newsics.com/ನ್ಯೂಸಿಕ್ಸ್
ಬೆಂಗಳೂರಿನ ಕಾಡುಗೋಡಿ ಠಾಣೆ ವ್ಯಾಪ್ತಿಯಲ್ಲಿ 5 ವರ್ಷದ ಮಗುವಿನ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ಮಗು ಕೊಲೆ ಕೇಸಲ್ಲಿ ಲಾಕ್ ಆಗಿರುವ ಆರೋಪಿ ಮೋಹನ್ ತಪ್ಪೊಪ್ಪಿಕೊಂಡಿದ್ದಾನೆ. ಕಾಲಿನಿಂದ ಮಗುವಿನ ಹೊಟ್ಟೆ ಭಾಗಕ್ಕೆ ಕಾರಿನಲ್ಲೇ ಬಲವಾಗಿ ಒದ್ದು ಬಳಿಕ ಉಸಿರುಗಟ್ಟಿಸಿ ಕೊಂದು ಹಾಕಿದ್ದಾನೆ.
ಮಾರ್ಚ್ 21 ಎಂದು ಮೋಹನ್ ಮತ್ತು ಪ್ರಿಯಾಂಕ ಮಧುರೈಗೆ ಮೂರು ದಿನಗಳ ಕಾಲ ದೇವಸ್ಥಾನಗಳ ಟ್ರಿಪ್ ಹೋಗಿದ್ದರು, 24 ನೇ ತಾರೀಖು ಬೆಂಗಳೂರಿಗೆ ವಾಪಸ್ ಆಗಿದ್ದರು.ಇಂದಿರಾನಗರದಲ್ಲಿ ರಾತ್ರಿ ಎಂಟು ಗಂಟೆ ವೇಳೆಗೆ ಪ್ರಿಯಾಂಕ ಶಾಪಿಂಗ್ ಹೋಗಿದ್ದಾರೆ. ಮೋಹನ್ ಹಾಗೂ ಮಗು ವೆನ್ನಿಲ್ಲಾ ಆಗ ಕಾರಿನಲ್ಲೇ ಇದ್ದರು. ಈ ವೇಳೆ ಮೃತ ವೆನ್ನಿಲಾ ಮೋಹನ್ ಬಳಿ ಐಸ್ ಕ್ರೀಂ ಬೇಕು ಅಂತಾ ಕೇಳಿದ್ದಾಳೆ. ಮಗು ಕೇಳಿದ್ದಕ್ಕೆ ಮೋಹನ್ ಐಸ್ ಕ್ರೀಂ ತಂದು ಕೊಟ್ಟಿದ್ದಾನೆ.
ಆದ್ರೆ ಈ ಐಸ್ ಕ್ರೀಂ ಬೇಡ ಬೇರೆ ಬೇಕೆಂದು ಪಟ್ಟು ಹಿಡಿದು ಮಗು ಅಳಲು ಶುರುಮಾಡಿದೆ. ಈ ವೇಳೆ ಸಿಟ್ಟಿಗೆದ್ದು ಮೋಹನ್ ಮಗುವಿನ ಮೇಲೆ ಹಲ್ಲೆ ಮಾಡಿದ್ದಾನೆ. ಕಾಲಿನಿಂದ ಮಗುವಿನ ಹೊಟ್ಟೆ ಭಾಗಕ್ಕೆ ಬಲವಾಗಿ ಒದ್ದಿದ್ದಾನೆ. ಈ ವೇಳೆ ಜೋರಾಗಿ ಕಿರುಚಾಡಿ ಒದ್ದಾಡಿದ್ದ ಮಗು ವೆನ್ನಿಲಾಳ ಮೋಹನ್ ಬಾಯಿಯನ್ನ ಎರಡೂ ಕೈಯಲ್ಲಿ ಪ್ರೆಸ್ ಮಾಡಿ ಇಟ್ಟುಕೊಂಡಿದ್ದು, ಉಸಿರಾಟವಾಡದೆ ಮಗು ಸಾವನ್ನಪ್ಪಿದೆ.
ಕಾರಿನಲ್ಲಿ ಮಗು ಸಾವನ್ನಪ್ಪಿದ ಬಳಿಕ ಆಗ ಶಾಪಿಂಗ್ ಮುಗಿಸಿ ಕಾರಿನ ಬಳಿ ವಾಪಸ್ ಬಂದ ಪ್ರಿಯಾಂಕಾಗಳಿಗೆ ಆರೋಪಿ ಮೋಹನ್ ನಡೆದ ವಿಚಾರವನ್ನು ಹೇಳಿ ಆಕಸ್ಮಿಕವಾಗಿ ನಡೆದೋಯ್ತು ಅಂತ ಕಥೆ ಕಟ್ಟಿದ್ದಾನೆ. ಆ ಬಳಿಕ ಮಗುವನ್ನು ಸೀದಾ ಕಾರಿನಲ್ಲಿ ಕಾಡುಗೋಡಿಯ ವಿಲ್ಲಾಗೆ ಕರೆದೊಯ್ದಿದ್ದಾರೆ. ಮಗು ಮಲಗಿರೋ ರೀತಿ ಭುಜದ ಮೇಲೆ ಮಲಗಿಸಿಕೊಂಡು ವಿಲ್ಲಾ ಒಳಗೆ ಹೋಗಿದ್ದಾರೆ. ರಾತ್ರಿ ಪ್ರಿಯಾಂಕ ಮತ್ತು ಮೋಹನ್ ಪ್ಲಾನ್ ಮಾಡಿ ರಾತ್ರಿಯೆಲ್ಲಾ ಮನೆಯಲ್ಲೇ ಮಲಗಿಸಿ ಒಳಸಂಚು ರೂಪಿಸಿದ್ದಾರೆ
ಬೆಳಗ್ಗೆ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಮಲಗಿದ್ದ ಮಗು ಎದ್ದಿಲ್ಲ, ಮೆಟ್ಟಿಲ ಮೇಲಿಂದ ಬಿದ್ದಿತ್ತು, ಮಲಗಿಸಿದ್ದೇವು ಅಂತ ಆಸ್ಪತ್ರೆಯಲ್ಲಿ ಕಥೆ ಕಟ್ಟಿದ್ದಾರೆ. ಮಗು ಮೃತಪಟ್ಟಿದೆ ಎಂದು ವೈದ್ಯರು ಹೇಳ್ತಿದ್ದಂತೆ ಪ್ರಿಯಾಂಕ ಗೋಳಾಡಿ ಹೈಡ್ರಾಮಾ ಕೂಡ ಮಾಡಿದ್ದಳಂತೆ, ಆ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಅಂತ್ಯಕ್ರಿಯೆ ಮಾಡಿದ್ದರು.