newsics.com/ನ್ಯೂಸಿಕ್ಸ್
ಕಾಂಗ್ರೆಸ್ ವಲಯದಲ್ಲಿ ಸದ್ಯ ಸಂಪುಟ ಪುನಾರಚನೆಯ ತಲ್ಲಣ ಮತ್ತು ಭಾರಿ ಸಂಚಲನ ಸೃಷ್ಟಿಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಹಾಲಿ ಕ್ಯಾಬಿನೆಟ್ನಲ್ಲಿದ್ದ ಬರೋಬ್ಬರಿ 17 ರಿಂದ 20 ಸಚಿವರು ಈ ಬಾರಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ನೂತನ ಸಂಪುಟದಲ್ಲಿ ಸ್ಥಾನ ಕಳೆದುಕೊಳ್ಳುವ ದಟ್ಟ ಮುನ್ಸೂಚನೆಗಳು ಲಭ್ಯವಾಗಿವೆ.
ದೆಹಲಿ ಹೈಕಮಾಂಡ್ ಮೂಲಗಳ ಪ್ರಕಾರ, ಸಿದ್ದರಾಮಯ್ಯ ಕ್ಯಾಬಿನೆಟ್ನಲ್ಲಿದ್ದ ಕೇವಲ 10 ರಿಂದ 12 ಹಿರಿಯ ಸಚಿವರಿಗಷ್ಟೇ ಈ ಬಾರಿ ಅದೃಷ್ಟ ಒಲಿಯಲಿದೆ.
ಬಾಕಿ ಉಳಿದ ಸಚಿವರನ್ನು ಕೈಬಿಡಲು ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದ್ದು, ಇದರಲ್ಲಿ ಪ್ರಮುಖವಾಗಿ ಬೆಂಗಳೂರು ಭಾಗದ ಮೂವರು ಪ್ರಭಾವಿ ನಾಯಕರಿಗೆ ಮಂತ್ರಿಗಿರಿ ಕೈತಪ್ಪುವ ಸಾಧ್ಯತೆ ದಟ್ಟವಾಗಿದೆ.
ತಮ್ಮ ಆಪ್ತ ವಲಯದ ಹಲವು ನಾಯಕರಿಗೆ ಸಚಿವ ಸ್ಥಾನ ಸಿಗದೇ ಇರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅಲರ್ಟ್ ಆಗಿದ್ದಾರೆ. ತಮ್ಮ ಬೆಂಬಲಿಗರಲ್ಲಿ ಕನಿಷ್ಠ 6 ರಿಂದ 7 ಜನರಿಗಾದರೂ ಹೊಸ ಸಂಪುಟದಲ್ಲಿ ಕಡ್ಡಾಯವಾಗಿ ಅವಕಾಶ ನೀಡಬೇಕು ಎಂದು ಸಿದ್ದರಾಮಯ್ಯ ಅವರು ಹೈಕಮಾಂಡ್ ನಾಯಕರ ಮುಂದೆ ಬಿಗಿಪಟ್ಟು ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.
ಈ ಬಾರಿಯ ನೂತನ ಕ್ಯಾಬಿನೆಟ್ ಕೇವಲ ಪ್ರಭಾವದ ಆಧಾರದ ಮೇಲಲ್ಲದೆ, ಮೂರು ಪ್ರಮುಖ ಫಾರ್ಮುಲಾಗಳ ಅಡಿಯಲ್ಲಿ ರಚನೆಯಾಗಲಿದೆ.
1. ಸಿದ್ದರಾಮಯ್ಯ ಬೆಂಬಲಿಗರು (ಮುಖ್ಯಮಂತ್ರಿಗಳ ಆಪ್ತ ವಲಯ)
2. ಡಿ.ಕೆ. ಶಿವಕುಮಾರ್ ಆಪ್ತರು (ಕೆಪಿಸಿಸಿ ಅಧ್ಯಕ್ಷರ ನಿಷ್ಠಾವಂತರು)
3. ಹೈಕಮಾಂಡ್ ಒಲವುಳ್ಳ ನಾಯಕರು (ದೆಹಲಿ ನಾಯಕರ ನೇರ ಆಯ್ಕೆ)
ಕರ್ನಾಟಕ ರಾಜ್ಯ ಸಚಿವ ಸಂಪುಟ’ ವಿಸರ್ಜಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆದೇಶ
DK’s Oath ಡಿಕೆ ಪ್ರಮಾಣವಚನಕ್ಕೆ ಡೇಟ್ ಫಿಕ್ಸ್: ಯಾರೆಲ್ಲ ಸಚಿವರಾಗ್ತಾರೆ?