https://youtube.com/shorts/8CqHwGKEL5g?si=1-oJ_JGuSNaYETpQ
Subscribe ನ್ಯೂಸಿಕ್ಸ್ ಕನ್ನಡ
newsics.com
ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಸುಚಿತ್ರಾ ನಡುವಿನ ಅನೈತಿಕ ಸಂಬಂಧದ ಕುರಿತು ಮಗಳು ಸುಮಶ್ರೀ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಸುಮಶ್ರೀ, ತಮ್ಮ ತಾಯಿ ಸುಚಿತ್ರಾ ಮತ್ತು ಜ್ಯೋತಿಷಿ ಕಮಲಾಕರ್ ಭಟ್ ನಡುವೆ ಇದ್ದ ಅಕ್ರಮ ಸಂಬಂಧದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ. “ಕಳೆದ 9 ತಿಂಗಳಿಂದ ನನ್ನ ತಾಯಿ ಮತ್ತು ಕಮಲಾಕರ್ ಭಟ್ ನಡುವೆ ಅಕ್ರಮ ಸಂಬಂಧ ಇತ್ತು. ಅದರಿಂದ ಬೇಸತ್ತು ನಾನು ತಂದೆಯೊಂದಿಗೆ ಇರಬೇಕು ಎಂದು ನಿರ್ಧರಿಸಿದ್ದೆ. ನಾನು ನನ್ನ ತಂದೆ ಮಹೇಶ್ ಅವರಿಗೆ ಕರೆ ಮಾಡಿ, ‘ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗದಿದ್ದರೆ ನಾನು ಆತ್ಮ*ಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಹೇಳಿದ್ದೆ” ಎಂದು ಸುಮಶ್ರೀ ತಿಳಿಸಿದ್ದಾರೆ.
ಅದರಂತೆ ಫೆಬ್ರವರಿ 1ರಂದು ಶಿವಮೊಗ್ಗದಿಂದ ಸಿದ್ದಾಪುರ ಪೊಲೀಸ್ ಠಾಣೆಗೆ ತೆರಳಿ, ಅಲ್ಲಿಂದ ಸಂಜೆ 7.30ರ ನಂತರ ತಂದೆಯ ಮನೆಗೆ ಹೋಗಿದ್ದೆ ಎಂದು ಅವರು ಹೇಳಿದ್ದಾರೆ. “ದೊಡ್ಡಪ್ಪ, ದೊಡ್ಡಮ್ಮ ಸೇರಿದಂತೆ ಮನೆಯವರು ಎಲ್ಲರೂ ಪ್ರೀತಿಯಿಂದ ನನ್ನನ್ನು ಬರಮಾಡಿಕೊಂಡರು” ಎಂದು ಸುಮಶ್ರೀ ಹೇಳಿದ್ದಾರೆ.
ಆದರೆ ಅದೇ ದಿನ ರಾತ್ರಿ ಸುಮಾರು 10.30ರ ವೇಳೆಗೆ, ಸುಚಿತ್ರಾ ಕಾರಿನಲ್ಲಿ ಐದಾರು ಜನರೊಂದಿಗೆ ಬಂದು ಮನೆಗೆ ದಾಳಿ ನಡೆಸಿದರು”ಅವರು ಏಕಾಏಕಿ ಮನೆಗೆ ನುಗ್ಗಿ ನನ್ನ ತಂದೆಯ ಮೇಲೆ ಹಲ್ಲೆ ನಡೆಸಿದರು. ಈ ಸಂದರ್ಭದಲ್ಲಿ ನನ್ನ ದೊಡ್ಡಪ್ಪ ವಸಂತ್ ಅವರನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿದೆ” ಎಂದು ಸುಮಶ್ರೀ ಕಣ್ಣೀರಿಟ್ಟಿದ್ದಾರೆ. “ನಮ್ಮ ತಾಯಿ ಮುಸ್ಲಿಂ ಯುವಕರೊಂದಿಗೆ ಬಂದಿದ್ದರು. ಅವರು ಹಿಂದಿಯಲ್ಲಿ ‘ಇವನನ್ನು ಬಿಡಬೇಡಿ’ ಎಂದು ನನ್ನ ತಂದೆಯ ವಿರುದ್ಧ ಅವರಿಗೆ ಸೂಚಿಸುತ್ತಿದ್ದರು” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಗಲಾಟೆ ಹೆಚ್ಚಾಗುತ್ತಿದ್ದಂತೆ, “ನನ್ನನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿ ಹೊರಗೆ ಬರಬೇಡ ಎಂದು ಹೇಳಿದರು. ದೊಡ್ಡಪ್ಪನನ್ನು ಕೊಲೆ ಮಾಡಿದ ಬಳಿಕ, ನನ್ನ ತಂದೆಗೆ ಚಾಕು ಇರಿದರು. ತಂದೆಯನ್ನು ರಕ್ಷಿಸಲು ಬಂದ ಮತ್ತೊಬ್ಬರ ಮೇಲೂ ಚಾಕು ದಾಳಿ ನಡೆಸಲಾಯಿತು. ನಂತರವೇ ಪೊಲೀಸರು ಸ್ಥಳಕ್ಕೆ ಬಂದರು” ಎಂದು ಸುಮಶ್ರೀ ವಿವರಿಸಿದ್ದಾರೆ.
“ನನ್ನ ದೊಡ್ಡಪ್ಪನಿಗೆ ಚಿಕ್ಕ ಚಿಕ್ಕ ಮಕ್ಕಳು ಇದ್ದಾರೆ. ಏನೂ ಅರಿಯದ ಮಕ್ಕಳು ಇಂದು ತಬ್ಬಲಿಯಾಗಿದ್ದಾರೆ. ನಮ್ಮ ತಾಯಿಯ ಅನೈತಿಕ ಸಂಬಂಧದ ಪರಿಣಾಮವಾಗಿ ನನ್ನ ದೊಡ್ಡಮ್ಮ ವಿಧವೆಯಾಗಿದ್ದಾರೆ. ಮಕ್ಕಳು ತಂದೆಯನ್ನು ಕಳೆದುಕೊಂಡಿದ್ದಾರೆ. ನನ್ನ ತಂದೆಗೂ ಚಾಕುವಿನ ಏಟು ಬಿದ್ದಿದೆ” ಎಂದು ಈ ಮೂಲಕ ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಸುಚಿತ್ರಾ ನಡುವಿನ ಅಕ್ರಮ ಸಂಬಂಧ ಮತ್ತು ಅದರ ಪರಿಣಾಮವಾಗಿ ನಡೆದ ಹಿಂಸಾತ್ಮಕ ಘಟನೆಗಳ ಕುರಿತು ಮಗಳು ಸುಮಶ್ರೀ ಎಳೆ ಎಳೆಯಾಗಿ ಬಹಿರಂಗಪಡಿಸಿದ್ದಾರೆ.