Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ASTRO ಇಂದು ಆದಿತ್ಯ ಚಂಡಾಲ ಯೋಗ- ರಾಹು ಸೂರ್ಯ ಸಂಯೋಗ, ಈ ಐದು ರಾಶಿಗಳ ಜನರಿಗೆ ಕೆಡುಕು, ಜಾಗ್ರತೆಯಿಂದಿರಿ
ಈ ದಿನಜ್ಯೋತಿಷ್ಯಪಂಚಾಂಗಪ್ರಮುಖ

ASTRO ಇಂದು ಆದಿತ್ಯ ಚಂಡಾಲ ಯೋಗ- ರಾಹು ಸೂರ್ಯ ಸಂಯೋಗ, ಈ ಐದು ರಾಶಿಗಳ ಜನರಿಗೆ ಕೆಡುಕು, ಜಾಗ್ರತೆಯಿಂದಿರಿ

Share
4 Min Read
SHARE

https://youtube.com/shorts/11hvM0bsJ2E?si=Q5TtqzkdIZKrnxiz

Subscribe ನ್ಯೂಸಿಕ್ಸ್ ಕನ್ನಡ

newsics.com

ಜ್ಯೋತಿಷ್ಯದ ಪ್ರಕಾರ ಪ್ರತಿ ಗ್ರಹವೂ ಒಂದು ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಕೆಲವೊಮ್ಮೆ ಅಂತಹ ಬದಲಾವಣೆಗಳ ಸಮಯದಲ್ಲಿ ಗ್ರಹಗಳ ಸಂಯೋಗ ಸಂಭವಿಸುವುದು.

ಈ ಸಂಯೋಗಗಳಲ್ಲಿ ಕೆಲವು ಹಲವು ವರ್ಷಗಳ ನಂತರ ಸಂಭವಿಸುತ್ತವೆ. ಆ ನಿಟ್ಟಿನಲ್ಲಿ ರಾಹುವನ್ನು ಗ್ರಹಗಳಲ್ಲಿ ನೆರಳು ಗ್ರಹವೆಂದು ಪರಿಗಣಿಸಲಾಗುತ್ತದೆ. ಈ ರಾಹು ಪ್ರಸ್ತುತ ಕುಂಭ ರಾಶಿಯಲ್ಲಿ ಪ್ರಯಾಣಿಸುತ್ತಿದೆ. ಅದೇ ರೀತಿ ಗ್ರಹಗಳ ಅಧಿಪತಿ ಎಂದು ಪರಿಗಣಿಸಲಾದ ಸೂರ್ಯ ಫೆಬ್ರವರಿ 14ರಂದು ಅಂದರೆ ಇಂದು ಮೀನ ರಾಶಿಯನ್ನು ಪ್ರವೇಶಿಸಲಿದೆ. ಇದರಿಂದಾಗಿ ಮೀನ ರಾಶಿಯಲ್ಲಿ ರಾಹು-ಸೂರ್ಯ ಸಂಯೋಗ ಆದಿತ್ಯ ಚಂಡಾಲ ಯೋಗ ರೂಪಗೊಳ್ಳುವುದು. ಇದು ಕೆಲ ರಾಶಿಯವರಿಗೆ ಜೀವನದಲ್ಲಿ ಹಲವಾರು ಸಮಸ್ಯೆ ಹಾಗೂ ಸವಾಲುಗಳನ್ನು ತರಲಿದೆ.

ಮಿಥುನ ರಾಶಿಯ 9ನೇ ಮನೆಯಲ್ಲಿ ಆದಿತ್ಯ ಚಂಡಾಲ ಯೋಗ ರೂಪಗೊಳ್ಳಲಿದೆ. ಈ ಯೋಗ ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಕಡಿಮೆ ಮಾಡುವುದು. ಉದ್ಯೋಗದಲ್ಲಿ ಒತ್ತಡವನ್ನು ಅನುಭವಿಸಬಹುದು. ನೀವು ನಿಮ್ಮ ಮಾತನ್ನು ನಿಯಂತ್ರಿಸಬೇಕು. ರಾಜಕೀಯ ಮತ್ತು ಕೆಲಸದಲ್ಲಿ ವಿವಾದಗಳಿಂದ ದೂರವಿರಿ. ಇಲ್ಲದಿದ್ದರೆ ನೀವು ದೊಡ್ಡ ತೊಂದರೆಗೆ ಸಿಲುಕುತ್ತೀರಿ. ಶತ್ರುಗಳು ಸಕ್ರಿಯರಾಗಿರುತ್ತಾರೆ. ಆದ್ದರಿಂದ ಉದ್ಯಮಿಗಳು ಮತ್ತು ವ್ಯಾಪಾರಿಗಳು ಬಹಳ ಜಾಗರೂಕರಾಗಿರಬೇಕು. ಯಾವುದೇ ಕೆಲಸ ಮಾಡುವಾಗ ಜಾಗರೂಕರಾಗಿರುವುದು ಉತ್ತಮ. ಈ ಸಂಯೋಗದ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಅಗತ್ಯ ಇರುವವರಿಗೆ ದಾನ ಮಾಡುವುದು ಮಂಗಳಕರ. ಅಲ್ಲದೆ ಪ್ರೀತಿ ಹಾಗೂ ಕುಟುಂಬ ವಿಷಯಗಳಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು. ಮನಸ್ತಾಪ ಜಗಳಗಳಾಗುವ ಸಾಧ್ಯತೆಗಳು ಇವೆ. ಹೂಡಿಕೆಗಳನ್ನು ತಪ್ಪಿಸುವುದು ಉತ್ತಮ. ವಾಹನ ಚಲಾಯಿಸುವಾಗ ಬಹಳ ಜಾಗರೂಕರಾಗಿರಿ. ಈ ಸಂಯೋಗದ ಕೆಟ್ಟ ಪರಿಣಾಮಗಳನ್ನು ಕಡಿಮೆ ಮಾಡಲು ಸೂರ್ಯದೇವನ ಮಂತ್ರವನ್ನು ಪಠಿಸಿ.

ಕರ್ಕಾಟಕ ರಾಶಿಯ 8ನೇ ಮನೆಯಲ್ಲಿ ಆದಿತ್ಯ ಚಂಡಾಲ ಯೋಗ ರೂಪಗೊಳ್ಳುವುದು. ಇದು ಕರ್ಕಾಟಕ ರಾಶಿಯವರಿಗೆ ಸಾಕಷ್ಟು ಅಶುಭ ಫಲಗಳನ್ನು ನೀಡಲಿದೆ. ಅನಿರೀಕ್ಷಿತ ನಷ್ಟ, ಕಾನೂನು ಸಮಸ್ಯೆ ಹಾಗೂ ಮಾನಸಿಕ ಒತ್ತಡವನ್ನು ತರಲಿದೆ. ವಿಶೇಷದಲ್ಲಿ ಪ್ರೇಮಿಗಳಿಗೆ ಇದು ಅನುಕೂಲಕರ ಅವಧಿಯಲ್ಲಿ. ಈ ಸಮಯದಲ್ಲಿ ನೀವು ನಿಮ್ಮ ಕೆಲಸದಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಈ ಅವಧಿಯಲ್ಲಿ ನೀವು ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಹಠಾತ್ ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಉಂಟು. ವಿಶೇಷವಾಗಿ ಪ್ರೇಮಿಗಳಿಗೆ ಇದುಉತ್ತಮ ಸಮಯವಲ್ಲ. ಪ್ರೇಮಿಗಳ ನಡುವೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ಅಲ್ಲದೆ ನೀವು ಉಳಿಸಿದ ಹಣ ಕಡಿಮೆಯಾಗುವ ಸಾಧ್ಯತೆಯಿದೆ. ನಿಮ್ಮ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಸಿಗದಿರಬಹುದು. ಈ ಸಂಯೋಗದ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ನೀವು ನಿಯಮಿತವಾಗಿ ಶಿವನನ್ನು ಪೂಜಿಸಬೇಕು.

ಸಿಂಹ ರಾಶಿಯ 7ನೇ ಮನೆಯಲ್ಲಿ ಆದಿತ್ಯ ಚಂಡಾಲ ಯೋಗ ರಾಹು ಸೂರ್ಯನಿಂದಾಗುವುದು. ಇದು ವೈವಾಹಿಕ ಜೀವನದಲ್ಲಿ ಕಲಹ ಉಂಟು ಮಾಡಲಿದೆ. ಕುಂಭ ರಾಶಿಯಲ್ಲಿ ರಾಹು ಸೂರ್ಯ ಸಂಯೋಗ ಸಿಂಹ ರಾಶಿಯವರಿಗೆ ಅಶುಭ ಫಲಿತಾಂಶಗಳನ್ನು ನೀಡಲಿದೆ. ಈ ಅವಧಿಯಲ್ಲಿ ಹೂಡಿಕೆಗಳು ಮತ್ತು ಹಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕು. ವೈಯಕ್ತಿಕ ಜೀವನದಲ್ಲೂ ಸ್ವಲ್ಪ ಅವಮಾನ ಎದುರಿಸಬಹುದು. ಈ ಅವಧಿಯಲ್ಲಿ ಸಂಗಾತಿಯೊಂದಿಗೆ ಜಗಳವಾಡುವ ಸಾಧ್ಯತೆ ಹೆಚ್ಚು. ಸಂಗಾತಿಯೊಂದಿಗೆ ಸಮತೋಲಿತ ಸಂಬಂಧವನ್ನು ಕಾಪಾಡಿಕೊಳ್ಳುವುದು ಅತ್ಯಾವಶ್ಯಕ. ನೀವು ವೃತ್ತಿಪರ ಜೀವನದಲ್ಲಿ ಒತ್ತಡವನ್ನು ಅನುಭವಿಸುವಿರಿ. ವ್ಯವಹಾರ ಪಾಲುದಾರರೊಂದಿಗೆ ಕೆಲವು ವಾದಗಳು ಇರಬಹುದು. ಸಂಗಾತಿಯ ಆರೋಗ್ಯವನ್ನು ನೋಡಿಕೊಳ್ಳುವುದು ಬಹಳ ಮುಖ್ಯ. ಆಸ್ಪತ್ರೆ ವೆಚ್ಚಗಳಿಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗಬಹುದು. ಅಲ್ಲದೆ ಪ್ರೇಮಿಗಳ ನಡುವೆ ವಾದ ವಿವಾದ ಉಂಟಾಗುವ ಸಾಧ್ಯತೆಗಳು ಇವೆ.

ವೃಶ್ಚಿಕ ರಾಶಿಯ ಜಾತಕದ 5ನೇ ಮನೆಯಲ್ಲಿ ಆದಿತ್ಯ ಚಂಡಾಲ ಯೋಗ ಸೃಷ್ಟಿಯಾಗಲಿದೆ. ಇದು ನಿಮಗೆ ಅಶುಭ ಫಲಗಳನ್ನು ನೀಡುವುದು. ಕುಂಭ ರಾಶಿಯಲ್ಲಿ ರಾಹು ಸೂರ್ಯನ ಸಂಯೋಜನೆಯು ವೃಶ್ಚಿಕ ರಾಶಿಯವರಿಗೆ ವಿವಿಧ ಸಮಸ್ಯೆಗಳನ್ನು ಉಂಟುಮಾಡುತ್ತದೆ. ನಿಮ್ಮ ಘನತೆ ಮತ್ತು ಖ್ಯಾತಿಗೆ ವಿವಿಧ ಕಾರಣಗಳಿಂದ ಧಕ್ಕೆಯಾಗಬಹುದು. ನಿಮ್ಮ ಗೌರವವನ್ನು ಕಾಪಾಡಿಕೊಳ್ಳಲು ಶ್ರಮಿಸಬೇಕಾಗುತ್ತದೆ. ಈ ಅವಧಿಯಲ್ಲಿ ಉದ್ಯಮಿಗಳು ಕಠಿಣ ಪರಿಸ್ಥಿತಿಗಳನ್ನು ಎದುರಿಸಬಹುದು. ಲಾಭ ಗಳಿಸುವ ಸಾಧ್ಯತೆಗಳು ಕಡಿಮೆ. ಈ ಸಮಯದಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಹುದು. ಆದ್ದರಿಂದ ಈ ಅವಧಿಯಲ್ಲಿ ಆಂಜನೇಯನ ಪೂಜೆಯತ್ತ ಗಮನ ಹರಿಸುವುದು ಮಂಗಳಕರ. ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳು ಹೆಚ್ಚಾಗಲಿದೆ. ಅವಿವಾಹಿತರಿಗೆ ಸೂಕ್ತ ಸಂಗಾತಿಯನ್ನು ಕಂಡುಹಿಡಿಯುವುದು ತುಂಬಾ ಕಷ್ಟಕರವಾಗಬಹುದು. ಅಲ್ಲದೆ ಪ್ರೇಮಿಗಳ ನಡುವೆಯೂ ಮನಸ್ತಾಪಗಳು ಉಂಟಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಕೆಲವು ತೊಂದರೆಗಳನ್ನು ಎದುರಿಸಬಹುದು. ಈ ಅವಧಿಯಲ್ಲಿ ಯಾವುದೇ ಹೂಡಿಕೆಗಳನ್ನು ಮಾಡದಿರುವುದು ಉತ್ತಮ.

ಮೀನ ರಾಶಿಯ ಜಾತಕದ 12ನೇ ಮನೆಯಲ್ಲಿ ಸೃಷ್ಟಿಯಾಗುವ ಆದಿತ್ಯ ಚಂಡಾಲ ಯೋಗ ಶುಭ ಫಲಗಳನ್ನು ನೀಡುವುದಿಲ್ಲ. ಅತಿಯಾದ ವೆಚ್ಚ ಹಾಗೂ ನಿದ್ರಾಹೀನತೆಯನ್ನು ತರುವುದು. ಅಲ್ಲದೆ ಪ್ರೇಮಿಗಳು ದೂರವಾಗುವ ಸಂದರ್ಭಗಳು ಕೂಡ ಎದುರಾಗಬಹುದು. ಕುಂಭ ರಾಶಿಯಲ್ಲಿ ರಾಹು ಸೂರ್ಯ ಸಂಯೋಗ ಮೀನ ರಾಶಿಯವರಿಗೆ ಸಕಾರಾತ್ಮಕ ಫಲಿತಾಂಶಗಳನ್ನು ನೀಡುವುದಿಲ್ಲ. ಈ ಕಾರಣದಿಂದಾಗಿ ನಿಮ್ಮ ಜೀವನದಲ್ಲಿ ಅನೇಕ ಏರಿಳಿತಗಳು ಉಂಟಾಗುತ್ತವೆ. ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಸಂಗಾತಿಯೊಂದಿಗಿನ ಹಿಂದಿನ ಸಮಸ್ಯೆಗಳು ಮತ್ತೆ ಉದ್ಭವಿಸುವ ಸಾಧ್ಯತೆಗಳು ಇವೆ. ಈ ಸಮಯದಲ್ಲಿ ನೀವು ಹೆಚ್ಚು ತಾಳ್ಮೆಯಿಂದಿರಬೇಕು. ವಿವಿಧ ವಿಷಯಗಳನ್ನು ಸ್ಪಷ್ಟತೆಯೊಂದಿಗೆ ನಿರ್ವಹಿಸಿ. ಈ ಅವಧಿಯಲ್ಲಿ ಅನಗತ್ಯ ವೆಚ್ಚಗಳು ಹೆಚ್ಚಾಗಲಿದೆ. ಇದರಿಂದಾಗಿ ನೀವು ತೀವ್ರ ಒತ್ತಡಕ್ಕೆ ಒಳಗಾಗುವಿರಿ. ವಿವಿಧ ಕಾರಣಗಳಿಂದ ಮನೆಯ ಶಾಂತಿ ಹಾಳಾಗಬಹುದು. ಉದ್ಯೋಗ ಯೋಜನೆಗಳು ವಿಫಲಗೊಳ್ಳುವ ಸಾಧ್ಯತೆ ಉಂಟು. ಕುಟುಂಬ ಸದಸ್ಯರಲ್ಲಿ ಕೆಲವು ವಾದಗಳು ಇರಬಹುದು. ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಜಾಗ್ರತೆ.

TAGGED:bad for people of these five zodiac signsToday's Aditya Chandala Yoga- Rahu-Sun conjunction
Share This Article
Facebook Twitter Copy Link Print
Previous Article ಅಂಗಾಂಗ ದಾನ: ನಾಲ್ವರಿಗೆ ಹೊಸ ಬದುಕು ಕೊಟ್ಟ 10 ತಿಂಗಳ ಮಗು!
Next Article ಮಹಿಳಾ ಪೊಲೀಸ್ ಪೇದೆ ಜತೆ ಹೆಡ್ ಕಾನ್ಸ್‌ಸ್ಟೇಬಲ್ ರಾಸಲೀಲೆ ವಿಡಿಯೋ ಲೀಕ್

Popular Posts

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read

Social Networks

Facebook-f Instagram Twitter
Welcome Back!

Sign in to your account

Lost your password?