Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಹನ್ನೆರಡು ವರ್ಷಗಳ ಹಿಂದೆ ‘ಅಮೃತವರ್ಷಿಣಿ’ ಧಾರಾವಾಹಿಯಲ್ಲಿ ಅಮೃತಾ ಆಗಿ ನಟಿಸಿದ್ದ ರಜಿನಿ ಅವರೀಗ ವಿಲನ್ ಆಗಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸದಾಗಿ ಮೂಡಿಬರುತ್ತಿರುವ ‘ನೀ ಇರಲು ಜೊತೆಯಲಿ’ ಧಾರಾವಾಹಿಯಲ್ಲಿ ಊರ್ಮಿಳಾ ದಿವಾನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಜಿನಿ ಅವರು ಬಾಡಿ ಬಿಲ್ಡರ್ ಅರುಣ್ ವೆಂಕಟೇಶ್ ಜೊತೆಗೆ ರೀಲ್ಸ್ ಮಾಡುತ್ತ, ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು.
ಈಗ ಸದ್ದಿಲ್ಲದೆ ಅವರ ವಿವಾಹ ನೆರವೇರಿದೆ. ಜಿಮ್ ಟ್ರೇನರ್ ಅರುಣ್ ವೆಂಕಟೇಶ್ ಜೊತೆ ರಜನಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇಂದು ರಜಿನಿ ಅವರು ಅರುಣ್ ಗೌಡ ಎನ್ನುವವರ ಜೊತೆ ಮದುವೆಯಾಗಿದ್ದಾರೆ. ಇಂದು ಬೆಳಗ್ಗೆ 9.30-10.30 ಒಳಗಿನ ಮುಹೂರ್ತದಲ್ಲಿ ಮದುವೆ ನಡೆದಿದೆ. ಈ ಮದುವೆಯು ಬೆಂಗಳೂರಿನಲ್ಲಿ ನಡೆದಿದೆ ಎನ್ನಲಾಗಿದೆ. ಆಪ್ತರ ಸಮ್ಮುಖದಲ್ಲಿ ಮದುವೆ ನಡೆದಿದೆ.
ಈ ಹಿಂದೆ ‘ನಾವು ಬರಿ ಸ್ನೇಹಿತರು’ ಎಂದು ಹೇಳಿದ್ದ ಈ ಜೋಡಿ, ಇದೀಗ ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.ಪ್ರವಾಸ ಇರಲೀ, ದೇವಸ್ಥಾನಕ್ಕೆ ಹೋಗಲಿ ರಜಿನಿ ಅವರ ಜೊತೆಗೆ ಅರುಣ್ ಗೌಡ ಇರುತ್ತಿದ್ದರು. ಆಗಲೇ ಈ ಜೋಡಿ ಬಗ್ಗೆ ಅನುಮಾನ ಮೂಡಿತ್ತು. ಈಗ ಕುಟುಂಬಸ್ಥರ ಒಪ್ಪಿಗೆ ಪಡೆದು ಈ ಜೋಡಿ ಸಪ್ತಪದಿ ತುಳಿದಿದೆ. ಅಂದಹಾಗೆ ಅರುಣ್ ಗೌಡ ಅವರು ಜಿಮ್ ಟ್ರೇನರ್ ಆಗಿ ಕೆಲಸ ಮಾಡುತ್ತಿದ್ದಾರೆ.