Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Crime Case ಭೀಕರ ಕೃತ್ಯ: ಮಹಿಳೆಯನ್ನು ಕೊಂದ ಬಳಿಕ ಶವದ ಮೇಲೆ ಅತ್ಯಾಚಾರವೆಸಗಿದ ವಿಕೃತ ಕಾಮಿ ಬಂಧನ
ಪ್ರಮುಖCrimeದೇಶ

Crime Case ಭೀಕರ ಕೃತ್ಯ: ಮಹಿಳೆಯನ್ನು ಕೊಂದ ಬಳಿಕ ಶವದ ಮೇಲೆ ಅತ್ಯಾಚಾರವೆಸಗಿದ ವಿಕೃತ ಕಾಮಿ ಬಂಧನ

Share
2 Min Read
SHARE

newsics.com | ನ್ಯೂಸಿಕ್ಸ್

Contents
https://youtube.com/shorts/l5ola2ZbKBY?si=HLzDOO-WOUEI5JJwಸಾಕ್ಷ್ಯ ನಾಶಕ್ಕೆ ಶವ ತುಂಡರಿಸಿದ ಪಾಪಿ

ರಾಯಪುರ: 50 ವರ್ಷದ ಮಹಿಳೆಯೊಬ್ಬರನ್ನು ಭೀಕರವಾಗಿ ಹತ್ಯೆಗೈದು, ಆಕೆಯ ಶವದ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವಿಕೃತ ಕಾಮಿಯನ್ನು ಪೊಲೀಸರು ಬಂಧಿಸಿರುವ ಘಟನೆ ಛತ್ತೀಸ್ ಗಢದ ಬೆಮೆತಾರಾ ಜಿಲ್ಲೆಯಲ್ಲಿ ನಡೆದಿದೆ. ಸೋನ್ಪುರಿ ಗ್ರಾಮದ ನಿವಾಸಿ, 42 ವರ್ಷದ ರಾಮಪ್ರಸಾದ್ ಸೋನ್ವಾನಿ ಬಂಧಿತ ಆರೋಪಿ.

https://youtube.com/shorts/l5ola2ZbKBY?si=HLzDOO-WOUEI5JJw

ಜುಲೈ 6ರ ತಡರಾತ್ರಿ ಆರೋಪಿ ರಾಮಪ್ರಸಾದ್ ಮಹಿಳೆಯ ಮನೆಗೆ ಅಕ್ರಮವಾಗಿ ನುಗ್ಗಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ತೀವ್ರವಾಗಿ ಪ್ರತಿರೋಧ ತೋರಿದ್ದರಿಂದ ರೊಚ್ಚಿಗೆದ್ದ ಆತ, ಗುದ್ದಲಿಯಿಂದ ತಲೆಗೆ ಹೊಡೆದು ಆಕೆಯನ್ನು ಕೊಲೆ ಮಾಡಿದ್ದಾನೆ. ಆದರೆ, ಕೊಲೆಯ ಬಳಿಕ ಆರೋಪಿಯ ವಿಕೃತ ಮನಸ್ಸು ಜಾಗೃತಗೊಂಡಿದೆ. ಮೃತದೇಹದೊಂದಿಗೆ ಕಾಮ ತೀರಿಸಿಕೊಳ್ಳುವ ‘ನೆಕ್ರೋಫಿಲಿಯಾ’ (Necrophilia) ಎಂಬ ಮಾನಸಿಕ ವಿಕೃತಿಯಿಂದ ಬಳಲುತ್ತಿದ್ದ ಈತ, ಮಹಿಳೆಯ ನಿರ್ಜೀವ ದೇಹದ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ.

ಸಾಕ್ಷ್ಯ ನಾಶಕ್ಕೆ ಶವ ತುಂಡರಿಸಿದ ಪಾಪಿ

ಅಷ್ಟಕ್ಕೇ ನಿಲ್ಲದ ಈತನ ರಾಕ್ಷಸಿ ಪ್ರವೃತ್ತಿ, ಕೃತ್ಯದ ಸಾಕ್ಷ್ಯವನ್ನು ನಾಶಪಡಿಸಲು ಗರಗಸ ತಂದು ಶವವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ. ಕತ್ತರಿಸಿದ ದೇಹದ ಭಾಗಗಳೊಂದಿಗೂ ಮತ್ತೆ ವಿಕೃತ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ರಾತ್ರಿಯಿಡೀ ಶವದ ಭಾಗಗಳನ್ನು ತನ್ನ ಗುಡಿಸಲಿನಲ್ಲೇ ಇಟ್ಟುಕೊಂಡಿದ್ದ ಆರೋಪಿ, ಮರುದಿನ ರಾತ್ರಿ ಅವುಗಳನ್ನು ಬಟ್ಟೆಯಲ್ಲಿ ಸುತ್ತಿ ಶಿವನಾಥ್ ನದಿಗೆ ಹರಿಯುವ ಅಮರಯ್ಯ ಹೊಳೆಗೆ ಎಸೆದು ಪರಾರಿಯಾಗಿದ್ದ. ಹೊಳೆಯಲ್ಲಿ ತೇಲಿಬಂದ ಶವದ ಭಾಗಗಳನ್ನು ಕಂಡು ಮಹಿಳೆಯ ಮಗ ಪೊಲೀಸರಿಗೆ ದೂರು ನೀಡಿದಾಗ ಈ ಘೋರ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಕರಣ ದಾಖಲಾಗುತ್ತಿದ್ದಂತೆ ಎಚ್ಚೆತ್ತ ಬೆಮೆತಾರಾ ಎಸ್ಪಿ ತ್ರಿಲೋಕ್ ಬನ್ಸಾಲ್ ನೇತೃತ್ವದ ತಂಡ ಡ್ರೋನ್, ಶ್ವಾನ ದಳ ಹಾಗೂ ವಿಧಿವಿಜ್ಞಾನ ತಜ್ಞರ ನೆರವಿನಿಂದ ತನಿಖೆ ಚುರುಕುಗೊಳಿಸಿತ್ತು. ತಾಂತ್ರಿಕ ಪುರಾವೆಗಳ ಆಧಾರದ ಮೇಲೆ ರಾಮಪ್ರಸಾದ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.

ವಿಶೇಷವೆಂದರೆ ಈ ಆರೋಪಿ ರಾಮಪ್ರಸಾದ್ 2017 ರಲ್ಲೂ ಮತ್ತೊಬ್ಬ ಮಹಿಳೆಯ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಪುನರಾವರ್ತಿತ ಅಪರಾಧಿಯಾಗಿದ್ದಾನೆ. ಆರೋಪಿಯ ಹೇಳಿಕೆಯ ಮೇರೆಗೆ ಕೊಲೆಗೆ ಬಳಸಿದ ಗುದ್ದಲಿ ಹಾಗೂ ಶವ ಕತ್ತರಿಸಿದ ಗರಗಸವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಪ್ರಸ್ತುತ ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಕಠಿಣ ಸೆಕ್ಷನ್‌ಗಳ ಅನ್ವಯ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Landslide Alert ಭೂಕುಸಿತ ಭೀತಿ; ಮನೆ ಖಾಲಿ ಮಾಡಲು ನಿರಾಕರಿಸಿದ ನಿವಾಸಿಗಳು, ಬದಲಿ ಜಾಗಕ್ಕೆ ಪಟ್ಟು

TAGGED:#Chhattisgarh #Necrophilia #Arrested #news #newsics
Share This Article
Facebook Twitter Copy Link Print
Previous Article Landslide Alert ಭೂಕುಸಿತ ಭೀತಿ; ಮನೆ ಖಾಲಿ ಮಾಡಲು ನಿರಾಕರಿಸಿದ ನಿವಾಸಿಗಳು, ಬದಲಿ ಜಾಗಕ್ಕೆ ಪಟ್ಟು
Next Article Rain Alert ಸಿಲಿಕಾನ್ ಸಿಟಿಯಲ್ಲಿ ವರುಣನ ಆರ್ಭಟ; ಮುಂದಿನ 3-4 ದಿನ ಸಾಧಾರಣ ಮಳೆಯಾಗುವ ಸಾಧ್ಯತೆ

Popular Posts

IND vs ENG Cricket 3ನೇ ಏಕದಿನ: ಲಾರ್ಡ್ಸ್‌ನಲ್ಲಿ ಸರಣಿ ಗೆಲುವಿನ ಹೋರಾಟ – ಭಾರತಕ್ಕೆ ಸವಾಲು, ಇಂಗ್ಲೆಂಡ್‌ಗೆ ಪ್ರತಿಷ್ಠೆ

3 Min Read

Benefits of Burning Natural Fragrant Ingredients at Home ಸುಗಂಧ ಬೀರುವ ಈ ವಸ್ತುಗಳನ್ನ ಸುಟ್ಟರೆ ಏನಾಗುತ್ತೆ? ತಿಳಿಯಿರಿ ಇದರ ಪ್ರಯೋಜನಗಳು

1 Min Read

Viparita Karani Yoga Pose ವಿಪರೀತ ಕರಣಿ ಆಸನದಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ! ಆರೋಗ್ಯಕ್ಕೆ ಅದ್ಭುತ ಯೋಗಾಸನ

2 Min Read

Best Healthy Rotis  ಆರೋಗ್ಯಕ್ಕೆ ಬೆಸ್ಟ್ ಈ ರೊಟ್ಟಿಗಳು

2 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-07-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read
ದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

New love trend ಫಾಸ್ಟ್ ಫುಡ್ ಜಮಾನಾದಲ್ಲಿ ‘ಸ್ಲೋ ಡೇಟಿಂಗ್’ ಕ್ರೇಜ್! 2026ರ ಹೊಸ ಲವ್ ಟ್ರೆಂಡ್

2 Min Read
ದೇಶಪ್ರಮುಖ

Wife killed husband ವಿಮಾ ಹಣಕ್ಕಾಗಿ ಪತಿಗೆ ಹಾವಿನಿಂದ ಕಚ್ಚಿಸಿ ಕೊಂದ ಪತ್ನಿ! ಅಕ್ರಮ ಸಂಬಂಧ ಎಫೆಕ್ಟ್

4 Min Read
ಪ್ರಮುಖCrimeದೇಶ

Supreme Court ಬರೀ ಬೈಗುಳಗಳು ‘ಅಶ್ಲೀಲತೆ’ ಅಲ್ಲ: ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?