Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > film > Actress Radha ನೀನು ಬಟ್ಟೆ ಬಿಚ್ಚಿ ನಟಿಸಿದ್ರೆ ಮಾತ್ರ ಬೆಳಿತೀಯಾ… ನಟಿ ರಾಧಾ ಭಗವತಿಗೆ ಹೀಗೊಂದು ಸಲಹೆ ಕೊಟ್ಟ ಭೂಪ!
filmಕರ್ನಾಟಕಪ್ರಮುಖ

Actress Radha ನೀನು ಬಟ್ಟೆ ಬಿಚ್ಚಿ ನಟಿಸಿದ್ರೆ ಮಾತ್ರ ಬೆಳಿತೀಯಾ… ನಟಿ ರಾಧಾ ಭಗವತಿಗೆ ಹೀಗೊಂದು ಸಲಹೆ ಕೊಟ್ಟ ಭೂಪ!

Share
3 Min Read
SHARE

newsics.com| ನ್ಯೂಸಿಕ್ಸ್

ಬಣ್ಣದಲೋಕದಲ್ಲಿ ಕಾಸ್ಟಿಂಗ್ ಕೌಚ್ ಎನ್ನುವ ಹೀನ ಸಂಸ್ಕೃತಿ ಬೇರು ಬಿಟ್ಟಿದೆ. ಇವತ್ತಿಗೂ ಸಾಕಷ್ಟು ನಟಿಯರು ತಮಗಾದ ಕಹಿ ಅನುಭವಗಳನ್ನು ಬಿಚ್ಚಿಡುತ್ತಿದ್ದಾರೆ.

‘ಅಮೃತಧಾರೆ’ ಹಾಗೂ ‘ಭಾರ್ಗವಿ LLB’ ಧಾರಾವಾಹಿಯ ಖ್ಯಾತಿಯ ನಟಿ ರಾಧಾ ಭಗವತಿ ಕೂಡ ಇಂತಹ ಕಹಿ ಘಟನೆಗಳನ್ನು ಎದುರಿಸಿದ್ದಾರೆ. ಬಣ್ಣದ ಲೋಕಕ್ಕೆ ಬಂದ ಆರಂಭದ ದಿನಗಳಲ್ಲಿ ಎದುರಿಸಿದ ಕಷ್ಟಗಳನ್ನು ರಾಜೇಶ್ ಗೌಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ನನ್ನ ಜೀವನದಲ್ಲಿ ನಡೆದ ಆ ಎರಡು ಘಟನೆಗಳನ್ನು ಯಾವತ್ತಿಗೂ ಮರೆಯುವುದಿಲ್ಲ ಎಂದು ಬೇಸರ ವ್ಯಕ್ತಡಿಸಿದ್ದಾರೆ.

ನಟಿ ರಾಧಾ ಭಗವತಿ ಮಾತನಾಡಿ “ನಾನು ಕೂಡ ಆಡಿಷನ್‌ಗೆ ಹೋಗ್ತಿದ್ದೆ. ಪೇಪರ್‌ನಲ್ಲಿ ಒಂದು ಆಡಿಷನ್ ಬಗ್ಗೆ ಹಾಕಿದ್ರು. ಅದನ್ನು ನೋಡಿ ಅಮ್ಮನನ್ನು ಕರೆದುಕೊಂಡು ಹೋಗಿದ್ದೆ. ಅಲ್ಲಿ ಹೋದಾಗ ನಾಲ್ಕೈದು ಜನ ಹೆಣ್ಣು ಮಕ್ಕಳು ಕೂತಿದ್ರು.. ಮತ್ತೊಂದು ಕಡೆ ನಾಲ್ಕೈದು ಜನ ಪುರುಷರು ಆಡಿಷನ್ ಮಾಡ್ತಿದ್ರು. ನನಗೆ ಗೊತ್ತಿರುವವರೇ ಆ ಆಡಿಷನ್‌ಗೆ ನಮ್ಮನ್ನು ಕಳ್ಸಿದ್ರು, ಅವ್ರನ್ನು ಇವತ್ತಿಗೂ ಬೈಯ್ದುಕೊಳ್ತೀನಿ. ಅಮ್ಮನನ್ನು ಹೊರಗೆ ಕೂರಿಸಿ ನನ್ನನ್ನು ಒಳಗೆ ಬರೋಕೆ ಹೇಳಿದ್ರು, ಹೋಗಿದ್ದೆ” ಎಂದು ಆ ಘಟನೆ ನೆನಪಿಸಿಕೊಂಡಿದ್ದಾರೆ.

ಮೊದಲಿಗೆ ಒಂದಷ್ಟು ಕನ್ವಿನ್ಸ್ ಮಾಡೋಕೆ ನೋಡಿದ್ರು. ನೋಡಮ್ಮ ಇವತ್ತಿನ ಜನರೇಷನ್‌ನಲ್ಲಿ ಯಾರು ಬಟ್ಟೆ ಬಿಚ್ಚಿ ಆಕ್ಟ್ ಮಾಡ್ತಾರೋ, ಮಾನ ಮರ್ಯಾದೆ ಇಲ್ದೆ ಇರುವವರು ಮಾತ್ರ ಬೆಳೆಯೋಕೆ ಸಾಧ್ಯ, ಇಲ್ಲ ಅಂದ್ರೆ ಇಂಡಸ್ಟ್ರಿಯಲ್ಲಿ ಇರೋಕೆ ಸಾಧ್ಯವಿಲ್ಲ ಅಂತ ಹೇಳಿದ್ದಾಗಿ ರಾಧಾ ಭಗವತಿ ತಿಳಿಸಿದ್ದಾರೆ. “ನಾನು ಅವತ್ತು ಚೂಡಿದಾರ್ ಹಾಕ್ಕೊಂಡು ಹೋಗಿದ್ದೆ. ಇವತ್ತು ನೀನು ಇದ್ದೀಯಲ್ಲ, ಇದೆಲ್ಲಾ ಯಾವ ಕೆಲಸಕ್ಕೂ ಬರಲ್ಲ. ನಾನು ಒಂದು ಡ್ರೆಸ್ ಕೊಡ್ತೀನಿ, ಅದನ್ನು ಹಾಕ್ಕೊಂಡು ಆಡಿಷನ್ ಕೊಡಬೇಕು ಅಂತ ಹೇಳಿ ಒಂದು ಡ್ರೆಸ್ ತಂದು ಮುಂದೆ ಇಟ್ರು. ಆ ಬಟ್ಟೆ ನೋಡಿದ್ರೆ, ಐಟಂ ಡ್ಯಾನ್ಸರ್ಸ್ ಹಾಕಿಕೊಳ್ಳುವ ಬಟ್ಟೆ ತರ ಇತ್ತು. ನನಗೆ ಅಳು ಬರ್ತಿತ್ತು. ವೀಕ್ ಅಂತ ತೋರಿಸಿಕೊಳ್ಳುವಂತೆ ಇರಲಿಲ್ಲ, ಅಮ್ಮನನ್ನು ಕರೆಯೋಕೆ ಬಿಡ್ಲಿಲ್ಲ” ಎಂದು ವಿವರಿಸಿದ್ದಾರೆ.

ನಾನು ಹೊರಗೆ ಬರೋಕು ಬಿಡಲಿಲ್ಲ. ಬಾಗಿಲು ತೆಗೆಯದಂತೆ ತಡೆದ್ರು.. ಅದು ನೆನಪಿಸಿಕೊಂಡ್ರೆ, ಈಗ್ಲೂ ಕೈ ನಡುಗುತ್ತೆ.. ಬಳಿಕ ಆ ವ್ಯಕ್ತಿಗೆ ಯಾವ್ದೋ ಫೋನ್ ಕರೆ ಬಂತು. ಆತ ಆ ಕಡೆ ಹೋಗುತ್ತಿದ್ದಂತೆ ನಾನು ಹೊರಗೆ ಓಡಿ ಬಂದೆ. ಅಮ್ಮನ ಕೈಹಿಡಿದು ಕರೆದುಕೊಂಡು ಅಲ್ಲಿಂದ ಹೊರಗೆ ಬಂದುಬಿಟ್ಟೆ. ಬಳಿಕ ಅವರ ವಿರುದ್ಧ ಪೊಲೀಸ್ ಕಂಪ್ಲೇಟ್ ಕೊಡಬೇಕು ಎಂದುಕೊಂಡೆವು. ಅದಕ್ಕೆ ಹಣ ಬೇಕು ಅಂದ್ರು. ಹಾಗಾಗಿ ಅನಿವಾರ್ಯ ಕಾರಣದಿಂದ ಕಂಪ್ಲೇಟ್ ಕೊಡಲು ಸಾಧ್ಯವಾಗಲಿಲ್ಲ ಎಂದು ನಟಿ ರಾಧಾ ಭಗವತಿ ಹೇಳಿದ್ದಾರೆ.

ಮತ್ತೊಮ್ಮೆ ಯಾವುದೋ ಆಡಿಷನ್ ಅಂತ ಅಪ್ಪನನ್ನು ಕರೆದುಕೊಂಡು ಹೋಗಿದ್ದೆ. ನಮ್ಮ ಊರಿನಿಂದ ಬಹಳ ದೂರದಲ್ಲಿ ಆ ಜಾಗ ಇತ್ತು. ಫೋನ್ ಮಾಡಿ ಆ ವ್ಯಕ್ತಿ ಕೇಳುತ್ತಲೇ ಇದ್ದ. ಯಾರೊಟ್ಟಿಗೆ ಬರ್ತಿದ್ದೀರಾ ಅಂತ. ನಾನು ಅಪ್ಪನ ಜೊತೆ ಎಂದು ಹೇಳಿದ್ದೆ. ಕೊನೆಗೆ ಅಲ್ಲಿಗೆ ಹೋಗಿ ಕಾಲ್ ಮಾಡಿದ್ರೆ, ಪಿಕ್ ಮಾಡಲಿಲ್ಲ. ಅದು ದೊಡ್ಡ ಗೋಡೌನ್ ರೀತಿಯ ಜಾಗ. ಅಕ್ಕ ಪಕ್ಕ ಅಷ್ಟಾಗಿ ಮನೆಗಳು ಇರಲಿಲ್ಲ. 2 ಗಂಟೆ ನಾನು, ಅಪ್ಪ ಕಾದು ವಾಪಸ್ ಬಂದುಬಿಟ್ವಿ. ಮರುದಿನ ಟಿವಿ ನೋಡಿದ್ರೆ, ಮಾನವ ಸಾಗಾಣಿಕೆ ಜಾಲದಲ್ಲಿ ಆ ವ್ಯಕ್ತಿ ಸಿಕ್ಕಿ ಹಾಕಿಕೊಂಡಿದ್ದು ನ್ಯೂಸ್‌ನಲ್ಲಿ ಬರ್ತಿತ್ತು. ಒಂದು ಕ್ಷಣ ನಾನು ನಿಟ್ಟಿಸಿರು ಬಿಟ್ಟಿದ್ದೆ. ಒಂದು ವೇಳೆ ನಾನು ಅಪ್ಪನ ಬದಲು ಅಮ್ಮನ ಜೊತೆ ಅಲ್ಲಿಗೆ ಹೋಗಿದ್ದರೆ ಇವತ್ತು ನಾವಿಬ್ಬರು ಎಲ್ಲಿ ಇರ್ತಿದ್ವೋ, ಯಾವ ದೇಶಕ್ಕೆ ಮಾರಿಬಿಡುತ್ತಿದ್ದರೋ ಗೊತ್ತಿಲ್ಲ ಎಂದು ರಾಧಾ ಭಗವತಿ ಆತಂಕ ವ್ಯಕ್ತಪಡಿಸಿದ್ದಾರೆ.

Telangana ವಿಡಿಯೋ ಕಾಲ್‌ನಲ್ಲಿ ಪತ್ನಿಗೆ ಸಾವು ತೋರಿಸಿದ ಪತಿ

 

Share This Article
Facebook Twitter Copy Link Print
Previous Article Mysore dasara ಗಜಪಡೆ ಆಯ್ಕೆ ಪ್ರಕ್ರಿಯೆಗೆ ಚಾಲನೆ: ಆನೆಗಳ ಹೃದಯದ ಆರೋಗ್ಯ ಪರಿಶೀಲನೆಗಾಗಿ ನಡೆದ ಇಸಿಜಿ ಪರೀಕ್ಷೆ
Next Article Sports news ಅಫ್ಘಾನಿಸ್ತಾನದ ಮಾಜಿ ಕ್ರಿಕೆಟಿಗ ಶಪೂರ್ ಜದ್ರಾನ್ ನಿಧನ

Popular Posts

Newdelhi ಮೊಬೈಲ್ ಗ್ರಾಹಕರಿಗೆ ಟೆಲಿಕಾಂ ಕಂಪೆನಿಯಿಂದ ಮತ್ತೆ ಶಾಕ್: ರೀಚಾರ್ಜ್ ದರ ಶೇ.12-15 ಏರಿಕೆ ಸಾಧ್ಯತೆ!

2 Min Read

Ballari ಡಬಲ್ ಮರ್ಡರ್: ಪತ್ನಿ ಮಾವನನ್ನು ಚಾಕುವಿನಿಂದ ಇರಿದು ಕೊಂದ ಪತಿರಾಯ

1 Min Read

Lorry Strike ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್ 1ರಿಂದ ದಕ್ಷಿಣ ಭಾರತದಾದ್ಯಂತ ಲಾರಿ ಮುಷ್ಕರ

1 Min Read

Voter List Revision SIR ಪ್ರಕ್ರಿಯೆ​ ವೇಳೆ ಕರ್ನಾಟಕದಲ್ಲಿ ಭಾರಿ ಲೋಪ ಆರೋಪ : ಮೈತ್ರಿ ನಾಯಕರಿಂದ ದೂರು

2 Min Read

You Might Also Like

ಕರ್ನಾಟಕಪ್ರಮುಖವೈರಲ್

Mallalli Falls ಮಲ್ಲಳ್ಳಿ ಫಾಲ್ಸ್‌ನಲ್ಲಿ ರೀಲ್ಸ್ ಹುಚ್ಚು: ಈ ಯುವಕರಿಬ್ಬರು ಬದುಕಿದ್ದೇ ಪವಾಡ, ವಿಡಿಯೋ ನೋಡಿ

2 Min Read
ದೇಶಪ್ರಮುಖವೈರಲ್

Water bottle ನೀತಾ ಅಂಬಾನಿಯ ಈ ವಾಟರ್ ಬಾಟಲ್ ಬೆಲೆ ಎಷ್ಟು?

1 Min Read
ಕರ್ನಾಟಕದೇಶ

Mysore dasara ಗಜಪಡೆ ಆಯ್ಕೆ ಪ್ರಕ್ರಿಯೆಗೆ ಚಾಲನೆ: ಆನೆಗಳ ಹೃದಯದ ಆರೋಗ್ಯ ಪರಿಶೀಲನೆಗಾಗಿ ನಡೆದ ಇಸಿಜಿ ಪರೀಕ್ಷೆ

1 Min Read
ದೇಶಪ್ರಮುಖ

Telangana ವಿಡಿಯೋ ಕಾಲ್‌ನಲ್ಲಿ ಪತ್ನಿಗೆ ಸಾವು ತೋರಿಸಿದ ಪತಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?