Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಗೋರಖ್ಪುರ: ಹಿಂದೂ ಧರ್ಮದಲ್ಲಿ ಮಹಿಳೆಯರು ಅಂತ್ಯಕ್ರಿಯೆ ಮಾಡಲು ಅವಕಾಶವಿಲ್ಲ. ಆದರೆ, ಪುಷ್ಪಲತಾ ಅವರು ಈ ಮೌಢ್ಯವನ್ನು ಬದಿಗೊತ್ತಿ ಹಗಲು- ರಾತ್ರಿ ಎನ್ನದೇ ಅನಾಥ ಶವಗಳ ರಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
45 ವರ್ಷದ ಪುಷ್ಪಲತಾ ಸಿಂಗ್ ಅವರು ವೃತ್ತಿಯಲ್ಲಿ ಶಿಕ್ಷಕಿ. ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. ಎಂ.ಎಡ್. ಮತ್ತು ನೆಟ್ ಅರ್ಹತೆಯನ್ನು ಹೊಂದಿದ್ದಾರೆ. ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವಿವಾಹಿತರಾಗಿರುವ ಪುಷ್ಪಲತಾ ಅವರು ಸಮಾಜ ಸೇವೆಯಲ್ಲಿಯೇ ಸಾರ್ಥಕತೆ ಕಾಣುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಹಲವು ಸಮುದಾಯಗಳ 200ಕ್ಕೂ ಹೆಚ್ಚು ಶವಗಳ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಮೂರು ವರ್ಷಗಳ ಹಿಂದೆ ಅನಾರೋಗ್ಯಕ್ಕೀಡಾಗಿ ರಸ್ತೆಯಲ್ಲಿ ಮಲಗಿದ್ದ ಬಾಬಾ ಅವರನ್ನು ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದೆ. ಒಂದು ವರ್ಷದ ನಂತರ ನಿಧನರಾದರು. ನಾನು ಅವರ ಅಂತ್ಯಕ್ರಿಯೆ ನಡೆಸಿದೆ. ಅದರ ನಂತರ ಅನಾಥ ಶವಗಳನ್ನು ದಹನ ಮಾಡುವ ಬಗ್ಗೆ ಯೋಚಿಸಿದೆ. ಆ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದೇನೆ. ಆರಂಭದಲ್ಲಿ, ಶವಗಳನ್ನು ನೇರವಾಗಿ ಪಡೆಯುತ್ತಿದ್ದೆ. ಆದರೆ, ಪೊಲೀಸ್ ಪ್ರಕ್ರಿಯೆ ಹಿನ್ನೆಲೆ ಕಾನೂನು ಪ್ರಕಾರವಾಗಿ ಮಾತ್ರಿ ಆಂಚಲ್ ಎಂಬ ಸಂಸ್ಥೆಯಲ್ಲಿ ನೋಂದಾಯಿಸಿಕೊಂಡು ಈ ಕಾರ್ಯ ಮಾಡುತ್ತಿದ್ದೇನೆ ಎಂದು ಪುಷ್ಪಲತಾ ಅವರು ತಿಳಿಸಿದರು.