newsics.com| ನ್ಯೂಸಿಕ್ಸ್
ಬೆಂಗಳೂರು: ಸಂಪುಟ ವಿಸ್ತರಣೆಗೆ ಮೊದಲ ಹಂತದ ಕಸರತ್ತು ಮುಗಿದಿದ್ದು, ಪಕ್ಷ ಸಂಘಟನೆ ಹಾಗೂ ಮುಂಬರುವ ಚುನಾವಣೆಗಳನ್ನು ದೃಷ್ಟಿ ಯಲ್ಲಿಟ್ಟು ಹೈಕಮಾಂಡ್ ನಾಯಕರು “ನವಚೈತನ್ಯ’ದ ಸೂತ್ರ ಹೆಣೆದಿದ್ದಾರೆ.
ಸಂಪುಟದಲ್ಲಿ ಶೇ.40ರಷ್ಟು ಹಿರಿಯ ರಿದ್ದರೆ, ಶೇ.60ರಷ್ಟು ಹೊಸಬರು ಇರಬೇಕೆಂಬ ಸೂತ್ರ ಹೊಸೆದಿದ್ದು, ಸದ್ಯ 13 ಸ್ಥಾನಗಳಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ಹೊರತುಪಡಿಸಿದರೆ ಉಳಿದ 12 ಮಂದಿ ಹಳಬರೇ ಇದ್ದಾರೆ.
ಖಾಲಿ ಇರುವ 20 ಸ್ಥಾನಗಳ ಪೈಕಿ ಒಮ್ಮೆಯೂ ಸಚಿವರಾಗದ 16 ಮಂದಿಗೆ ಹಾಗೂ ಉಳಿದ 4 ಸ್ಥಾನಗಳನ್ನು ಹಿರಿಯರಿಗೆ ಕೊಟ್ಟು, “ಸಮತೋಲನದ ಸಂಪುಟ’ಕ್ಕೆೆ ಹೈಕಮಾಂಡ್ ಸಲಹೆ ನೀಡಿದೆ ಎನ್ನಲಾಗಿದೆ.
ಅದೇ ರೀತಿ “ಜಾತಿ ಸಮೀಕರಣ’ದ ಸೂತ್ರವನ್ನೂ ಹೈಕಮಾಂಡ್ ಜೋಡಿಸಿದ್ದು, 8 ಸ್ಥಾನಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಬೇಕು ಎಂದಿದೆ. ಇನ್ನುಳಿದ 12 ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಮಹಿಳಾ ಕೋಟಾದಡಿ ಭರ್ತಿ ಮಾಡಿಕೊಳ್ಳುವಂತೆ ನಿರ್ದೇಶನಗಳನ್ನು ನೀಡಲಾಗಿದೆ. ಇದರಲ್ಲೇ ಪ್ರಾದೇಶಿಕತೆಗೂ ಮನ್ನಣೆ ನೀಡಬೇಕು ಎಂಬ ಫರ್ಮಾನನ್ನೂ ಹೊರಡಿಸಿದೆ.
ಮೊದಲ ಬಾರಿ ಗೆದ್ದಿರುವ ಅನೇಕ ಶಾಸಕರೂ ಸಂಪುಟ ಸೇರುವ ಉತ್ಸಾಹದಲ್ಲಿ ಇದ್ದರು. ಆದರೆ ಇದಕ್ಕೆ ಹೈಕಮಾಂಡ್ ತಡೆ ಹಾಕಿದೆ.
ಗುರುವಾರ ರಾತ್ರಿ ವೇಣುಗೋಪಾಲ್ ನಿವಾಸದಲ್ಲಿ ಸಭೆ ಮುಗಿಸಿ ಕರ್ನಾಟಕಕ್ಕೆ ಭವನಕ್ಕೆ ಬಂದಿದ್ದ ಸಿದ್ದರಾಮಯ್ಯ ಅವರನ್ನು ಆಪ್ತಶಾಸಕರು ಭೇಟಿ ಮಾಡಿ ಸಭೆಯ ಮಾಹಿತಿ ಕೇಳಿ ಪಡೆದುಕೊಂಡರು.
ಸೂತ್ರ ಏನು?
– 20 ಸ್ಥಾನಗಳ ಪೈಕಿ 16 ಹೊಸಬರಿಗೆ, 4 ಹಿರಿಯರಿಗೆ ಅವಕಾಶ
– ಸಾಮಾನ್ಯ ವರ್ಗ, ಎಸ್ಸಿ, ಎಸ್ಟಿ, ಒಬಿಸಿ ಜತೆ ಮಹಿಳೆಯರಿಗೂ ಮಂತ್ರಿಗಿರಿ
– ಜಾತಿ ಜತೆಗೆ ಪ್ರಾದೇಶಿಕತೆ ಆಧಾರದ ಮೇಲೂ ಸಚಿವ ಸ್ಥಾನ ಹಂಚಿಕೆ
– ಮೊದಲ ಬಾರಿ ಗೆದ್ದವರಿಗೆ ಸದ್ಯಕ್ಕೆ ಮಂತ್ರಿ ಸ್ಥಾನ ಕೊಡದಿರಲು ನಿರ್ಧಾರ
ಸೋಮವಾರ ಬಳಿಕವೇ ವಿಸ್ತರಣೆ?
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನುಪಸ್ಥಿತಿಯಲ್ಲಿ ಪ್ರಾಥಮಿಕ ಹಂತದ ಕಸರತ್ತು ಮುಗಿದಿದ್ದು, ಖರ್ಗೆ ಅವರು ದಿಲ್ಲಿಗೆ ತೆರಳಿದ ಬಳಿಕ ಸೋಮವಾರದ ವೇಳೆಗೆ ಮತ್ತೂಂದು ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆಗಳಿವೆ. ಹೀಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಶುಕ್ರವಾರ ಸಂಜೆಯೇ ಬೆಂಗಳೂರಿಗೆ ಮರಳಿದ್ದು, ಸಿಎಂ ಶಿವಕುಮಾರ್ಅವರು ರಾತ್ರಿ ಹೊರಟು, ಶನಿವಾರ ಬೆಳಗಿನ ಜಾವ ಬೆಂಗಳೂರಿಗೆ ತಲುಪಿದ್ದಾರೆ. ಆದರೆ ಕೆಲವು ಸಚಿವಾಕಾಂಕ್ಷಿಗಳು ಇನ್ನೂ ದಿಲ್ಲಿಯಲ್ಲೇ ಇದ್ದು, ಕೊನೆಯ ಕ್ಷಣದ ಕಸರತ್ತು ನಡೆಸುವ ಸಿದ್ಧತೆಯಲ್ಲಿದ್ದಾರೆ.
God of money ಒಂದೇ ದಿನದಲ್ಲಿ ತಿರುಪತಿ ವೆಂಕಟರಮಣನಿಗೆ 97 ಕೋಟಿ ಕಾಣಿಕೆ!