newsics.com/ನ್ಯೂಸಿಕ್ಸ್
ಕೋಟ್ಯಂತರ ರೂಪಾಯಿಗಳ ಆಸ್ತಿ ಹೊಂದಿರುವ ರಜನೀಕಾಂತ್ ಅತ್ಯಂತ ಸಿಂಪಲ್ ವ್ಯಕ್ತಿ. ಸಿನಿಮಾದಲ್ಲಿ ಆಡಂಬರ ತೋರಿಸುವ ನಟ ವಾಸ್ತವದಲ್ಲಿ ಅತ್ಯಂತ ಸರಳ ಎನ್ನುವುದು ಅವರ ಅಭಿಮಾನಿಗಳಿಗೂ ಗೊತ್ತು. ಎಷ್ಟರಮಟ್ಟಿಗೆಂದರೆ ಸಿನಿಮಾಗಲ್ಲಿ ವಿಗ್ ಧರಿಸಿಯೇ ನಟಿಸೋ ರಜನಿ ಹೊರಗೆ ಬಂದಾಗ ನ್ಯಾಚುರಲ್ ಆಗಿಯೇ ಕಾಣಿಸಿಕೊಳ್ಳುತ್ತಾರೆ.
ತಮ್ಮ ಸಿನಿಮಾ ಬಿಡುಗಡೆಯಾದಾಗ ಅಥವಾ ಭಾರಿ ಯಶಸ್ಸು ಕಂಡಾಗ ಆಧ್ಯಾತ್ಮದ ಮೊರೆ ಹೋಗುವುದು, ಹಿಮಾಲಯಕ್ಕೆ ಭೇಟಿ ನೀಡುವುದು ಅಥವಾ ಸಾಮಾನ್ಯರಂತೆ ದೇವಸ್ಥಾನಗಳಿಗೆ ಭೇಟಿ ನೀಡುವುದು ಅವರ ದಶಕಗಳ ರೂಢಿ.
ಅದು ‘ಶಿವಾಜಿ’ ಸಿನಿಮಾ ಬಿಡುಗಡೆಯಾಗಿ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದ್ದ ಸಮಯ. ಸಿನಿಮಾ ಸೂಪರ್ ಹಿಟ್ ಆದ ಖುಷಿಯಲ್ಲಿ ರಜನಿಕಾಂತ್ ಅವರು ದೇವಸ್ಥಾನವೊಂದಕ್ಕೆ ಭೇಟಿ ನೀಡಲು ನಿರ್ಧರಿಸುತ್ತಾರೆ. ಆದರೆ, ಸೂಪರ್ ಸ್ಟಾರ್ ಆಗಿ, ತಮ್ಮ ಸುತ್ತಮುತ್ತ ನೂರಾರು ಬೌನ್ಸರ್ಗಳು, ಭದ್ರತಾ ಸಿಬ್ಬಂದಿಯೊಂದಿಗೆ ದೇವಸ್ಥಾನಕ್ಕೆ ಹೋದರೆ, ಅಲ್ಲಿನ ಭಕ್ತರಿಗೆ ತೊಂದರೆಯಾಗುತ್ತದೆ ಮತ್ತು ಜನಸಂದಣಿ ಸೇರಿ ಗದ್ದಲ ಉಂಟಾಗುತ್ತದೆ ಎಂಬುದು ಅವರಿಗೆ ತಿಳಿದಿತ್ತು. ದೇವರ ಸನ್ನಿಧಿಯಲ್ಲಿ ತಾನು ಕೇವಲ ಒಬ್ಬ ಸಾಮಾನ್ಯ ಭಕ್ತನಾಗಿ ಹೋಗಬೇಕು ಎಂಬ ಉದ್ದೇಶದಿಂದ ಅವರು ಒಂದು ಮಹತ್ವದ ನಿರ್ಧಾರ ಮಾಡಿದರು.
ಪ್ರವಾಸ ಹೋಗಿದ್ದಾಗ ನಟ ದೇವಸ್ಥಾನದ ಕಂಬದ ಪಕ್ಕ ಕುಳಿತಿದ್ದರಂತೆ. ಅತ್ಯಂತ ಸರಳ ಉಡುಗೆಯಲ್ಲಿದ್ದ ರಜನಿಯನ್ನು ಭಿಕ್ಷುಕ ಎಂದುಕೊಂಡು 10 ರೂಪಾಯಿ ಭಿಕ್ಷೆ ಕೊಟ್ಟಿದ್ದರು ಮಹಿಳೆ.ಆದರೆ ರಜನಿ ಸಿಟ್ಟಾಗಲಿಲ್ಲ. ಮಹಿಳೆಯನ್ನು ಒಮ್ಮೆ ನೋಡಿದರೂ ಅಷ್ಟೇ. ಆದರೆ ನಂತರ ಅಲ್ಲಿಂದ ಹೊರಟ ರಜನೀಕಾಂತ್ ಅವರು ಕಾರಿ ಬಳಿ ನಡೆದಾಗ ಆ ಮಹಿಳೆಗೆ ಅರ್ಥವಾಗಿತ್ತು, ಆ ನಂತರ ಬಂದು ಕ್ಷಮೆ ಕೇಳಿದ್ದರು.
ಸ್ವಲ್ಪ ಸಮಯದ ನಂತರ, ರಜನಿಕಾಂತ್ ಅವರು ಮೆಟ್ಟಿಲಿನಿಂದ ಎದ್ದು ತಮ್ಮ ಕಾರಿನತ್ತ ಹೆಜ್ಜೆ ಹಾಕಲಾರಂಭಿಸಿದರು. ದೇವಸ್ಥಾನದ ಹೊರಗೆ ಅವರಿಗಾಗಿ ಕಾಯುತ್ತಿದ್ದ ಐಷಾರಾಮಿ ಕಾರು ಮತ್ತು ಅವರ ಬಳಿ ಅತ್ಯಂತ ಗೌರವದಿಂದ ವರ್ತಿಸುತ್ತಿದ್ದ ಜನರನ್ನು ನೋಡಿದ ಆ ವಯಸ್ಸಾದ ಮಹಿಳೆಗೆ ಆಘಾತವಾಗುತ್ತದೆ! ತಾನು ಭಿಕ್ಷುಕನೆಂದು ತಿಳಿದು 10 ರೂಪಾಯಿ ಕೊಟ್ಟ ವ್ಯಕ್ತಿ ಸಾಮಾನ್ಯರಲ್ಲ, ಅವರು ಕೋಟ್ಯಂತರ ಜನರ ಆರಾಧ್ಯ ದೈವ ರಜನಿಕಾಂತ್ ಎಂಬ ಸತ್ಯ ಆಕೆಗೆ ಅರಿವಾಗುತ್ತದೆ.
ತಕ್ಷಣವೇ ಆತಂಕ ಮತ್ತು ಮುಜುಗರದಿಂದ ರಜನಿಕಾಂತ್ ಅವರ ಬಳಿ ಓಡಿಬಂದ ಆ ಮಹಿಳೆ, “ನನ್ನನ್ನು ಕ್ಷಮಿಸಿಬಿಡಿ. ದಯವಿಟ್ಟು ಕ್ಷಮಿಸಿ. ನೀವು ಯಾರೆಂದು ನನಗೆ ನಿಜಕ್ಕೂ ಗೊತ್ತಿರಲಿಲ್ಲ. ನಾನೇನೋ ತಪ್ಪು ಮಾಡಿದೆ, ಕ್ಷಮಿಸಿ” ಎಂದು ಬೇಡಿಕೊಳ್ಳುತ್ತಾರೆ.
ಆಗ ಸೂಪರ್ ಸ್ಟಾರ್ ರಜನಿಕಾಂತ್ ಅವರು ಆ ಮಹಿಳೆಗೆ ಹೇಳಿದ ಮಾತು ಪ್ರತಿಯೊಬ್ಬ ಮನುಷ್ಯನೂ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ದೊಡ್ಡ ಪಾಠವಾಗಿದೆ.
ಮಹಿಳೆಯನ್ನು ಸಮಾಧಾನಪಡಿಸಿದ ರಜನಿಕಾಂತ್, “ಅಮ್ಮಾ, ನೀವು ಯಾವುದೇ ಕಾರಣಕ್ಕೂ ನನ್ನಲ್ಲಿ ಕ್ಷಮೆ ಕೇಳಬೇಡಿ. ವಾಸ್ತವವಾಗಿ ಇದು ಭಗವಂತನೇ ನನಗೆ ನೆನಪಿಸುತ್ತಿರುವ ಒಂದು ಅದ್ಭುತವಾದ ಪಾಠ. ನಾನು ಅಸಲಿಗೆ ಯಾರು ಎಂಬುದನ್ನು ದೇವರು ನಿಮ್ಮ ಮೂಲಕ ನನಗೆ ತಿಳಿಸಿದ್ದಾನೆ. ಭಗವಂತನ ಎದುರು ನಾವೆಲ್ಲರೂ ಕೇವಲ ಭಿಕ್ಷುಕರು ಅಷ್ಟೇ. ಆತನ ದರ್ಬಾರಿನಲ್ಲಿ ನಮ್ಮ ಯೋಗ್ಯತೆ, ನಮ್ಮ ಅಂತಸ್ತು, ನಮ್ಮ ಹಣ ಯಾವುದಕ್ಕೂ ಬೆಲೆಯಿಲ್ಲ. ಎಲ್ಲರೂ ಒಂದೇ.
ಪತಿ ಬಾಳು ಬೆಳಗುಂದಿ ನನ್ನ ಕಷ್ಟಗಳಿಗೆ ಸ್ಪಂದಿಸಲ್ಲ – ಜೋಡಿ ನಂ 1 ಶೋನಲ್ಲಿ ಪತ್ನಿ ಮಾಲಾಶ್ರೀ ಬೇಸರ