Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಗಣೇಶ್ ಮಾತು ಕೇಳದೆ 4 ಕೋಟಿ ಕಳೆದುಕೊಂಡಿದ್ದಾರೆ ಸಹೋದರ ಮಹೇಶ್
ಪ್ರಮುಖಮನರಂಜನೆ

ಗಣೇಶ್ ಮಾತು ಕೇಳದೆ 4 ಕೋಟಿ ಕಳೆದುಕೊಂಡಿದ್ದಾರೆ ಸಹೋದರ ಮಹೇಶ್

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

ಸ್ಯಾಂಡಲ್‌ವುಡ್‌ನ ‘ಗೋಲ್ಡನ್ ಸ್ಟಾರ್’ ಕುಟುಂಬದ ಮತ್ತೊಬ್ಬ ಸದಸ್ಯ ಬಣ್ಣದ ಲೋಕದ ಮಾಯೆಗೆ ಬಿದ್ದು, ಅಣ್ಣ ಹಾಕಿಕೊಟ್ಟ ಭದ್ರ ಬುನಾದಿಯನ್ನು ಕಳೆದುಕೊಂಡಿರೊದು ಚರ್ಚೆಗೆ ಗ್ರಾಸವಾಗಿದೆ.
ಗಣೇಶ್ ಅವರ ಸಹೋದರ ಮಹೇಶ್.
ನಟ ಮಹೇಶ್ ‘ನಮಕ್‌ಹರಾಮ್’ ಎಂಬ ಸಿನಿಮಾ ಮೂಲಕ ಚಿತ್ರರಂಗಕ್ಕೆ ನಾಯಕನಾಗಿ ಪದಾರ್ಪಣೆ ಮಾಡಿದ್ದರು. ಇದಾದ ಬಳಿಕ ಒಂದೆರಡು ಸಿನಿಮಾಗಳಲ್ಲಿ ನಟಿಸಿದರೂ ಅವರಿಗೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಈಗ ‘ಮಗ್ಗಿ ಪುಸ್ತಕ’ ಎಂಬ ಸಿನಿಮಾದಲ್ಲಿ ನೆಗೆಟಿವ್ ಶೆಡ್ ಇರುವ ಪಾತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಸಂದರ್ಶನದಲ್ಲಿ ಮಹೇಶ್ ತಮ್ಮ ಸಿನಿ ಜರ್ನಿಯ ಕಹಿ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ.
ಅಣ್ಣನ ಮಾತು ಮೀರಿ ಬಂದಿದ್ದಕ್ಕೆ ಪಶ್ಚಾತ್ತಾಪ:
“ನನ್ನ ಅಣ್ಣ ಗಣೇಶ್ ಅವರಿಗೆ ಚಿತ್ರರಂಗದ ಕಷ್ಟಗಳು ಚೆನ್ನಾಗಿ ಗೊತ್ತಿತ್ತು. ನಾನು ಸಿನಿಮಾ ಮಾಡುವುದು ಅವರಿಗೆ ಇಷ್ಟವಿರಲಿಲ್ಲ. ಹಾಗಾಗಿಯೇ ಅವರು ನನಗೆ ಒಂದು ಉತ್ತಮ ಬ್ಯುಸಿನೆಸ್ ಸೆಟ್ ಮಾಡಿಕೊಟ್ಟಿದ್ದರು,” ಎಂದು ಮಹೇಶ್ ನೆನಪಿಸಿಕೊಂಡಿದ್ದಾರೆ. ಎಸ್‌ಎಸ್‌ಎಲ್‌ಸಿ ಮುಗಿಸಿ ಪಿಯುಸಿ ಅರ್ಧಕ್ಕೆ ಬಿಟ್ಟಿದ್ದ ಮಹೇಶ್ ಅವರಿಗೆ, ‘ಮುಂಗಾರುಮಳೆ’ ಹಿಟ್ ಆದ ನಂತರ ಗಣೇಶ್ ಅವರು ಎಂಟಿಆರ್ (MTR) ಹೋಲ್‌ ಸೇಲ್ ಡಿಸ್ಟ್ರಿಬ್ಯೂಷನ್ ಬ್ಯುಸಿನೆಸ್ ಆರಂಭಿಸಿಕೊಟ್ಟಿದ್ದರು. ವರ್ಷಕ್ಕೆ ಸುಮಾರು 4 ರಿಂದ 5 ಕೋಟಿ ರೂಪಾಯಿ ವಹಿವಾಟು ನಡೆಯುತ್ತಿದ್ದ ಆ ವ್ಯವಹಾರದಲ್ಲಿ ಮಹೇಶ್ ನೆಲೆ ಕಂಡುಕೊಂಡಿದ್ದರು.
ಆದರೆ, ಸುತ್ತಮುತ್ತಲಿನ ಗೆಳೆಯರ ಪ್ರಚೋದನೆ ಮತ್ತು ಸಿನಿಮಾ ಮೇಲಿನ ವ್ಯಾಮೋಹದಿಂದ ಮಹೇಶ್ ಆ ಲಾಭದಾಯಕ ಬ್ಯುಸಿನೆಸ್ ಅನ್ನು ಅರ್ಧಕ್ಕೆ ನಿಲ್ಲಿಸಿದರು. “ನಾನು ದಡ್ಡನ ತರಹ ಅಣ್ಣ ಹಾಕಿಕೊಟ್ಟ ಬ್ಯುಸಿನೆಸ್ ಹಾಳು ಮಾಡಿಕೊಂಡೆ. ಸಿನಿಮಾ ಮಾಡೋಣ, ನೀವೇ ಹೀರೋ ಅಂತ ಸ್ನೇಹಿತರು ಹೇಳಿದ್ದನ್ನು ನಂಬಿ ಬಂದೆ. ಅಣ್ಣ ಬೇಡ ಅಂದರೂ ಕೇಳಲಿಲ್ಲ. ಆ ನಿರ್ಧಾರ ತಪ್ಪು ಎಂದು ಈಗ ಅನ್ನಿಸುತ್ತಿದೆ, ಆ ಕೊರಗು ಇವತ್ತಿಗೂ ಇದೆ,” ಎಂದು ಮಹೇಶ್ ಭಾವುಕರಾಗಿ ನುಡಿದಿದ್ದಾರೆ.ಗಣೇಶ್ ಅವರ ಕುಟುಂಬದಿಂದ ಕೇವಲ ಮಹೇಶ್ ಮಾತ್ರವಲ್ಲ, ಕಿರಿಯ ಸಹೋದರ ಸೂರಜ್ ಕೃಷ್ಣ ಕೂಡ ‘ನಾನೇ ರಾಜ’ ಎಂಬ ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ ಆ ಸಿನಿಮಾ ಸೋತಿದ್ದರಿಂದ ಅವರು ಚಿತ್ರರಂಗದಿಂದ ದೂರ ಸರಿದು, ಈಗ ತಮ್ಮ ಹುಟ್ಟೂರಾದ ನೆಲಮಂಗಲದ ಅಡಕಮಾರನಹಳ್ಳಿಯಲ್ಲಿ ಅಣಬೆ ವ್ಯಾಪಾರ ಮಾಡಿಕೊಂಡಿದ್ದಾರೆ.
‘ಮಗ್ಗಿ ಪುಸ್ತಕ’ದ ಮೇಲೆ ಭರವಸೆ:
ಮಹೇಶ್ ನಟನೆಯ 5ನೇ ಸಿನಿಮಾ ‘ಮಗ್ಗಿ ಪುಸ್ತಕ’ ಈಗ ಬಿಡುಗಡೆಯಾಗಿದೆ. ಎಚ್. ಸಿ ಮಹೇಶ್ ಬರೆದ ‘ಅವನಿ’ ಎಂಬ ಕಾದಂಬರಿ ಆಧಾರಿತ ಈ ಚಿತ್ರದಲ್ಲಿ ರಂಗಾಯಣ ರಘು ಮತ್ತು ಗಿರಿಜಾ ಲೋಕೇಶ್ ಅಂತಹ ಹಿರಿಯ ಕಲಾವಿದರಿದ್ದಾರೆ. ನೆಗೆಟಿವ್ ರೋಲ್ ಮೂಲಕ ಮಹೇಶ್ ಈ ಬಾರಿ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವ ಭರವಸೆಯಲ್ಲಿದ್ದಾರೆ. ಅಣ್ಣ ಗಣೇಶ್ ಇಂದಿಗೂ ತಮಗೆ ರೋಲ್ ಮಾಡೆಲ್ ಎಂದು ಹೇಳುವ ಮಹೇಶ್, ಕಳೆದುಕೊಂಡಿದ್ದನ್ನು ಸಾಧನೆಯ ಮೂಲಕ ಮರಳಿ ಪಡೆಯುವ ಹಾದಿಯಲ್ಲಿದ್ದಾರೆ.

ಅಮಾವಾಸ್ಯೆಯಂದು ಮಗು ಜನಿಸಿದರೆ ಏನಾಗುತ್ತೆ..? ಶಾಸ್ತ್ರ ಹೇಳುವುದೇನು?

TAGGED:Brother Mahesh lost 4 crores without listening to Ganesh
Share This Article
Facebook Twitter Copy Link Print
Previous Article ಅಮಾವಾಸ್ಯೆಯಂದು ಮಗು ಜನಿಸಿದರೆ ಏನಾಗುತ್ತೆ..? ಶಾಸ್ತ್ರ ಹೇಳುವುದೇನು?
Next Article ಭಾರತದ ಹತ್ತಿರ ಬಿ.ಎನ್‌.ಪಿ. ಕೇಳಿದ್ದೇನು?

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?