newsics.com/ನ್ಯೂಸಿಕ್ಸ್
ಅಯೋಧ್ಯೆಯ ಸಾರ್ವಜನಿಕ ಉದ್ಯಾನವನವೊಂದರಲ್ಲಿ ಅಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕೇಸರಿ ಉಡುಪು ಧರಿಸಿದ್ದ ಪುರುಷರ ಗುಂಪೊಂದು ಯುವ ಜೋಡಿಯನ್ನು ಅಟ್ಟಾಡಿಸಿ ಹೊಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ಹಲ್ಲೆಯ ಘಟನೆ ನಡೆದಿರುವ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೊದಲ್ಲಿ ಸಂತರ ಉಡುಪಿನಲ್ಲಿರುವ ನಾಲ್ವರು ಪುರುಷರು ಉದ್ಯಾನವನದೊಳಗೆ ಕುಳಿತಿದ್ದ ಯುವಕ ಮತ್ತು ಯುವತಿಯನ್ನು ಅಟ್ಟಾಡಿಸುತ್ತಿರುವುದು ಸೆರೆಯಾಗಿದೆ.
ಅಯೋಧ್ಯೆಯ ತುಳಸಿ ಉದ್ಯಾನವನದಲ್ಲಿ ಈ ಘಟನೆ ನಡೆದಿದೆ. ಯುವಕ- ಯುವತಿ ಇಬ್ಬರು ಉದ್ಯಾನವನದಲ್ಲಿ ಕುಳಿತುಕೊಂಡು ಮಾತನಾಡುತ್ತಿದ್ದರು. ಇದನ್ನು ಗಮನಿಸಿದ ಸಾಧುಗಳ ವೇಷದಲ್ಲಿದ್ದ ನಾಲ್ವರು ಪುರುಷರು ಇವರನ್ನು ಪ್ರಶ್ನಿಸಿದ್ದಾರೆ. ಬಳಿಕ ಇವರ ನಡುವೆ ಮಾತಿನ ಚಕಮಕಿ ನಡೆದಿದ್ದು ಕೇಸರಿ ಉಡುಪು ಧರಿಸಿದ್ದ ಪುರುಷರು ಈ ಜೋಡಿ ಮೇಲೆ ಹಲ್ಲೆ ನಡೆಸಿದೆ.
ಪರಿಸ್ಥಿತಿ ಉಲ್ಬಣಗೊಳ್ಳುತ್ತಿದ್ದಂತೆ ಜೋಡಿ ಉದ್ಯಾನವನದ ಮುಖ್ಯ ದ್ವಾರದ ಕಡೆಗೆ ಓಡಿಹೋಗಲು ಪ್ರಯತ್ನಿಸಿದೆ. ಅದಾಗ್ಯೂ ದಾಳಿಕೋರರು ಅವರನ್ನು ಬೆನ್ನಟ್ಟಿದ್ದು ಆವರಣದ ಹೊರಗೆಯೂ ಸರಿಯಾಗಿ ಥಳಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಉದ್ಯಾನವನದಿಂದ ಹೊರಬಂದ ನಂತರವೂ ಯುವಕನ ಮೇಲೆ ಪದೇ ಪದೆ ಹಲ್ಲೆ ನಡೆದಿದೆ.
https://x.com/ashishpaswan0/status/2062714727705510095?ref_src=twsrc%5Etfw%7Ctwcamp%5Etweetembed%7Ctwterm%5E2062714727705510095%7Ctwgr%5E283881fd9103f66cf6121a7befe53bd983b0044a%7Ctwcon%5Es1_c10&ref_url=https%3A%2F%2Fapi-news.dailyhunt.in%2F