ವನ್ಯಜೀವಿಗಳ ಸಂತಾನ ಶಕ್ತಿ ಹರಣ ಅಥವಾ ಚುಚ್ಚುಮದ್ದು ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದ್ದು, ಈ ಪ್ರಸ್ತಾವಕ್ಕೆ ಸಾರ್ವಜನಿಕರ ಸಲಹೆಗಳನ್ನು ಕೇಳಿದೆ.
ಇತ್ತೀಚಿಗೆ ವನ್ಯಜೀವಿಗಳು ಕಾಡಿನಿಂದ ನಾಡಿನತ್ತ ಬರುತ್ತಿದ್ದು, ಇದರಿಂದ ಆಸ್ತಿ-ಪಾಸ್ತಿ ಹಾಗೂ ಪ್ರಾಣಹಾನಿ ಉಂಟಾಗುತ್ತಿವೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಾಣಿಗಳು ಜೀವಿಸಬೇಕು, ಅದೇ ರೀತಿ ಮನುಷ್ಯರು ಕೂಡ ಜೀವಿಸಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಕೆಲವು ಆಯ್ದ ಕಾಡು ಪ್ರಾಣಿಗಳ ಸಂತತಿಯು ಹೆಚ್ಚಾಗದ ರೀತಿ ಅವುಗಳಿಗೆ ಸಂತಾನಹರಣ ಚಿಕಿತ್ಸೆ ಮಾಡುವ ಪ್ರಸ್ತಾವವನ್ನು ಸಾರ್ವಜನಿಕ ಚರ್ಚೆಗೆ ಬಿಟ್ಟಿದೆ. ಇಲ್ಲಿ ಬರುವ ಸಾಧಕ-ಬಾಧಕಗಳ ಚರ್ಚೆಯ ನಂತರ ಅದರ ಜಾರಿ ಅಥವಾ ಈ ಪ್ರಸ್ತಾವವನ್ನು ಕೈಬಿಡುವ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ.
ಸರ್ಕಾರದ ಈ ಪ್ರಸ್ತಾವನೆ ಕುರಿತು ಖ್ಯಾತ ವನ್ಯಜೀವಿ ತಜ್ಞ ಕೃಪಾಕರ್ ಸೇನಾನಿ ಮಾತನಾಡಿದ್ದಾರೆ, ಈ ರೀತಿಯ ಚಿಂತನೆ ಸರಿಯಲ್ಲ. ಇದನ್ನು ವಾಸ್ತವಿಕವಾಗಿ ವನ್ಯಜೀವಿಗಳಿಗೆ ಮಾಡಲು ಸಾಧ್ಯವಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೃಪಾಕರ್ ಹೇಳಿದ್ದೇನು? ವನ್ಯಜೀವಿಗಳಾದ ಆನೆ, ಹುಲಿ, ಚಿರತೆ, ಕರಡಿ ಸೇರಿದಂತೆ ಹಲವು ಕಾಡು ಪ್ರಾಣಿಗಳು ಕಾಡಿನಿಂದ ಹೊರಗೆ ಬಂದು ಮಾನವರ ಮೇಲೆ ಹಾಗೂ ಆಸ್ತಿ-ಪಾಸ್ತಿ ಹಾನಿ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿರುವುದು ನಿಜ. ಆದರೆ, ಮಾನವ – ವನ್ಯಜೀವಿ ಸಂಘರ್ಷಕ್ಕೆ ಅಂತ್ಯ ಹಾಡಲು ಸರ್ಕಾರ ಮತ್ತು ಸಚಿವರು ತೆಗೆದುಕೊಳ್ಳಬೇಕೆಂದಿರುವ ಅಭಿಪ್ರಾಯ ಅಷ್ಟು ಸುಲಭದ್ದಲ್ಲ. ವಾಸ್ತವವಾಗಿ ಕಾಡು ಪ್ರಾಣಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಲು ಕಷ್ಟಸಾಧ್ಯ. ಹಾಗೊಂದು ವೇಳೆ ಮಾಡಬೇಕೆಂದರೂ ಅದು ಅಷ್ಟು ಸುಲಭದ ಕೆಲಸವಲ್ಲ. ಕೇವಲ ಮೃಗಾಲಯದ ಪ್ರಾಣಿಗಳಿಗಷ್ಟೇ ವನ್ಯಜೀವಿಗಳಿಗೆ ಸಂತಾನ ನಿಯಂತ್ರಣ ಚಿಕಿತ್ಸೆಯನ್ನು ಮಾಡಬಹುದು ಎಂದು ಕೃಪಾಕರ್ ಹೇಳಿದ್ದಾರೆ.
ಒಂದು ವೇಳೆ ಈ ರೀತಿಯ ಚಿಕಿತ್ಸೆಯನ್ನ ಆನೆಗೆ ಮಾಡಿದರೆ ಅದು ಕಷ್ಟ. ಕಾಡುಪ್ರಾಣಿ ಜೀವನ ಶೈಲಿಯೇ ಏರುಪೇರಾಗುತ್ತದೆ. ಕೆಲವು ಅನಾಹುತಗಳಿಗೂ ಕಾರಣವಾಗಬಹುದು ಎಂದು ಹೇಳುವ ಮೂಲಕ ನಗರ ಪ್ರದೇಶದ ಬೀದಿನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿದ ನಂತರ ಅವುಗಳಲ್ಲಾದ ಬದಲಾವಣೆ ಬಗ್ಗೆ ಕೃಪಾಕರ್ ವಿವರಣೆ ನೀಡಿದರು.
ಮನುಷ್ಯ ವಾಸಿಸುವ ಪ್ರದೇಶವೇ ಬೇರೆ. ವನ್ಯಜೀವಿಗಳು ಇರುವ ಪರಿಸರವೇ ಬೇರೆ. ಆದ್ದರಿಂದ ಅವುಗಳ ಸಂತತಿ ನಿಯಂತ್ರಣದ ಬಗ್ಗೆ ವೈಜ್ಞಾನಿಕವಾಗಿ ಅನುಭವಿ ತಜ್ಞರಿಂದ ಸಂಶೋಧನೆ ಮಾಡಿಸಬೇಕು. ಕಳೆದ 15 ವರ್ಷಗಳಿಂದ ವನ್ಯಜೀವಿಗಳ ಸಂಖ್ಯೆ ಅಷ್ಟೇ ಇದೆ. ಅವುಗಳ ಸಂಖ್ಯೆ ಹೆಚ್ಚಾಗಿಲ್ಲ ಎಂಬುದು ವೈಜ್ಞಾನಿಕ ಗಣತಿಯಿಂದ ಸಾಬೀತಾಗಿದೆ ಎಂದು ಕೃಪಾಕರ್ ವಿವರಿಸಿದರು.
ಕರಾವಳಿ ಜಿಲ್ಲೆಗಳಿಗೆ ಬಿಸಿ ಗಾಳಿ ಎಚ್ಚರಿಕೆ;ವಿವಿಧೆಡೆ ಶುಷ್ಕ ವಾತಾವರಣ