newsics.com
ಪ್ರತಿದಿನ ಊಟ ಆದ ಮೇಲೆ ಒಂದು ಬಾಳೆಹಣ್ಣು ತಿನ್ನಬೇಕು ಎನ್ನುವುದು ವಾಡಿಕೆ ಮಾತು. ಏಕೆಂದರೆ ಇದು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನುವ ಕಾರಣಕ್ಕೆ. ಆದರೆ ಬೆಳಗ್ಗೆ ತಿಂಡಿ ತಿನ್ನುವ ಮುಂಚೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಅನೇಕ ಲಾಭಗಳಿವೆ ಎಂದು ಹೇಳುತ್ತಾರೆ.ಕೆಲವು ಜನರಿಗೆ ಬಾಳೆಹಣ್ಣು ತಿಂದರೂ ಯಾವುದೇ ಪ್ರಯೋಜನ ಸಿಗುವುದಿಲ್ಲ. ಏಕೆಂದರೆ ಈ ಹಣ್ಣು ಎಲ್ಲರಿಗೂ ಪ್ರಯೋಜನಕಾರಿಯಲ್ಲ. ಕೆಲವೊಂದು ಆರೋಗ್ಯ ಸಮಸ್ಯೆ ಇದ್ದವರು ಬಾಳೆಹಣ್ಣು ಸೇವಿಸಬಾರದು.
ತೂಕ ಜನರು ಬಾಳೆಹಣ್ಣು ತಿನ್ನುತ್ತಾರೆಯಾದರೂ, ಈಗಾಗಲೇ ಅಧಿಕ ತೂಕ ಹೊಂದಿರುವವರು ಮತ್ತು ಬೊಜ್ಜುತನದಿಂದ ಬಳಲುತ್ತಿರುವವರು ಬಾಳೆಹಣ್ಣು ತಿನ್ನಇಳಿಸಿಕೊಳ್ಳಲು ಬಾರದು. ಈ ಹಣ್ಣಿನಲ್ಲಿರುವ ಕ್ಯಾಲೋರಿ ಅಂಶವು ಅನಗತ್ಯ ತೂಕವನ್ನು ಹೆಚ್ಚಿಸುತ್ತದೆ. ಇದು ಇತರ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತದೆ.
ಬಾಳೆಹಣ್ಣು ಅತಿಸಾರಕ್ಕೆ ಉತ್ತಮ ಪರಿಹಾರವಾಗಿದೆ. ಆದರೆ ಆಮ್ಲೀಯತೆಯಿಂದ ಬಳಲುತ್ತಿರುವ ಜನರು ಬಾಳೆಹಣ್ಣನ್ನು ಎಚ್ಚರಿಕೆಯಿಂದ ತಿನ್ನಬೇಕು. ಏಕೆಂದರೆ ಬಾಳೆಹಣ್ಣಿನಲ್ಲಿ ಕೆಲವು ಕಾರ್ಬೋಹೈಡ್ರೇಟ್ಗಳಿದ್ದು, ಅವುಗಳನ್ನು ತಿಂದಾಗ ಹೊಟ್ಟೆಯಲ್ಲಿ ಅನಿಲ ರಚನೆ ಮತ್ತು ಉಬ್ಬುವಿಕೆ ಉಂಟಾಗುತ್ತದೆ.
ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ಜನರಿಗೆ ಬಾಳೆಹಣ್ಣು ಹಾನಿಕಾರಕವಾಗಿದೆ. ಏಕೆಂದರೆ ಹಾನಿಗೊಳಗಾದ ಮೂತ್ರಪಿಂಡಗಳು ರಕ್ತದಲ್ಲಿ ಹೆಚ್ಚುವರಿ ಪೊಟ್ಯಾಸಿಯಮ್ ಅನ್ನು ಉತ್ಪಾದಿಸುತ್ತವೆ, ಇದು ಮೂತ್ರಪಿಂಡಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ, ಇದು ಹೃದಯ ಸಮಸ್ಯೆಗಳಿಗೆ ಕೂಡ ಕಾರಣವಾಗಿದೆ.
ಮೈಗ್ರೇನ್ ಇದ್ದರೆ, ಬಾಳೆಹಣ್ಣನ್ನು ತಿನ್ನಬೇಡಿ. ಈ ಹಣ್ಣಿನಲ್ಲಿರುವ ಟೈರಮೈನ್ ಎಂಬ ವಸ್ತುವು ಮೈಗ್ರೇನ್ ನೋವನ್ನು ಹೆಚ್ಚಿಸುತ್ತದೆ. ಬಾಳೆಹಣ್ಣಿನ ಸಿಪ್ಪೆಯಲ್ಲಿ ತಿರುಳಿಗಿಂತ ಹೆಚ್ಚಿನ ಟೈರಮೈನ್ ಇದೆ