https://youtube.com/shorts/1G3iDuCfqaQ?si=rbtHZp_4mD8cY9Sv
newsics.com
ನವದೆಹಲಿ: ಅಡುಗೆಯಂತಹ ಮನೆಗೆಲಸಗಳನ್ನು ಮಾಡಲು ಪತ್ನಿ ವಿಫಲಳಾಗಿದ್ದಾಳೆ ಎಂಬ ಕಾರಣವನ್ನು ಕ್ರೌರ್ಯ ಎಂದು ಪರಿಗಣಿಸಿ ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ನ್ಯಾಯಮೂರ್ತಿಗಳಾದ ಸಂದೀಪ್ ಮೆಹ್ತಾ ಮತ್ತು ವಿಕ್ರಮ್ ನಾಥ್ ಪೀಠವು, ವೈವಾಹಿಕ ಜೀವನದಲ್ಲಿ ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದೆ. ಅಲ್ಲದೆ, ಸಮಾಜದ ನಿರೀಕ್ಷೆಗಳು ಈಗ ಬದಲಾಗಿವೆ ಎಂಬುದನ್ನು ಗಮನಿಸಿದೆ.
ನೀವು ಮದುವೆಯಾಗುತ್ತಿರುವುದು ಮನೆಗೆಲಸದವಳನ್ನಲ್ಲ , ಬದಲಿಗೆ ಜೀವನ ಸಂಗಾತಿಯನ್ನು, ಎಂದು ವಿಚಾರಣೆಯ ವೇಳೆ ನ್ಯಾಯಮೂರ್ತಿ ಮೆಹ್ತಾ ಮಾರ್ಮಿಕವಾಗಿ ನುಡಿದರು. ಇದಕ್ಕೆ ದನಿಗೂಡಿಸಿದ ನ್ಯಾಯಮೂರ್ತಿ ನಾಥ್, ನೀವು ಕೂಡ ಅಡುಗೆ, ಬಟ್ಟೆ ಒಗೆಯುವುದು ಮುಂತಾದ ಕೆಲಸಗಳಲ್ಲಿ ಸಹಕರಿಸಬೇಕು. ಇಂದಿನ ಕಾಲಮಾನವೇ ಬೇರೆಯಿದೆ, ಎಂದರು.
ಕುಟುಂಬ ನ್ಯಾಯಾಲಯವು ತನ್ನ ಪರವಾಗಿ ನೀಡಿದ್ದ ವಿಚ್ಛೇದನ ತೀರ್ಪನ್ನು ಹೈಕೋರ್ಟ್ ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಪತಿಯೊಬ್ಬರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
2017ರಲ್ಲಿ ವಿವಾಹವಾಗಿದ್ದ ಈ ದಂಪತಿಗೆ ಎಂಟು ವರ್ಷದ ಮಗನಿದ್ದಾನೆ. ಮದುವೆಯಾದ ಒಂದು ವಾರದಲ್ಲೇ ಪತ್ನಿಯ ವರ್ತನೆ ಬದಲಾಯಿತು, ಅವಳು ಪತಿ ಮತ್ತು ಅತ್ತೆ-ಮಾವನಿಗೆ ನಿಂದಿಸುತ್ತಿದ್ದಳು, ಅಡುಗೆ ಮಾಡಲು ನಿರಾಕರಿಸುತ್ತಿದ್ದಳು ಮತ್ತು ಮಗನ ತೊಟ್ಟಿಲು ಶಾಸ್ತ್ರಕ್ಕೆ ಪತಿಯನ್ನು ಆಹ್ವಾನಿಸಿರಲಿಲ್ಲ ಎಂದು ಪತಿ ‘ಕ್ರೌರ್ಯ’ದ ಆರೋಪ ಹೊರಿಸಿದ್ದನು
ಕುಟುಂಬ ನ್ಯಾಯಾಲಯವು ಮೊದಲು ಪತಿಯ ಪರವಾಗಿ ವಿಚ್ಛೇದನ ನೀಡಿತ್ತು. ಆದರೆ ನಂತರಹೈಕೋರ್ಟ್ ಆ ತೀರ್ಪನ್ನು ರದ್ದುಪಡಿಸಿತ್ತು. ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸಂಧಾನಕ್ಕೆ (ಕಳುಹಿಸಿತ್ತಾದರೂ, ಅಲ್ಲಿ ಯಾವುದೇ ಪರಿಹಾರ ಸಿಗಲಿಲ್ಲ. ಇದೀಗ ಪೀಠವು ಮುಂದಿನ ವಿಚಾರಣೆಗೆ ಪತಿ-ಪತ್ನಿ ಇಬ್ಬರೂ ಖುದ್ದಾಗಿ ಹಾಜರಿರುವಂತೆ ಹೇಳಿದೆ.
https://www.newsics.com/2026/03/21/hamsalekha-ravichandran-samagama-on-one-platform/