Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ರಿಷಬ್ ಶೆಟ್ಟಿ ಅವರ ‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ ತೆಲುಗು ರಾಜ್ಯಗಳಲ್ಲಿ ಸಮಸ್ಯೆ ಎದುರಾಗಿದೆ. ಅಲ್ಲಿನ ಕೆಲ ಮಂದಿ ‘ಕಾಂತಾರ: ಚಾಪ್ಟರ್ 1’ ಸಿನಿಮಾವನ್ನು ಬಾಯ್ಕಾಟ್ ಮಾಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.
ಕಾಂತಾರ ದಂತ ಕತೆ, ಕಾಂತಾರದ ಕದಂಬರ ಆಳ್ವಿಕೆಯ ಆದ್ಯಾಯಕ್ಕೆ ತೆರೆ ಎಳೆಯಲು ಇನ್ನೂ ಎರಡು ದಿನಗಳು ಬಾಕಿ.. ಕಾಂತಾರ ಮೂಲಕ ಕಾಡು ಬೆಟ್ಟು ಶಿವನ ಕತೆ ಕೇಳಿ ಬಾಕ್ಸಾಫೀಸಲ್ಲಿ 300 ಕೋಟಿ ತುಂಬಿಸಿದ್ದ ಅಬಿಮಾನಿ ಬಳಗ ಇದೀಗ ಕಾಂತಾರ1 ರಲ್ಲಿ ಬೆರ್ಮೆಯ ಕತೆ ಕೇಳೋಕೆ, ಕಾರ್ಣಿಕ ಹುಟ್ಟಿನ ಕತೆ ತಿಳಿಯೋಕೆ ತೆರೆ ಮೇಲೆ ಕದಂಬರ ಕಾಲದ ದೃಶ್ಯವೈಭವ ಕಣ್ತುಂಬಿಕೊಳ್ಳೋಕೆ ಕಾತುರದಿಂದ ಕಾಯ್ತಿದ್ಧಾರೆ.ಕನ್ನಡ ತಮಿಳು ತೆಲುಗು ಮಲೆಯಾಳಂ, ಬೆಂಗಾಳಿ, ಹಿಂದಿ ಹಾಗೆ ಇಂಗ್ಲೀಷ್ ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.
ಇದೀಗ ಕಾಂತಾರಕ್ಕೆ ಆಂದ್ರಪ್ರದೇಶದಲ್ಲಿ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಬಲವು ಸಿಕ್ಕಿದೆ. ಕರ್ನಾಟಕದಲ್ಲಿ ಕಳೆದ ಬಾರಿ ಏಕರೂಪ ಟಿಕೆಟ್ ದರ 200 ನಿಗದಿ ಪಡಿಸಿದ್ದ ರಾಜ್ಯ ಸರ್ಕಾರಕ್ಕೆ ಕೋರ್ಟ್ ತಡೆ ತಂದ ಹಿನ್ನಲೇ ಕಾಂತಾರ 1 ರ ಟಿಕೆಟ್ ರೇಟ್ ದಾಖಲೆಯ ಮೊತ್ತದಲ್ಲಿ ಸೇಲ್ ಆಗಿದೆ. ಈಗ ಇದೇ ಕಾರಣಕ್ಕೆ ಪವರ್ ಸ್ಟಾರ್ ಕೂಡ ಕೈ ಜೋಡಿಸಿದ್ದು ಆಂದ್ರ ಪ್ರದೇಶ ಹಾಗು ತೆಲಂಗಾಣದಲ್ಲಿ ಕಾಂತಾರ 1 ರ ಟಿಕೆಟ್ ದರ ಹೆಚ್ಚಿಸೋಕೆ ಅಸ್ತು ಅಂದಿದ್ದಾರೆ
ಕರ್ನಾಟಕದ ಏಕರೂಪ ಟಿಕೆಟ್ ದರದ ವಿರುದ್ದ ಹೊಂಬಾಳೆ ಕೋರ್ಟ್ ಮೆಟ್ಟಿಲೇರಿತ್ತು ಇದರ ಪರಿಣಾಮ ಸರ್ಕಾರದ ನಿರ್ದಾರಕ್ಕೆ ಕೋರ್ಟ್ ತಡೆ ತಂದಿತ್ತು , ಒಂದು ರೀತಿ ಇದರ ಉಪಯೋಗ ಪವನ್ ಕಲ್ಯಾಣ್ ರ ಓಜಿ ಮೇಲೆಯು ಪರಿಣಾಮ ಬೀರಿತ್ತು.
ಈ ಬಗ್ಗೆ ಪವನ್ ಕಲ್ಯಾಣ್, ‘ಸಿನಿಮಾಗಳು ಜೋಡಿಸುವ ಕಾರ್ಯವನ್ನು ಮಾಡಬೇಕು, ಮುರಿಯುವ ಕಾರ್ಯವನ್ನು ಮಾಡಬಾರದು. ಕರ್ನಾಟಕದ ಸಿನಿಮಾಗಳು, ಕಲಾವಿದರನ್ನು ನಾವು ದಶಕಗಳಿಂದಲೂ ಸ್ವಾಗತಿಸಿದ್ದೇವೆ. ಡಾ ರಾಜ್ಕುಮಾರ್, ಶಿವರಾಜ್ ಕುಮಾರ್, ಉಪೇಂದ್ರ, ಸುದೀಪ್ ಈಗ ರಿಷಬ್ ಶೆಟ್ಟಿ. ಇನ್ನು ತೆಲುಗು ಸಿನಿಮಾಗಳಿಗೆ ಅಲ್ಲಿ ಸಮಸ್ಯೆ ಆಗಿದೆ ಎಂಬ ವಿಚಾರವನ್ನೂ ಎರಡೂ ಚಿತ್ರರಂಗದವರು ಒಟ್ಟಾಗಿ ಕೂತು ಬಗೆಹರಿಸಿಕೊಳ್ಳುವ ವಿಷಯ’ ಎಂದು ಹೇಳುವ ಮೂಲಕ ವಿರೋಧದ ನಡುವೆಯು ಕಾಂತಾರ 1 ರಪರವಾಗಿ ನಿಂತಿದ್ದಾರೆ ಪವನ್ ಕಲ್ಯಾಣ್