Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ಒಂದು ಗಂಟೆ ಸಂಚಾರದಲ್ಲಿ ವ್ಯತ್ಯಯವಾಗಿದೆ.
ವಿಜಯನಗರ ಹೊಸಹಳ್ಳಿ ನಿಲ್ದಾಣಗಳ ನಡುವೆ ಈ ವ್ಯತ್ಯಯ ಉಂಟಾಗಿದೆ.
ಚಲ್ಲಘಟ್ಟ -ವೈಟ್ ಫೀಲ್ಡ್ ಮಾರ್ಗದಲ್ಲಿ ಕಳೆದ ಒಂದು ಗಂಟೆಯಿಂದ ಸಂಚಾರ ವ್ಯತ್ಯಯವಾಗಿದೆ. ತಾಂತ್ರಿಕ ಸಮಸ್ಯೆಯಿಂದ ರೈಲು ಕೆಟ್ಟು ನಿಂತಿದ್ದು, ರೈಲು ಸ್ಥಳಾಂತರಗೊಂಡ ಬಳಿಕ ಸಂಚಾರ ಸುಗಮವಾಗಲಿದೆ ಎಂದು ಬಿಎಂಆರ್ ಸಿಎಲ್ ತಿಳಿಸಿದೆ.
ಚಲ್ಲಘಟ್ಟದಿಂದ ಹೊರಟ ಮೆಟ್ರೋ ರೈಲು ಗುರುವಾರ ಬೆಳಗ್ಗೆ 9.20 ರ ಸುಮಾರಿಗೆ ರಾಜರಾಜೇಶ್ವರಿ ಮೆಟ್ರೋ ನಿಲ್ದಾಣದಲ್ಲಿ ನಿಂತಿದ್ದು, ಮುಂದೆ ಚಲಿಸಿಲ್ಲ. ಸುಮಾರು 15 ನಿಮಿಷಗಳಿಂದಲೂ ನಿಲ್ದಾಣದಲ್ಲಿಯೇ ನಿಂತಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.
Skin Care: ಚಳಿಗಾಲದಲ್ಲಿ ಚರ್ಮದ ಆರೈಕೆಯನ್ನು ನಿರ್ಲಕ್ಷಿಸಬೇಡಿ; ಈ ಟಿಪ್ಸ್ ಫಾಲೋ ಮಾಡಿ