Subscribe NewsicsKannada/YouTube
newsics.com
ಮಂಗಳೂರು: ನವರಾತ್ರಿ ವೇಳೆ ದಕ್ಷಿಣ ಕನ್ನಡ, ಮಂಗಳೂರು ಭಾಗಗಳಲ್ಲಿ ಹುಲಿ ವೇಷ, ಹುಲಿ ಕುಣಿತ ಸಾಮಾನ್ಯ. ಇದು ತುಳುನಾಡಿನ ಪ್ರಮುಖ ಸಂಪ್ರದಾಯ. ದುರ್ಗೆಯ ವಾಹನ ಹುಲಿ. ಕರಾವಳಿ ಪ್ರದೇಶದವರು ಹುಲಿ ವೇಷ ಹಾಕಿಕೊಂಡು, ದೇವಿಗೆ ತಮ್ಮ ಸೇವೆ ಸಲ್ಲಿಸುತ್ತಾರೆ.
ಈ ಬಾರಿ ಹುಲಿ ವೇಷಧಾರಿಯೊಬ್ಬರು ತಮ್ಮ ಹೊಟ್ಟೆ ಮೇಲೆ ಸೌಜನ್ಯಾಳ ಚಿತ್ರವನ್ನು ಪೇಂಟಿಂಗ್ ಮಾಡಿಸಿಕೊಂಡು ಗಮನಸೆಳೆಯುತ್ತಿದ್ದಾರೆ.
ಮಂಗಳೂರಿನಲ್ಲಿ ಇದೀಗ ಗಮನ ಸೆಳೆಯುತ್ತಿರುವ ಹುಲಿವೇಷ ಇದಾಗಿದೆ. ಮೈತುಂಬ ಗುಲಾಬಿ ಮತ್ತು ಕಂದು ಬಣ್ಣದಲ್ಲಿ ಪೇಂಟಿಂಗ್ ಮಾಡಿಸಿಕೊಂಡಿರುವ ಈ ವ್ಯಕ್ತಿ, ಸೌಜನ್ಯಾಳ ಫೋಟೋವನ್ನ ಹೊಟ್ಟೆ ಮೇಲೆ ಚಿತ್ರಿಸಿಕೊಂಡಿದ್ದಾರೆ. ಜಸ್ಟೀಸ್ ಫಾರ್ ಸೌಜನ್ಯಾ ಎಂದು ಬರೆಸಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದ ಸೌಜನ್ಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಮತ್ತೆ ಬೆಳಕಿಗೆ ಬಂದಿದೆ. 2012ರಲ್ಲಿ ಈ ದುರ್ಘಟನೆ ನಡೆದಿತ್ತು. ಆಗ ಸೌಜನ್ಯಾಗೆ 17 ವರ್ಷ. ಕಾಲೇಜು ಮುಗಿಸಿ ಮನೆಗೆ ಬರುವ ದಾರಿಯಲ್ಲಿ ಸೌಜನ್ಯಾ ಅತ್ಯಾಚಾರಕ್ಕೀಡಾಗಿ, ಕೊಲೆಯಾಗಿದ್ದಳು. ಈ ಪ್ರಕರಣದಲ್ಲಿ ಸಂತೋಷ್ ರಾವ್ ಎಂಬಾತನಿಗೆ ಶಿಕ್ಷೆ ಆಯಿತಾದರೂ, ನಂತರ ಸಿಬಿಐ ಆತನನ್ನು ಖುಲಾಸೆಗೊಳಿಸಿತು.
ಸೌಜನ್ಯಾಳಿಗೆ ನ್ಯಾಯಬೇಕು ಎನ್ನುವ ಹೋರಾಟ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿದೆ.
ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ
ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು, 1 ವರ್ಷ ದಕ್ಷಿಣ ಕನ್ನಡಕ್ಕೆ ಬರುವಂತಿಲ್ಲ!