https://youtube.com/shorts/1G3iDuCfqaQ?si=rbtHZp_4mD8cY9Sv
newsics.com
ಗಾಂಧೀನಗರ: ಗುಜರಾತ್ನ ಸೂರತ್ನಲ್ಲಿ 10,000 ರೂ. ಹಣ ವಿತ್ಡ್ರಾ ಮಾಡಲು ಹೋದ ವ್ಯಕ್ತಿಗೆ ಎಟಿಎಂ ದೋಷದಿಂದ 3 ಲಕ್ಷ ರೂ. ಸಿಕ್ಕಿರುವ ಘಟನೆ ನಡೆದಿದೆ.
ಒಂಬತ್ತು ವರ್ಷಗಳು, ಲೆಕ್ಕವಿಲ್ಲದಷ್ಟು ಇಮೇಲ್ಗಳು ಮತ್ತು ದೂರುಗಳ ದೀರ್ಘ ಹೋರಾಟದ ನಂತರ, ಬ್ಯಾಂಕ್ ಆಫ್ ಬರೋಡಾ ಈಗ ಮೂಲ ಮೊತ್ತದ ಸುಮಾರು 30 ಪಟ್ಟು ಪಾವತಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಈತ ಹಣ ಪಡೆದಿದ್ದು ಈಗ, ಆದರೆ ಹಣ ತೆಗೆಯಲು ಹೋಗಿದ್ದು 2017ರಲ್ಲಿ. ಎಟಿಎಂ ಮಶಿನ್ನಲ್ಲಿ ಕಾರ್ಡ್ ಹಾಕಿ 10,000 ನಮೂದಿಸಿದ ಬಳಿಕ ಹಣ ಬರಲೇ ಇಲ್ಲ. ಆದರೆ 10 ಸಾವಿರ ಕಡಿತವಾಗಿದೆ ಎಂದು ಮೆಸೇಜ್ ಬಂದಿದೆ.
ವಿಚಾರಣೆ ವೇಳೆ ಗ್ರಾಹಕ ಎಸ್ಬಿಐ ಎಟಿಂ ಬಳಸಿದ್ದಾರೆ. ನಮ್ಮ ದಾಖಲೆ ಸರಿಯಾಗಿದೆ. ಅದು ಎಸ್ಬಿಐ ಎಟಿಎಂ ಸಮಸ್ಯೆ ಎಂದು ವಾದ ಮಂಡಿಸಿದೆ. ಆದರೆ ಈ ವಾದವನ್ನು ಗ್ರಾಹಕರ ನ್ಯಾಯಾಲಯ ತಳ್ಳಿಹಾಕಿದೆ. ಸರಿಯಾದ ದಾಖಲೆ ನೀಡಿ ಮಾತನಾಡಿ, ಒಂದು ವೇಳೆ ಹಣ ಸಿಗದಿದ್ರೆ ಆರ್ಬಿಐ ನಿಯಮದ ಪ್ರಕಾರ 5 ದಿನದಲ್ಲಿ ರೀಫಂಡ್ ಮಾಡಬೇಕಿತ್ತು. ಆದರೆ ಬ್ಯಾಂಕ್ 9 ವರ್ಷವಾದರೂ ಮಾಡಿಲ್ಲ ಎಂದು ಗರಂ ಆಗಿದೆ.
ಗ್ರಾಹಕರ ವೇದಿಕೆ ನ್ಯಾಯಲ ಗ್ರಾಹಕನಿಗೆ 10,000 ರೂಪಾಯಿಗೆ ಪ್ರತಿ ವರ್ಷ ವಾರ್ಷಿಕ 9 ರೂಪಾಯಿ ಬಡ್ಡಿ ಹಾಗೂ ವಿಳಂಬ ಮಾಡಿದ್ದಕ್ಕೆ ಪ್ರತಿ ದಿನ 100 ರೂಪಾಯಂತೆ ಪರಿಹಾರ ನೀಡಲು ಸೂಚಿಸಿದೆ. ಇದರಂತೆ ಒಟ್ಟು 3288 ದಿನ , ಬಡ್ಡಿ ಸೇರಿ 3,28,800 ರೂಪಾಯಿ ಹಣವನ್ನು ಗ್ರಾಹಕನಿಗೆ ನೀಡಲು ಬರೋಡ್ ಬ್ಯಾಂಕ್ ಒಪ್ಪಿಕೊಂಡಿದೆ.