newsics.com/ನ್ಯೂಸಿಕ್ಸ್
ಎಷ್ಟೇ ದೊಡ್ಡ ಆಸ್ಪತ್ರೆಗಳಿಗೆ ಅಲೆದು, ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ನಾನಾ ರೀತಿಯ ನೋವು ಮಾತ್ರೆಗಳನ್ನು ತಿಂದರೂ ಕೆಲವರಿಗೆ ಈ ಕೀಲು ನೋವುಗಳು ಸಂಪೂರ್ಣವಾಗಿ ವಾಸಿಯಾಗುವುದಿಲ್ಲ. ಆದರೆ ಈ ದೇವಸ್ಥಾನದಲ್ಲಿ ಎಲ್ಲ ನೋವುಗಳಿಗೂ ಪರಿಹಾರ ಇಲ್ಲಿ ಸಿಗುತ್ತೆ.
https://youtube.com/shorts/wvfyhGYwVVw?si=koK0hviI-H0dDOsr
ಸಂಪೂರ್ಣ ಶ್ರದ್ಧೆ ಹಾಗೂ ಭಕ್ತಿಯಿಂದ ಒಂದು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ, ಭಗವಂತನ ಮೊರೆ ಹೋದರೆ ಎಂತಹ ನೋವುಗಳಿದ್ದರೂ ಅವು ಮಂಜಿನಂತೆ ಕರಗಿ ಹೋಗುತ್ತವೆ kannadatrendnews.com ವೆಬ್ಸೈಟ್ನಲ್ಲಿ ವರದಿ ಆಗಿದೆ. ಇದು ಕೇವಲ ನಂಬಿಕೆಯಲ್ಲ, ಬದಲಾಗಿ ಅನೇಕ ಭಕ್ತರು ಸ್ವತಃ ಅನುಭವಿಸಿರುವ ಸತ್ಯವಾಗಿದೆ.
ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಪವಿತ್ರವಾದ ಕಪಿಲಾ (ಕಬಿನಿ) ನದಿಯ ದಡದಲ್ಲಿ ಈ ಪುರಾತನ ಹಾಗೂ ಐತಿಹಾಸಿಕ ದೇವಾಲಯ ನೆಲೆಗೊಂಡಿದೆ. ‘ದಕ್ಷಿಣ ಕಾಶಿ’ ಎಂದೇ ವಿಶ್ವಾದ್ಯಂತ ಖ್ಯಾತಿ ಪಡೆದಿರುವ ಈ ಪುಣ್ಯಕ್ಷೇತ್ರದಲ್ಲಿ, ಸಾಕ್ಷಾತ್ ಪರಮಶಿವನು ‘ವೈದ್ಯ ನಂಜುಂಡೇಶ್ವರ’ನಾಗಿ ಅಂದರೆ ಸಮಸ್ತ ರೋಗಗಳನ್ನು ಗುಣಪಡಿಸುವ ಮಹಾವೈದ್ಯನಾಗಿ ನೆಲೆಸಿದ್ದಾನೆ. ಶಸ್ತ್ರಚಿಕಿತ್ಸೆಯಿಂದಲೂ ಗುಣವಾಗದ ಎಲುಬು ಮತ್ತು ಕೀಲುಗಳ ಸಮಸ್ಯೆಗಳನ್ನು ನಿವಾರಿಸುವ ದೈವಿಕ ಶಕ್ತಿ ಈ ನಂಜುಂಡೇಶ್ವರನಿಗೆ ಇದೆ ಎಂಬುದು ಭಕ್ತರ ದೃಢವಾದ ನಂಬಿಕೆಯಾಗಿದೆ.
ಈ ದೇವಸ್ಥಾನಕ್ಕೆ ಭೇಟಿ ನಂಜುಂಡೇಶ್ವರ ದರ್ಶನವನ್ನು ಪಡೆಯುವುದರಿಂದ ನಾವು ಕಾಶಿ ವಿಶ್ವನಾಥನ ದರ್ಶನವನ್ನು ಪಡೆದ ಪುಣ್ಯವನ್ನು ಪಡೆದುಕೊಳ್ಳಬಹುದು ಎನ್ನುವ ನಂಬಿಕೆಯೂ ಇದೆ. ಶಿವಪುರಾಣದಲ್ಲೂ ಈ ದೇವಾಲಯದ ಉಲ್ಲೇಖವಿದೆ. ಸಮುದ್ರ ಮಂಥನದ ಸಮಯದಲ್ಲಿ ಲಕ್ಷ್ಮಿ ಕ್ಷೀರ ಸಾಗರದಿಂದ ಉದ್ಭವಗೊಂಡಾಗ ವಿಷ್ಣುವನ್ನು ನೋಡಿ ತಾನು ಆತನನ್ನು ವಿವಾಹವಾಗಬೇಕೆಂದುಕೊಳ್ಳುತ್ತಾಳೆ. ಈ ಕಾರಣಕ್ಕಾಗಿ ಅವಳು ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕುಳಿತು ಶಿವನನ್ನು ತಪಸ್ಸು ಮಾಡುತ್ತಾಳೆ. ಆಕೆಯ ತಪಸ್ಸಿಗೆ ಒಲಿದ ಶಿವನು ಆಕೆಯ ಮುಂದೆ ಪ್ರತ್ಯಕ್ಷನಾಗಿ ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ವಿವಾಹ ಮಾಡಿಸಿದ್ದನು ಎನ್ನುವ ನಂಬಿಕೆಯಿದೆ.
ಬೆನ್ನು, ಸೊಂಟ ಹಾಗೂ ಮಂಡಿ ನೋವಿನಿಂದ ಬಳಲುತ್ತಿರುವ ಭಕ್ತರು ಮೊದಲು ಪವಿತ್ರ ಕಪಿಲಾ ನದಿಯಲ್ಲಿ ಮಿಂದೆದ್ದು, ಒದ್ದೆ ಬಟ್ಟೆಯಲ್ಲಿಯೇ ಸ್ವಾಮಿಯ ದರ್ಶನ ಪಡೆಯುತ್ತಾರೆ. ಈ ದೇವಾಲಯದಲ್ಲಿ ಭಕ್ತರು ತಮ್ಮ ಶಾರೀರಿಕ ನೋವುಗಳನ್ನು ದೂರ ಮಾಡುವಂತೆ ಪ್ರಾರ್ಥಿಸಿ ಉರುಳು ಸೇವೆ ಮಾಡುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ವಾಡಿಕೆ. ಹಾಗೆಯೇ, ನೋವಿರುವ ಜಾಗಕ್ಕೆ ಸ್ವಾಮಿಯ ಪ್ರಸಾದವಾದ ಭಸ್ಮವನ್ನು (ವಿಭೂತಿ) ಹಚ್ಚಿಕೊಳ್ಳುವುದರಿಂದ ನೋವು ಬೇಗನೆ ಶಮನವಾಗುತ್ತದೆ. ಕೆಲವರು ಬೆಳ್ಳಿ ಅಥವಾ ಮರದ ಕೈ-ಕಾಲುಗಳ ಆಕೃತಿಗಳನ್ನು ದೇವರಿಗೆ ಹರಕೆಯಾಗಿ ಅರ್ಪಿಸುವ ಮೂಲಕ ತಮ್ಮ ಕೀಲು ನೋವು, ಮಂಡಿ ನೋವುಗಳಿಂದ ಶಾಶ್ವತ ಮುಕ್ತಿ ಪಡೆಯುತ್ತಾರೆ.
ಒಮ್ಮೆ ನಂಜನಗೂಡಿನ ಈ ಪವಿತ್ರ ಸನ್ನಿಧಾನಕ್ಕೆ ಭೇಟಿ ನೀಡಿ. ಕಪಿಲಾ ನದಿಯಲ್ಲಿ ಸ್ನಾನ ಮಾಡಿ, ಭಕ್ತಿಯಿಂದ ಸ್ವಾಮಿಯ ದರ್ಶನ ಪಡೆದರೆ ಖಂಡಿತವಾಗಿಯೂ ನಿಮ್ಮ ದೈಹಿಕ ಬಾಧೆಗಳೆಲ್ಲವೂ ದೂರವಾಗಿ, ಸಂಪೂರ್ಣ ಆರೋಗ್ಯ ನಿಮ್ಮದಾಗುತ್ತದೆ.
https://www.newsics.com/2026/05/12/crack-in-aiadmk-palaniswami-demands-resignation/