newsics.com| ನ್ಯೂಸಿಕ್ಸ್
ಜುಲೈ 1 ರಿಂದ ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ನಿರ್ಬಂಧ ತೆರವಾಗುತ್ತಿದೆ. ಈ ಕುರಿತು ಕೇಂದ್ರ ಸರ್ಕಾರ ಅಧಿಕೃತ ಘೋಷಣೆ ಮಾಡಿದೆ.
ಯುದ್ದ ಕಾರಣದಿಂದ ಭಾರತದಲ್ಲಿ ತೈಲ ಅಭಾವ ಸೃಷ್ಟಿಯಾಗಿತ್ತು. ಈ ವೇಳೆ ಕೆಲ ನಿರ್ಬಂಧಗಳನ್ನು ಹೇರಲಾಗಿತ್ತು. ವಾಣಿಜ್ಯ ಇಂಧನ ಖರೀದಿದಾರರು ಪೆಟ್ರೋಲ್ ಪಂಪ್ಗಳಿಂದ ಪೆಟ್ರೋಲ್ ಅಥವಾ ಡೀಸೆಲ್ ಖರೀದಿಸುವುದು, ಕೈಗಾರಿಕೆ, ವಾಣಿಜ್ಯ, ಸಂಘ ಸಂಸ್ಥೆಗಳು ಪೆಟ್ರೋಲ್ ಪಂಪ್ನಿಂದ ಇಂಧನ ಖರೀದಿ ಮಾಡುವುದನ್ನು ನಿರ್ಬಂಧಿಸಲಾಗಿತ್ತು. ಸ್ಥಳೀಯರಿಗೆ, ಗ್ರಾಹಕರಿಗೆ ಇಂಧನ ಕೊರತೆ ತಪ್ಪಿಸಲು ಈ ನಿರ್ಭಂಧ ಹೇರಲಾಗಿತ್ತು. ಇತ್ತ ವಾಣಿಜ್ಯ ಉದ್ದೇಶಕ್ಕೆ ದೊಡ್ಡ ಪ್ರಮಾಣದಲ್ಲಿ ಇಂಧನ ಖರೀದಿಸುವವರು ಬಲ್ಕ್ ಸೆಲ್ಲರ್ ಮೂಲಕ ಖರೀದಿಗೆ ಸೂಚಿಸಲಾಗಿತ್ತು.
ಜೂನ್ ತಿಂಗಳಲ್ಲಿ ಸಗಟು (ಬಲ್ಕ್) ಡೀಸೆಲ್ ಬೆಲೆಗಿಂತ ಸಾಮಾನ್ಯ ರೀಟೇಲ್ ಪೆಟ್ರೋಲ್ ಬಂಕ್ಗಳಲ್ಲಿನ ಬೆಲೆ ಲೀಟರ್ಗೆ ಸುಮಾರು 40 ರೂಪಾಯಿಯಷ್ಟು ಕಡಿಮೆಯಿತ್ತು. ಈ ಭಾರಿ ಬೆಲೆ ವ್ಯತ್ಯಾಸದಿಂದಾಗಿ ದೊಡ್ಡ ದೊಡ್ಡ ಟ್ರಕ್ಕಿಂಗ್ ಕಂಪನಿಗಳು ಮತ್ತು ಕೈಗಾರಿಕೆಗಳು ಸಗಟು ಮಾರುಕಟ್ಟೆಯನ್ನು ಬಿಟ್ಟು ಸಾಮಾನ್ಯ ಪೆಟ್ರೋಲ್ ಬಂಕ್ಗಳ ಕಡೆ ಮುಖ ಮಾಡಿದ್ದವು. ಇದರಿಂದಾಗಿ ಸರ್ಕಾರಿ ತೈಲ ಕಂಪನಿಗಳಾದ IOC, BPCL ಮತ್ತು HPCL ಬಂಕ್ಗಳ ಮೇಲೆ ತೀವ್ರ ಒತ್ತಡ ಉಂಟಾಗಿ, ದೇಶದ ಹಲವು ಭಾಗಗಳಲ್ಲಿ ಇಂಧನ ಕೊರತೆಯ ಭೀತಿ ಎದುರಾಗಿತ್ತು. ಇದನ್ನು ನಿಯಂತ್ರಿಸಲು ಸರ್ಕಾರ ತಾತ್ಕಾಲಿಕ ಬ್ರೇಕ್ ಹಾಕಿತ್ತು.
ಜಾಗತಿಕ ಸಮಸ್ಯೆಗಳಿಂದ ಈ ನಿರ್ಬಂಧ ಹೇರಿದ್ದ ಕೇಂದ್ರ ಸರ್ಕಾರ ಇದೀಗ ನಿರ್ಬಂಧ ತೆರವುಗೊಳಿಸುತ್ತಿದೆ. ಜುಲೈ 1 ರಿಂದ ಈ ಎಲ್ಲಾ ನಿರ್ಬಂಧ ತೆರವಾಗುತ್ತಿದೆ. ಸದ್ಯ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ. ಹೀಗಾಗಿ ನಿರ್ಬಂಧ ತೆರವುಗೊಳಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.