newsics.com/ನ್ಯೂಸಿಕ್ಸ್
ಬಿಗ್ ಬಾಸ್ ಕನ್ನಡ 12 ಕಾರ್ಯಕ್ರಮದಲ್ಲಿ ಭರ್ಜರಿ ಸೌಂಡ್ ಮಾಡಿದವರು ರಕ್ಷಿತಾ ಶೆಟ್ಟಿ. ‘ಬಿಗ್ ಬಾಸ್’ ಮನೆಯಲ್ಲಿ ಇರುವಾಗ ರಕ್ಷಿತಾ ಶೆಟ್ಟಿ ‘ಪಟಾಕಿ ರಕ್ಷಿತಾ’ ಎಂದೇ ಫೇಮಸ್ ಆಗಿದ್ದರು. ದೊಡ್ಮನೆ ಆಟದಲ್ಲಿ ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆದರು. ಕನ್ನಡಿಗರ ಮನೆ ಮಾತಾದರು. ಇದೀಗ ಹೊಸ ರಿಯಾಲಿಟಿ ಶೋಗೆ ರಕ್ಷಿತಾ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ.
ಅದುವೇ ‘ಕ್ವಾಟ್ಲೆ ಕಿಚನ್ ಸೀಸನ್ 2’. ಸೂರಜ್ ಸಿಂಗ್, ತುಕಾಲಿ ಸಂತೋಷ್, ಓಂ ಪ್ರಕಾಶ್ ರಾವ್ ಮೊದಲಾದವರು ಶೋನ ಭಾಗ ಆಗುತ್ತಿದ್ದಾರೆ.
ಪ್ರೊಮೋ ಸಖತ್ ಮಜವಾಗಿದೆ ಬಂದಿದೆ. ಸೂರಜ್ ಸಿಂಗ್, ರಕ್ಷಿತಾ ಶೆಟ್ಟಿ, ನಂದ ಗೋಕುಲದ ಮೀನಾ ಪಾತ್ರಧಾರಿ ಮೇಘಾ, ಓಂ ಪ್ರಕಾಶ್ ರಾವ್, ಮಂಗಳ ಗೌರಿ ಖ್ಯಾತಿಯ ಕಾವ್ಯಾಶ್ರೀ ಗೌಡ ಒಂದು ಗುಂಪು ಕಟ್ಟಿಕೊಂಡು, ತಮಗೆ ತೊಂದರೆ ಕೊಡುವವರನ್ನು ಹೇಗೆ ಸದೆ ಬಡೆಯೋದು ಎನ್ನುವ ಪ್ಲ್ಯಾನ್ ಮಾಡುತ್ತಿರುತ್ತಾರೆ.
ಆವಾಗ ರಕ್ಷಿತಾ ಎಂತ ಗೊತ್ತುಂಟಾ ಗಯ್ಸ್ ನಾವು ಹೆದರುವ ತನಕ ಅವರು ನಮಗೆ ಹೆದರಿಸ್ತಾ ಇರ್ತಾರೆ, ಚಾಕು ಇದೆ ಅಂತ ಕೈಯಲ್ಲಿ ತೆಗೋಬಾರ್ದು, ಕಾದು ಕಚ ಕಚ ಮಾಡಿ ಕತ್ತರಿಸಬೇಕು ಎನ್ನುತ್ತಾರೆ. ಆವಾಗ ಕಾವ್ಯಾ ಬೆಂಕಿಯಲ್ಲಿ ಬೆಂದೋಗ್ತೀವಿ ಅಂತ ಭಯ ಬೇಡ, ನಾವೇ ಸುಟ್ಟಾಕ್ ಬಿಡೋಣ ಎನ್ನುತ್ತಾರೆ.
ಇನ್ನು ಮೇಘಾ ಕಣ್ಣಲ್ಲಿ ನೀರು ಬರಿಸಿದ್ರೆ ಸಿಗ್ತಾಕ್ ಬಿಡೋಣ ಎನ್ನುತ್ತಾರೆ. ಅದೇ ಸಂದರ್ಭದಲ್ಲಿ ಇನ್ನೊಂದು ಕಡೆ ಕ್ವಾಟ್ಲೆಗಳ ಗ್ಯಾಂಗ್ ತುಕಾಲಿ ಸಂತೋಷ್, ಟ್ಯಾಲೆಂಟ್ ಕಲಾವಿದ, ಕರಿಬಸಪ್ಪ ಮಾತನಾಡುತ್ತಾ, ಅವರು ಶುಂಠಿ, ಈರುಳ್ಳಿ ಕತ್ತರಿಸೋದು ಹೇಗೆ ಎಂದು ಯೋಚ್ನೆ ಮಾಡ್ತಿದ್ದಾರೆ. ನಮ್ಮ ಏರಿಯಾಗೆ ಬರ್ತಾರಲ್ಲ ಆವಾಗ ನೋಡ್ಕೊಳ್ಳೋಣ ಎನ್ನುತ್ತಾ ಜೋರಾಗಿ ನಗುತ್ತಾರೆ. ಇದು ಹೊಸ ಸೀಸನ್ ಪ್ರೊಮೋ.
ಕ್ವಾಟ್ಲೆ ಕಿಚನ್ ನಲ್ಲಿ ರಕ್ಷಿತಾ ಶೆಟ್ಟಿಯನ್ನು ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.
https://www.newsics.com/2026/05/18/the-actress-who-…-rs-10000-crores/