https://youtube.com/shorts/9RsasXrq5aU?si=7o1s1Fcwa742mk87
Subscribe ನ್ಯೂಸಿಕ್ಸ್ ಕನ್ನಡ
newsics.com
ಬೆಂಗಳೂರು : ಕಾರ್ಯಕ್ರಮವೊಂದರಲ್ಲಿ ಡಿಕೆ ಶಿವಕುಮಾರ್ ಹಾಗೂ ಪ್ರದೀಪ್ ಈಶ್ವರ್ ಅವರು ವೇದಿಕೆಯೊಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಭಾಷಣ ಮಾಡುತ್ತಿದ್ದಾಗ ಪ್ರದೀಪ್ ಈಶ್ವರ್ ಹಿಂದೆಯೇ ಬಂದು ನಿಂತಿದ್ದಾರೆ. ಇದನ್ನು ನೋಡಿದ ಡಿಸಿಎಂ ಬೆನ್ನು ತಟ್ಟಿ ಹೋಗಿ ಕುಳಿತುಕೊಳ್ಳಿ ಎಂದು ತಳ್ಳಿದ್ದಾರೆ. ಕೂಡಲೇ ಪ್ರದೀಪ್ ಈಶ್ವರ್ ವೇದಿಕೆಯಲ್ಲಿದ್ದ ಕುರ್ಚಿಯಲ್ಲಿ ಕೂತಿದ್ದಾರೆ.
ಒಟ್ಟಾರೆ ಹಿಂದೆಯೇ ಹಿಂದೆಯೇ ಬಂದ ಪ್ರದೀಪ್ ಈಶ್ವರ್ ನಡವಳಿಕೆಗೆ ಡಿಸಿಎಂ ಗರಂ ಆಗಿದ್ದಾರೆ.
ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸಿಎಂ ಕುರ್ಚಿಗಾಗಿ ಪೈಪೋಟಿ ಹೆಚ್ಚುತ್ತಲೇ ಇದೆ. ಸಿದ್ದರಾಮಯ್ಯರ ಬಣದಲ್ಲಿ ಗುರುತಿಸಿಕೊಂಡಿರುವ ಪ್ರದೀಪ್ ಈಶ್ವರ್ ಅವರು ಇನ್ನೂ ಸಚಿವ ಸಂಪುಟ ಬದಲಾವಣೆಗೆ ಒತ್ತಾಯಿಸಿ ಕೂಡಾ ಪತ್ರವನ್ನು ಬರೆದಿದ್ದಾರೆ.