newsics.com/ನ್ಯೂಸಿಕ್ಸ್
ಬೆಂಗಳೂರು : ಮದುವೆಯಾದ ಎಂಟು ತಿಂಗಳಲ್ಲೇ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ನಗರದ ಯಶವಂತಪುರದಲ್ಲಿ ನಡೆದಿದೆ.
ಶಾರದ ಎಂಬಾಕೆಯನ್ನು ಮಹೇಶ್ ಎಂಬಾತನಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಮದುವೆ ಆದಾಗಿನಿಂದಲೂ ಪತಿ ಮಹೇಶ್, ಹಣಕ್ಕಾಗಿ ಕಿರುಕುಳ ಕೊಡ್ತಿದ್ದ ಎಂದು ಇದೀಗ ಶಾರದಾ ಕುಟುಂಬಸ್ಥರು ಆರೋಪ ಮಾಡಿದ್ದಾರೆ
ರೂಮ್ನಲ್ಲಿದ್ದ ಶಾರದ ಸಾವಿಗೂ ಮುನ್ನ ಮನೆಯ ಹಾಲ್ನಲ್ಲೇ ಇದ್ದ ಗಂಡ ಮಹೇಶನಿಗೆ ವಿಡಿಯೋ ಕಾಲ್ ಮಾಡಿದ್ದಳಂತೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ರು. ಆತ ತಡೆಯೋ ಪ್ರಯತ್ನ ಮಾಡಿಲ್ಲ ಎಂದು ಮೃತ ಶಾರದ ಪೋಷಕರು ಆರೋಪ ಮಾಡಿದ್ದಾರ
ಆತ್ಮಹತ್ಯೆ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದ್ರೆ ಪೊಲೀಸರು ಸ್ಥಳ ಮಹಜರು ಸರಿಯಾಗಿ ನಡೆಸಿಲ್ಲ ಎಂದು ಮೃತ ಶಾರದ ಪೋಷಕರು, ಗೃಹ ಸಚಿವರಿಗೆ ದೂರು ನೀಡಿದ್ದಾರೆ. ದೂರು ನೀಡಿದ ಹಿನ್ನೆಲೆ ಪೊಲೀಸರು ಮತ್ತೆ ಸ್ಥಳ ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಇನ್ನು ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
https://www.newsics.com/2026/05/07/sister-and-brother-in-a-dispute-run-away-and-get-married/