newsics.com/ನ್ಯೂಸಿಕ್ಸ್
ಬೆಂಗಳೂರು : ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಲಭ್ಯವಿರುವ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೇಸ್ ಹೆಚ್ಚಿದೆ ಎಂದು ಕರ್ನಾಟಕ ಹೈಕೋರ್ಟ್ ಕಿಡಿಕಾರಿದೆ. ಅತ್ಯಾಚಾರದ ಆರೋಪ ಹೊತ್ತಿರುವ 23 ವರ್ಷದ ವ್ಯಕ್ತಿಯ ಜಾಮೀನು ತಿರಸ್ಕರಿದ ಕೋರ್ಟ್, ಕೈ-ಕಾಲು ಕತ್ತರಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
2023ರಲ್ಲಿ ತನ್ನ ಸಹಪಾಠಿಯ ಮೇಲೆ ಅತ್ಯಾಚಾರದ ಎಸಗಿದ ಆರೋಪ ಹೊತ್ತಿರುವ 23 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ಹೈಕೋರ್ಟ್ ನ್ಯಾಯಾಧೀಶರು ಆರ್ ನಟರಾಜ್ ಅವರು ನಿರಾಕರಿಸಿದ್ದಾರೆ. ಕಾನೂನು ತನ್ನ ಹಲ್ಲುಗಳನ್ನು ಕಳೆದುಕೊಂಡಿದೆ. ಕಠಿಣ ಶಿಕ್ಷೆಯ ಹೊರತಾಗಿ ಜನರು ಕಾನೂನನ್ನು ಪಾಲಿಸೋದಿಲ್ಲ ಎಂದು ನ್ಯಾಯಧೀಶರು ಕಠಿಣವಾಗಿ ನುಡಿದಿದ್ದಾರೆ.
ನಾವು ಅಪರಾಧಿಗಳನ್ನು ದೃಢವಾಗಿ ನಿಭಾಯಿಸದ ಕಾರಣ ಕಾನೂನು ತನ್ನ ಹಲ್ಲುಗಳನ್ನು ಕಳೆದುಕೊಂಡಿದೆ. ನೀವು ಕಾಲು ಅಥವಾ ಕೈಯನ್ನು ಕತ್ತರಿಸಿದ್ರೆ, ಜನರು ಬಹುಶಃ ಕಾನೂನನ್ನು ಪಾಲಿಸಬೇಕೆಂದು ಅರಿತುಕೊಳ್ಳುತ್ತಾರೆ. ಗಲ್ಫ್ ರಾಷ್ಟ್ರಗಳಂತೆ ಕಠಿಣ ಕಾನೂನಿನ ಅಗತ್ಯತೆ ಇದೆ ಎಂದು’ ನ್ಯಾಯಾಧೀಶರು ಪ್ರತಿಪಾದಿಸಿದ್ದಾರೆ.
ಏನಿದು ಕೇಸ್?
ಆರೋಪಿಯು ಏಪ್ರಿಲ್ ಆರಂಭದಿಂದ ನ್ಯಾಯಾಂಗ ಬಂಧನದಲ್ಲಿದ್ದು, 2023 ರಲ್ಲಿ ಮಾಜಿ ಸಹಪಾಠಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದಾನೆ. ಆರೋಪಿಯು ತನ್ನ ಸ್ನೇಹದ ಬಗ್ಗೆ ಚರ್ಚಿಸುವ ನೆಪದಲ್ಲಿ ಮಹಿಳೆಯನ್ನು ಅಪಾರ್ಟ್ಮೆಂಟ್ಗೆ ಕರೆದುಕೊಂಡು ಹೋಗಿದ್ದ. ಸೆಪ್ಟೆಂಬರ್ 12, 2023 ರಂದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಪೊಲೀಸರ ದೂರಿನಲ್ಲಿದೆ. ದೂರು ದಾಖಲಿಸುವ ಮೊದಲು ಸಂತ್ರಸ್ತೆ ರಾಷ್ಟ್ರೀಯ ಮಹಿಳಾ ಆಯೋಗದಲ್ಲೂ ದೂರು ನೀಡಿದ್ರು.
ತಪ್ಪು ಮಾಡಿ ಜೈಲು ಸೇರಿದ್ದವರು ಸುಲಭವಾಗಿ ಹೊರಗೆ ಬಂದು ರಾಜಾರೋಷವಾಗಿ ಓಡಾಡೋ ಅನೇಕ ಉದಾಹರಣೆ ಇದೆ. ಹೀಗಾಗಿ ದೇಶದ ಕಾನೂನನ್ನ ಮತ್ತಷ್ಟು ಕಠಿಣಗೊಳಿಸೋ ಅಗತ್ಯತೆ ಇದೆ ಅಂತಾರೆ ಸಾರ್ವಜನಿಕರು
ಇನ್ಮುಂದೆ ಭಾರತದಲ್ಲಿ ನೆಲೆಸುವ ವಿದೇಶಿಯರಿಗೆ 180 ದಿನಗಳ ಒಳಗೆ ನೋಂದಣಿ ಕಡ್ಡಾಯ