Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮೈಸೂರು ಅರಮನೆಯ ಮುಂಭಾಗದಲ್ಲಿ ಸಂಭವಿಸಿದ ಹೀಲಿಯಂ ಸಿಲಿಂಡರ್ ಸ್ಫೋಟ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಸ್ಫೋಟದ ಸಂಬಂಧ ಪೊಲೀಸರು ಹಾಗೂ ಎನ್ಐಎ ನಾನಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಅರಮನೆ ಬಳಿಯೇ ಭದ್ರತಾ ಲೋಪವಾಗಿದ್ಯಾ ಎನ್ನುವ ಪ್ರಶ್ನೆ ಕೂಡ ಮೂಡಿದೆ.
ಅರಮನೆ ಮುಂದೆ ಸಿಸಿ ಕ್ಯಾಮರದಲ್ಲಿ ಸ್ಫೋಟದ ದೃಶ್ಯ ಸೆರೆಯಾಗಿಲ್ಲ. ಸ್ಥಳದಲ್ಲೇ 360 ಡಿಗ್ರಿ ರೊಟೇಶನ್ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಆದ್ರೆ ಸಿಸಿ ಕ್ಯಾಮೆರಾ ಸ್ಪೋಟದ ಸಮಯದಲ್ಲಿ ಬೇರೆ ಕಡೆ ತಿರುಗಿದೆ ಎನ್ನಲಾಗ್ತಿದೆ. ಸ್ಪೋಟವಾಗುವ ಸಮಯದಲ್ಲಿ ಇನೊಂದು ಭಾಗದ ದೃಶ್ಯಗಳು ಸೆರೆಯಾಗಿದೆ.
ಅರಮನೆ ಗೇಟ್ ಬಳಿಯೇ ಭದ್ರತಾ ಲೋಪ?
ಸ್ಫೋಟದ ಯಾವ ದೃಶ್ಯಗಳು ಕೂಡ ಪೊಲೀಸರಿಗೆ ಸಿಕ್ಕಿಲ್ಲ ಎನ್ನಲಾಗ್ತಿದೆ. ಅರಮನೆ ಮುಂಭಾಗ ಹೆಚ್ಚಿನ ಸಿಸಿಟಿವಿ ಯಾಕಿಲ್ಲ ಎಂಬ ಪ್ರಶ್ನೆ ಮೂಡಿದ್ದು, ಭದ್ರತೆ ವಿಚಾರದಲ್ಲಿ ನಿರ್ಲಕ್ಷ ಧೋರಣೆ ತೋರಲಾಗಿದೆ. ಸದಾ ಜನ ದಟ್ಟಣೆ ಇರುವ ಅರಮನೆ ಮುಂಭಾಗದ ಗೇಟ್ ಬಳಿಯೇ ಭದ್ರತಾ ಲೋಪವಾಗಿರುವ ಆರೋಪ ಕೂಡ ಕೇಳಿ ಬಂದಿದೆ.
ಇತ್ತ ಅರಮನೆ ಮುಂಭಾಗ ಸ್ಫೋಟ ಪ್ರಕರಣದ ತನಿಖೆ ಚುರುಕುಗೊಂಡಿದೆ. ಸಲೀಂ ತಂಗಿದ್ದ ರೂಮ್ ವಿಡಿಯೋ ನ್ಯೂಸ್ 18 ಗೆ ಲಭ್ಯವಾಗಿದೆ. ಕೇವಲ 100 ರೂಪಾಯಿಗೆ ರೂಮ್ ಬಾಡಿಗೆಗೆ ಪಡೆದಿದ್ದ ಸಲೀಂ, ದಿನಕ್ಕೆ 100 ರೂಪಾಯಿ ಬಾಡಿಗೆ ನೀಡ್ತಿದ್ದನಂತೆ.
ಸದ್ಯ ಪಂಚನಾಮೆ ಮಾಡಿ ರೂಮ್ ಸೀಜ್ ಮಾಡಿರುವ ಪೊಲೀಸರು
ಲಾಡ್ಜ್ ಮುಂದೆ ನಿಲ್ಲಿಸಿದ್ದ ಸೈಕಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಹೊರಗಡೆಯಿಂದ ವ್ಯಾಪಾರಕ್ಕೆ ಬರುವವರಿಗೆ ಷರೀಫ್ ಲಾಡ್ಜ್ ಮಾಲೀಕರು ಕಡಿಮೆ ದುಡ್ಡಿಗೆ ರೂಮ್ ಬಾಡಿಗೆ ಕೊಡ್ತಿದ್ದರಂತೆ.
ಹಣವಿಲ್ಲದವರಿಗೂ ಬಾಡಿಗೆ ನೀಡುತ್ತಿದ್ದ ಷರೀಫ್ ಲಾಡ್ಜ್ ಮಾಲೀಕರು, ಸಲೀಂ ಆಧಾರ್ ಕಾರ್ಡ್ ಪಡೆದು ಬಾಡಿಗೆಗೆ ರೂಮ್ ನೀಡಿದ್ದರು ಎನ್ನಲಾಗ್ತಿದೆ.
O+ ರಕ್ತದ ಗುಂಪಿನ ವ್ಯಕ್ತಿಗೆ A+ ರಕ್ತ ನೀಡಿದ ಲ್ಯಾಬ್ ಟೆಕ್ನಿಷಿಯನ್; ಜಿಮ್ ಟ್ರೈನರ್ ಸ್ಥಿತಿ ಚಿಂತಾಜನಕ