುದು. ಆದರೆ ಎಂದಿಗೂ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಡಿ ಎನ್ನುತ್ತಾರೆ. ವೈದ್ಯರು. ಚಹಾದಲ್ಲಿ ಉತ್ಕರ್ಷಣ ನಿರೋಧಕ ಅಂಶಗಳಿರುತ್ತವೆ. ನೀವು ಚಹಾ ಪ್ರಿಯರೇ ಆಗಿದ್ದಲ್ಲಿ, ಪ್ರತಿದಿನವೂ ಚಹಾ ಕುಡಿಯಲೇಬೇಕು ಎಂದಿದ್ದರೆ, ಸಾದಾ ಚಹಾ ಮಾಡಿಕೊಳ್ಳುವ ಬದಲು ಈ 3 ಪದಾರ್ಥಗಳನ್ನು ನಿಮ್ಮ ಚಹಾಕ್ಕೆ ಸೇರಿಸಿದಾಗ ಈ ಪ್ರಯೋಜನಗಳು ಮತ್ತಷ್ಟು ಹೆಚ್ಚಾಗುತ್ತವೆ. ಚಹಾವನ್ನು ಆರೋಗ್ಯಕರವಾಗಿಸಲು ವೈದ್ಯರು ಕೆಲವು ಸಲಹೆಗಳನ್ನು ಸಹ ಹಂಚಿಕೊಂಡಿದ್ದಾರೆ.

ಶುಂಠಿಯನ್ನ ಸೇರಿಸಿ..

ನೀವು ಪ್ರತಿದಿನ ಮಾಡುವ ಚಹಾದಲ್ಲಿ ಶುಂಠಿಯನ್ನ ಸೇರಿಸಿ. ಇದನ್ನ ಶಿಫಾರಸ್ಸು ಮಾಡಿದವರು ಡಾ. ಸಲೀಂ ಜೈದಿ ಎಂಬುವವರು. ಶುಂಠಿಯು ಉರಿಯೂತ ನಿವಾರಕ ಗುಣಗಳಿಂದ ಸಮೃದ್ಧವಾಗಿದೆ, ಇದು ಉರಿಯೂತ ಮತ್ತು ಕೀಲು ನೋವನ್ನು ಕಡಿಮೆ ಮಾಡಲು, ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಶುಂಠಿ ಚಹಾವನ್ನು ಕುಡಿಯುವುದರಿಂದ ತೂಕ ಇಳಿಸಿಕೊಳ್ಳಲು ಮತ್ತುವಾಕರಿಕೆ ಮತ್ತು ಇತರ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ದಾಲ್ಚಿನ್ನಿ

ವೈದ್ಯರು ನಿಮ್ಮ ಚಹಾಕ್ಕೆ ಒಂದು ತುಂಡು ದಾಲ್ಚಿನ್ನಿ ಸೇರಿಸಲು ಶಿಫಾರಸು ಮಾಡುತ್ತಾರೆ. ದಾಲ್ಚಿನ್ನಿ ಆಹಾರದ ಸುವಾಸನೆ ಮತ್ತು ರುಚಿಯನ್ನು ಹೆಚ್ಚಿಸಲು ಬಳಸುವ ಭಾರತೀಯ ಮಸಾಲೆಯಾಗಿದೆ. ದಾಲ್ಚಿನ್ನಿ ಚಹಾ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ದೇಹವು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುವ ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ. ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ದಾಲ್ಚಿನ್ನಿ ಸಹ ಪ್ರಯೋಜನಕಾರಿಯಾಗಿದೆ.

ಹಸಿರು ಏಲಕ್ಕಿ

ನೀವು ನಿಮ್ಮ ಚಹಾಕ್ಕೆ ಹಸಿರು ಏಲಕ್ಕಿಯನ್ನೂ ಹಾಕಬಹುದು. ಇದು ಚಹಾಕ್ಕೆ ಪರಿಮಳ ನೀಡೋದಲ್ಲದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ನರಗಳನ್ನು ಬಲಪಡಿಸುತ್ತದೆ. ಇದು ನಿಮ್ಮ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ.

ಎಷ್ಟು ಪ್ರಮಾಣವನ್ನು ಚಹಾಕ್ಕೆ ಸೇರಿಸಬೇಕು?

ವೈದ್ಯರ ಪ್ರಕಾರ, ನೀವು ಒಂದು ಕಪ್ ಚಹಾ ಮಾಡುತ್ತಿದ್ದರೆ, ಅರ್ಧ ಟೀ ಚಮಚ ತುರಿದ ಶುಂಠಿ ಮತ್ತು 1/4 ಟೀ ಚಮಚ ದಾಲ್ಚಿನ್ನಿ ಪುಡಿಯನ್ನು ಸೇರಿಸಿ. ನೀವು ಹಸಿರು ಏಲಕ್ಕಿಯನ್ನು ಕೂಡ ಸೇರಿಸುತ್ತಿದ್ದರೆ, ಒಂದನ್ನು ಪುಡಿಮಾಡಿ ಸೇರಿಸಿ. ಪ್ರತಿದಿನವೂ ನೀವಿದನ್ನ ಸೇರಿಸಿಕೊಂಡು ಕುಡಿಯಬಹುದು. ಇಲ್ಲವೇ, ವಾರದಲ್ಲಿ 2-3 ದಿನ ಕೂಡ ಹೀಗೆ ಚಹಾ ಮಾಡಿಕೊಂಡು ಕುಡಿಯಬಹುದು.

ಚಹಾ ತಯಾರಿಸಲು, ಮೊದಲು ಒಂದು ಪಾತ್ರೆಯಲ್ಲಿನೀರನ್ನು ಸುರಿಯಿರಿ, ಈ ಮೂರು ಪದಾರ್ಥಗಳನ್ನು ಸೇರಿಸಿ, ನಂತರ ಕುದಿಸಲು ಪ್ರಾರಂಭಿಸಿ. ನೀರು ಕುದಿಯಲು ಪ್ರಾರಂಭಿಸಿದ ನಂತರವೇ ಹಾಲು ಸೇರಿಸಿ. ಕಡಿಮೆ ಉರಿಯಲ್ಲಿ ದೀರ್ಘಕಾಲ ಚಹಾವನ್ನು ಬೇಯಿಸಿದಾಗ, ಅದು ದೇಹಕ್ಕೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇನ್ನು ನೀವು ಚಹಾಕ್ಕೆ ಸಕ್ಕರೆಯ ಬದಲು ಬೆಲ್ಲವನ್ನ ಸೇರಿಸಿಕೊಂಡರೆ ಆರೋಗ್ಯಕ್ಕೆ ಇನ್ನೂ ಒಳ್ಳೆಯದು. ಸಕ್ಕರೆ ದೇಹಕ್ಕೆ ಒಳ್ಳೆಯದಲ್ಲ. ದುರ್ಬಲ ಚಹಾ ಕುಡಿಯುವ ಅಭ್ಯಾಸವನ್ನು ಬೆಳೆ ಸಿಕೊಳ್ಳುವುದು ಉತ್ತಮ. ದಿನಕ್ಕೆ 1-2 ಕಪ್ ಮಾತ್ರ ಚಹಾ ಕುಡಿಯಲು ಪ್ರಯತ್ನಿಸಿ. ನೀವು ಕುಡಿಯಬಹುದಾದ ಗರಿಷ್ಠ ನಾಲ್ಕು ಕಪ್. ಅದಕ್ಕಿಂತ ಹೆಚ್ಚಿಗೆ ಕುಡಿಯುವುದು ದೇಹಕ್ಕೆ ಹಾನಿಕಾರಕ. ಊಟವಾದ ತಕ್ಷಣ ಚಹಾ ಕುಡಿಯುವುದನ್ನು ತಪ್ಪಿಸಿ, ಏಕೆಂದರೆ ಇದು ಕಬ್ಬಿಣದಂತಹ ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ

ಇನ್ನೆರಡು ದಿನದಲ್ಲಿ ಗೃಹಲಕ್ಷ್ಮಿ ಅರ್ಜಿ ಆರಂಭ, ಈ ದಾಖಲೆಗಳು ರೆಡಿ ಇರಲಿ

Share This Article
Facebook Twitter Copy Link Print
Previous Article ಇನ್ನೆರಡು ದಿನದಲ್ಲಿ ಗೃಹಲಕ್ಷ್ಮಿ ಅರ್ಜಿ ಆರಂಭ, ಈ ದಾಖಲೆಗಳು ರೆಡಿ ಇರಲಿ
Next Article ₹30 ಲಕ್ಷ ಸಾಲವೇ ಸಾವಿನ ಕಾರಣ? ಕೆಆರ್ ಪುರಂ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

Popular Posts

ಕಾಡಿದ ಖಿನ್ನತೆ: ಜೀವ ಕಳೆದುಕೊಂಡ ಯುವ ನಿರ್ದೇಶಕ ಮಂಜುನಾಥ್

1 Min Read

AI ಬಳಸಿ ಸ್ಪರ್ಧಿಗಳನ್ನೇ ಅಳಿಸಿದ ಅಭ್ಯರ್ಥಿ! ಸರ್ಕಾರಿ ಉದ್ಯೋಗಕ್ಕಾಗಿ RPSC ಪೋರ್ಟಲ್ ಹ್ಯಾಕ್

1 Min Read

‘ಈಥಾ’ ಟೀಸರ್ ರಿಲೀಸ್: ಲಾವಣಿ ದಂತಕಥೆ ವಿಠಾಬಾಯಿ ಪಾತ್ರದಲ್ಲಿ ಶ್ರದ್ಧಾ ಕಪೂರ್ ಮಿಂಚು!

1 Min Read

ಮೊದಲು ಬೆಂಗಳೂರು ಇಷ್ಟವಾಗಿರಲಿಲ್ಲ, ಈಗ ಬಿಡಲು ಮನಸ್ಸೇ ಆಗುತ್ತಿಲ್ಲ; ಯುವತಿಯ ಭಾವನಾತ್ಮಕ ಪೋಸ್ಟ್ ವೈರಲ್

1 Min Read

You Might Also Like

Uncategorizedಲೈಫ್‌ಸ್ಟೈಲ್

50 ಮೊಟ್ಟೆ ತಿನ್ನುವ ಚಾಲೆಂಜ್‌ ಸ್ವೀಕರಿಸಿದ್ದ ವ್ಯಕ್ತಿ ಸಾವು! 42ನೇ ಮೊಟ್ಟೆ ತಿಂದ ಬಳಿಕ ಕುಸಿದು ಬಿದ್ದು ದುರಂತ

1 Min Read
ಲೈಫ್‌ಸ್ಟೈಲ್

ನಿತ್ಯ ಬೀಟ್​ರೂಟ್​ ಜ್ಯೂಸ್​​​ ಕುಡಿಯೋದ್ರಿಂದ ಎಷ್ಟೆಲ್ಲ ಲಾಭವಿದೆ?

2 Min Read
ಲೈಫ್‌ಸ್ಟೈಲ್

ನಿಮ್ಮ ಕಿಚನ್ ಸಿಂಕ್‌ನಿಂದ ಬ್ಯಾಡ್ ಸ್ಮೆಲ್ ಬರ್ತಿದ್ಯಾ? ಈ ಸೀಕ್ರೆಟ್ ಟ್ರಿಕ್ ಬಳಸಿ

2 Min Read
ಲೈಫ್‌ಸ್ಟೈಲ್

ಯಾವ ಸಮಯದಲ್ಲಿ ಕಾಫಿ ಕುಡಿಯುವುದು ಉತ್ತಮ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?