newsics.com
ನವದೆಹಲಿ: ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ಸುಪ್ರೀಂ ಕೋರ್ಟ್ ಗುಡ್ ನ್ಯೂಸ್ ನೀಡಿದೆ. ಮೊದಲ ಭಾರಿಗೆ ಅಪರಾಧ ಎಸಗಿದಂತ ಕೈದಿಗಳು ಶಿಕ್ಷೆಯ ಪ್ರಮಾಣದ ಮೂರನೇ ಒಂದರಷ್ಟು ಶಿಕ್ಷೆ ಅನುಭವಿಸಿದ್ರೆ, ಅಂತವರನ್ನು ಜಾಮೀನಿನ ಮೇಲೆ ಬಿಡುಗಡೆಗೆ ಕ್ರಮ ಕೈಗೊಳ್ಳಿ ಎಂದು ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್)ಯ ಸೆಕ್ಷನ್ 479 ಪೂರ್ವಾನ್ವಯ ಆಗುವಂತೆ ಸುಪ್ರೀಂ ಕೋರ್ಟ್ ಜಾರಿ ಮಾಡಿದೆ. ಇದರಿಂದ ಮೊದಲ ಬಾರಿಗೆ ಅಪರಾಧ ಎಸಗಿ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳನ್ನ ಬಿಡುಗಡೆ ಮಾಡಬಹುದು. ಈಗಾಗಲೇ ಶಿಕ್ಷೆಯ ಪ್ರಮಾಣದ ಮೂರನೇ ಒಂದರಷ್ಟು ಶಿಕ್ಷೆ ಅನುಭವಿಸಿದ್ರೆ, ಜಾಮೀನಿನ ಮೇಲೆ ಬಿಡುಗಡೆಗೆ ಕ್ರಮ ಕೈಗೊಳ್ಳಿ ಎಂದು ದೇಶಾದ್ಯಂತ ಇರುವ ಜೈಲುಗಳ ಸೂಪರಿಂಟೆಂಡ್ಳಿಗೆ ಸೂಚನೆ ನೀಡಲಾಗಿದೆ.
ಶಿಕ್ಷೆಯ ಅವಧಿ 3ನೇ ಒಂದರಷ್ಟು ಜೈಲು ಶಿಕ್ಷೆ ಅನುಭವಿಸಿದ್ರೆ, ಈ ದೀಪಾವಳಿಯನ್ನು ಅವರ ಕುಟುಂಬದ ಜೊತೆ ಆಚರಿಸಲಿ. ಮುಂದಿನ 2 ತಿಂಗಳೊಳಗಾಗಿ ಈ ಮಾನದಂಡ ಪೂರೈಸಿದವರ ಬಿಡುಗಡೆಗೆ ಕೋರ್ಟ್ಗೆ ಅರ್ಜಿ ಸಲ್ಲಿಸಿ. ಬಳಿಕ ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆಗೆ ಈ ವರದಿ ಸಲ್ಲಿಸಿ. ಕೈದಿಗಳು ಯಾವಾಗಲೇ ಆರೆಸ್ಟ್ ಆಗಿರಲಿ, ಯಾವಾಗಲೇ ಜೈಲಿಗೆ ಹೋಗಿರಲಿ ಬಿಎನ್ಎಸ್ಎಸ್ ಸೆಕ್ಷನ್ ಪೂರ್ವಾನ್ವಯವಾಗುವಂತೆ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಹಿಮಾ ಕೊಹ್ಲಿ, ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರ ಪೀಠ ಹೇಳಿದೆ. ಇನ್ನು ಪ್ರಕರಣದ ವಿಚಾರಣೆಯನ್ನು ಆಕ್ಟೋಬರ್ ಗೆ ಸುಪ್ರೀಂ ಕೋರ್ಟ್ ಮುಂದೂಡಿದೆ.