Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮಹಾರಾಷ್ಟ್ರದಲ್ಲಿ ಕೆಲವು ದಿನಗಳ ಹಿಂದೆ ಕಾರೊಂದರಲ್ಲಿ ಸುಟ್ಟು ಕರಕಲಾದ ವ್ಯಕ್ತಿಯ ಶವ ಪತ್ತೆಯಾಗಿತ್ತು. ಕಾರಿನ ಚಾಲಕರ ಸೀಟಿನಲ್ಲಿದ್ದ ವ್ಯಕ್ತಿಯೇ ಸಾವನ್ನಪ್ಪಿದ್ದರಿಂದ ಆ ಕಾರಿನ ಮಾಲೀಕರೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಭಾವಿಸಿದ್ದರು. ಆದರೆ, ಈ ಪ್ರಕರಣದಲ್ಲಿ ಹೊಸ ತಿರುವು ಸಿಕ್ಕಿದೆ.
ಹೌದು, ಲಾತೂರ್ ಜಿಲ್ಲೆಯ ವ್ಯಕ್ತಿಯೊಬ್ಬ ತಾನು ಸಾವನ್ನಪ್ಪಿದ್ದಾನೆಂದು ನಂಬಿಸಲು ತನ್ನದೇ ಪ್ರಾಯದ ಮತ್ತೊಬ್ಬ ವ್ಯಕ್ತಿಯ ಶವವನ್ನು ಕಾರಿನಲ್ಲಿರಿಸಿ, ಆ ಶವದ ಮುಖದ ಗುರುತು ಸಿಗಬಾರದು ಎಂದು ಬೆಂಕಿ ಹಚ್ಚಿದ್ದ. ಆ ಶವ ಪೂರ್ತಿಯಾಗಿ ಸುಟ್ಟು ಕರಕಲಾಗಿತ್ತು.
ಆ ಕಾರಿನಲ್ಲಿದ್ದ ವಸ್ತುಗಳನ್ನು ನೋಡಿದ ಪೊಲೀಸರು ಆ ಕಾರಿನ ಮಾಲೀಕರದ್ದೇ ಶವವೆಂದು ಭಾವಿಸಿದ್ದರು. ಎಲ್ಲವೂ ಆ ವ್ಯಕ್ತಿ ಪ್ಲಾನ್ ಮಾಡಿದಂತೆಯೇ ನಡೆದಿತ್ತು. ಆದರೆ, ನಿನ್ನೆ ಸಂಜೆ ಆತ ತನ್ನ ಪ್ರೇಯಸಿಗೆ ಮೆಸೇಜ್ ಮಾಡಿದ್ದ. ಈ ಒಂದು ಮೆಸೇಜಿನಿಂದ ಆತನ ಪ್ಲಾನ್ ಪೂರ್ತಿ ಹಾಳಾಗಿದೆ. ತಾನು ತೋಡಿದ ಹಳ್ಳಕ್ಕೆ ತಾನೇ ಬಿದ್ದಿದ್ದಾನೆ.
1 ಕೋಟಿ ರೂ. ಇನ್ಷುರೆನ್ಸ್ ಹಣಕ್ಕಾಗಿ ಆತ ತಾನು ಸಾವನ್ನಪ್ಪಿರುವುದಾಗಿ ನಂಬಿಸಲು ಈ ರೀತಿ ಪ್ಲಾನ್ ಮಾಡಿದ್ದ. ಆತ ತನ್ನದೇ ವಯಸ್ಸಿನ ವ್ಯಕ್ತಿಯೊಬ್ಬನನ್ನು ಕೊಂದು, ಆತನ ಶವವನ್ನು ತನ್ನ ಕಾರಿನಲ್ಲಿ ಡ್ರೈವರ್ ಸೀಟಿನಲ್ಲಿರಿಸಿ ಬೆಂಕಿ ಹಚ್ಚಿದ್ದ. ಅಲ್ಲಿ ತನ್ನ ವಾಚ್, ಶೂ ಮುಂತಾದ ವಸ್ತುಗಳನ್ನೂ ಇಟ್ಟಿದ್ದ.
ಇದರಿಂದ ಪೊಲೀಸರಿಗೆ ಆತನೇ ಸತ್ತಿದ್ದಾನೆಂದು ಅನುಮಾನ ಮೂಡಿತ್ತು. ಈ ಆರೋಪಿಯನ್ನು ಗಣೇಶ್ ಗೋಪಿನಾಥ್ ಚೌಹಾಣ್ ಎಂದು ಹೇಳಲಾಗಿದೆ. ಆತ ವಿಪರೀತ ಸಾಲ ಮಾಡಿಕೊಂಡಿದ್ದ. ಆ ಸಾಲ ತೀರಿಸಲು ವಿಮೆ ಹಣ ಪಡೆಯಲು ಈ ಸಾವಿನ ಪ್ಲಾನ್ ಮಾಡಿದ್ದ ಎಂದು ತಿಳಿದು ಬಂದಿದೆ.