newsics.com/ನ್ಯೂಸಿಕ್ಸ್
ಕಾರವಾರ: ಕಪ್ಪೆಚಿಪ್ಪು ತೆಗೆಯಲು ಹೋದ 11 ಮಂದಿ ನೀರುಪಾಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆ ಹಕ್ಕಲು ನದಿಯಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆ ಹಕ್ಕಲು ನದಿಯಲ್ಲಿ ಕಪ್ಪೆಚಿಪ್ಪು ಹೆಕ್ಕೋದಕ್ಕೆ ಅಂತಾ 14 ಮಂದಿ ಹೋಗಿದ್ರು. ಇದ್ರಲ್ಲಿ ಇಬ್ಬೇ ಇಬ್ಬರು ಗಂಡಸರು ಬಿಟ್ರೆ ಉಳಿದವ್ರೆಲ್ಲಾ ಹೆಣ್ಮಕ್ಕಳೇ. ಇವ್ರು ಯಾರೂ ಸಾಂಪ್ರದಾಯಿಕ ಮೀನುಗಾರರಲ್ಲ. ಹೀಗಾಗಿಯೇ ಈ ದುರಂತ ಸಂಭವಿಸಿದ್ದು. ಎದೆ ಎತ್ತರದ ನೀರಿಗೆ ಇಳಿದವ್ರು, ಒಂದಿಷ್ಟು ಹೊತ್ತು ಕಪ್ಪೆ ಚಿಪ್ಪು ಆರಿಸಿದ್ರು. ಸುಮಾರು ಎರಡ್ಮೂರು ಬುಟ್ಟಿಯಷ್ಟು ಕಪ್ಪೆಚಿಪ್ಪು ಸಿಕ್ಕಿತ್ತು. ಹೀಗಾಗಿ ಮತ್ತೆ ಕಪ್ಪೆ ಚಿಪ್ಪು ಹೆಕ್ಕೋದಕ್ಕೆ ಇಳಿದಿದ್ದಾರೆ. ಈ ವೇಳೆ ಹೊಂಚು ಹಾಕಿ ಕೂತಿದ್ದ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ನೀರಲ್ಲಿ ಮುಳುಗಿ ಮುಳುಗಿ ಏಳ್ತಿದ್ದವ್ರನ್ನ ಅಲ್ಲೇ ಜಲಸಮಾಧಿ ಮಾಡಿದ್ದಾನೆ.
ನದಿಯ ಏರಿಳಿತದ ಅನುಭವ ಕೊರತೆಯಿಂದಲೇ ಒಂದೇ ಕುಟುಂಬದ 11 ಮಂದಿ ಸಾವನ್ನಪ್ಪಿದ್ದಾರೆ ಎಂದು ಗಂಗೊಳ್ಳಿಯ ರಕ್ಷಣಾ ತಂಡ ಅಭಿಪ್ರಾಯ ಪಟ್ಟಿದೆ. ಸ್ವಯಂಸೇವಕರಾಗಿ ರಕ್ಷಣಾ ಕಾರ್ಯ ಮಾಡಿದ ದಿನೇಶ್ ಖಾರ್ವಿ ತಂಡ, ಸ್ಥಳೀಯರೊಂದಿಗೆ ರಕ್ಷಣಾ ಕಾರ್ಯದಲದಲ್ಲಿ ತೊಡಗಿದ್ದರು. ಒಬ್ಬರಿಗೆ ಈಜಾಡಲು ಬಂದರು ಕೂಡಾ ಎಲ್ಲರನ್ನ ರಕ್ಷಣೆ ಮಾಡಬಹುದಿತ್ತು, ಇಳಿತದ ಸಂದರ್ಭದಲ್ಲಿ ಹೋದವರು ಏಕಾಏಕಿ ಉಬ್ಬರದ ಸಂದರ್ಭದಲ್ಲಿ ದಾರಿ ತಪ್ಪಿ ಹೋಗಿ ಸಾವು ಕಂಡಿದ್ದಾರೆ ಎಂದು ಹೇಳಿದ್ದಾರೆ.