https://youtube.com/shorts/cT9AQdRv8BA?si=HVgZ6-lH8mLj32-K
newsics.com
ನವದೆಹಲಿ: ಟಿವಿಎಸ್ ಮೋಟಾರ್ನ ನಿವೃತ್ತ ಅಧ್ಯಕ್ಷರು ಮತ್ತು ಟಾಟಾ ಗ್ರೂಪ್ನ ಏಳು ಟ್ರಸ್ಟ್ಗಳ ಉಪಾಧ್ಯಕ್ಷರು ಮತ್ತು ಟ್ರಸ್ಟಿ ವೇಣು ಶ್ರೀನಿವಾಸನ್ ಅವರು ಶನಿವಾರ ಬಾಯಿ ಹಿರಾಬಾಯಿ ಚಾರಿಟಬಲ್ ಟ್ರಸ್ಟ್ (ಟಾಟಾ ಟ್ರಸ್ಟ್)ಗೆ ರಾಜೀನಾಮೆ ನೀಡಿದ್ದಾರೆ.
ನಿಯಮಗಳ ಪ್ರಕಾರ ಟ್ರಸ್ಟೀ ಆಗಿ ಕೆಲಸ ಮಾಡಲು ಅರ್ಹತೆ ಹೊಂದಿಲ್ಲ ಎನ್ನುವ ತಕರಾರು ಬಂದ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಮಾಜಿ ಟ್ರಸ್ಟೀ ಮೆಹ್ಲೀ ಮಿಸ್ತ್ರಿ ಅವರು ಟ್ರಸ್ಟೀಗಳ ಆಯ್ಕೆ ಅಕ್ರಮವಾಗಿ ಆಗಿದೆ ಎಂದು ಆಕ್ಷೇಪ ಸಲ್ಲಿಕೆ ಮಾಡಿದ್ದರು.
ಬಾಯ್ ಹೀರಾಬಾಯ್ ಚಾರಿಟಬಲ್ ಟ್ರಸ್ಟ್ಗೆ ವೇಣು ಶ್ರೀನಿವಾಸನ್ ಅವರನ್ನು ಟ್ರಸ್ಟೀ ಆಗಿ ಮಾಡಿದ್ದೇ ರತನ್ ಟಾಟಾ. ಆಗಲೇ ಈ ನೇಮಕಾತಿ ಬಗ್ಗೆ ತಕರಾರುಗಳು ಮತ್ತು ಚರ್ಚೆಗಳು ನಡೆದಿದ್ದವು. ಟ್ರಸ್ಟ್ನಲ್ಲಿ ಅಕ್ರಮ ನಡೆದಿದ್ದು ಅದರ ತನಿಖೆ ನಡೆಸಿಸಬೇಕೆಂದು ಮೆಹ್ಲಿ ಮಿಸ್ತ್ರಿ ಅವರು ಮಹಾರಾಷ್ಟ್ರ ಚಾರಿಟಿ ಕಮಿಷನರ್ ಎದುರು ಅಫಿಡವಿಟ್ ಸಲ್ಲಿಸಿದ್ದಾರೆ. ವೇಣು ಶ್ರೀನಿವಾಸನ್ ಮತ್ತು ವಿಜಯ್ ಸಿಂಗ್ ಅವರ ನೇಮಕಾತಿಯನ್ನು ಅವರು ಪ್ರಶ್ನಿಸಿದ್ದಾರೆ.
ಟಾಟಾ ಟ್ರಸ್ಟ್ಗಳ ವೆಬ್ಸೈಟ್ ಪ್ರಕಾರ, ಬಾಯಿ ಹಿರಾಬಾಯಿ ಜಮ್ಸೆಡ್ ಜಿ ಟಾಟಾ ನವಸಾರಿ ದತ್ತಿ ಸಂಸ್ಥೆ 1923 ರಲ್ಲಿ ಸ್ಥಾಪಿಸಲಾದ ಲೋಕೋಪಕಾರಿ ಟ್ರಸ್ಟ್ ಆಗಿದ್ದು, ಗುಜರಾತ್ನ ನವಸಾರಿಯಲ್ಲಿ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯ ಮೂಲಕ ಪಾರ್ಸಿ ಮತ್ತು ಸಮುದಾಯ ಕಲ್ಯಾಣಕ್ಕೆ ಸಹಾಯ ಮಾಡುತ್ತದೆ. ಇದು ಸರ್ ರತನ್ ಟಾಟಾ ಟ್ರಸ್ಟ್ನೊಂದಿಗೆ ಸಾಮಾನ್ಯ ಟ್ರಸ್ಟಿಗಳ ಮಂಡಳಿಯನ್ನು ಹಂಚಿಕೊಳ್ಳುವ ಮಿತ್ರ ಟಾಟಾ ಟ್ರಸ್ಟ್ಗಳ ಭಾಗವಾಗಿದೆ.
ಇದಕ್ಕೂ ಮೊದಲು ಫೆಬ್ರವರಿ 2026 ರಲ್ಲಿ ಟಾಟಾ ಶಿಕ್ಷಣ ಮತ್ತು ಅಭಿವೃದ್ಧಿ ಟ್ರಸ್ಟ್ (TEDT) ಮಂಡಳಿಯಲ್ಲಿ ಟ್ರಸ್ಟಿಯಾಗಿದ್ದ ಮಿಸ್ತ್ರಿ, ಟಾಟಾ ಟ್ರಸ್ಟ್ಗಳಾದ್ಯಂತ ಉಪಾಧ್ಯಕ್ಷ ಸ್ಥಾನದ ಪ್ರಸ್ತಾವಿತ ರದ್ದುಗೊಳಿಸುವಿಕೆಗೆ ಸಂಬಂಧಿಸಿದ ಪ್ರತ್ಯೇಕ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
https://www.newsics.com/2026/04/06/actor-bows-to-audience-in-movie-theater/