newsics.com
ಬೆಂಗಳೂರು: ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ನಟ ದರ್ಶನ್ ಸೇರಿದಂತೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳನ್ನು ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಸಾಮಾನ್ಯ ವಿಚಾರಣಾಧೀನ ಬಂಧಿಗಳಂತೆ ದರ್ಶನ್ ಆ್ಯಂಡ್ ಗ್ಯಾಂಗ್ ಜೈಲಿನಲ್ಲಿ ದಿನ ಕಳೆದಿದ್ದಾರೆಜೈಲು ಸೇರಿದ ಎಲ್ಲ ಖೈದಿಗಳ ಪೋಟೋಗಳನ್ನ ಜೈಲಿನಲ್ಲಿ ತೆಗೆಯಲಾಗುತ್ತೆ
ಇದೀಗ ನಟ ದರ್ಶನ್ , ನಟಿ ಪವಿತ್ರಾಗೌಡ, ಆರೋಪಿ ಪ್ರದೋಷ್ ಪೋಟೋವನ್ನು ಜೈಲು ಅಧಿಕಾರಿಗಳು ತೆಗೆದಿದ್ದಾರೆ. ನಟ ದರ್ಶನ್ ತಲೆ ಕೂದಲು ಮುಡಿಕೊಟ್ಟು ಪೊಲೀಸರಿಗೆ ಶರಣಾಗಿ ಜೈಲು ಪಾಲಾಗಿರುವುದು ಪೋಟೋ ನೋಡಿದರೇ, ಗೊತ್ತಾಗುತ್ತೆ.
ಮೊದಲೆಲ್ಲಾ ನಟ ದರ್ಶನ್ ತಲೆಯಲ್ಲಿ ಕೂದಲು ಕಡಿಮೆ ಇರುವ ವಿಗ್ ಧರಿಸುತ್ತಿದ್ದರು. ಆದರೇ, ಈ ಭಾರಿ ಜೈಲು ಪಾಲಾಗುವ ಸಾಧ್ಯತೆಗಳು ಮುಂಚಿತವಾಗಿ ಇದ್ದಿದ್ದರಿಂದ ಪೊಲೀಸರಿಗೆ ಶರಣಾಗುವ ಮುನ್ನ ತಮಿಳುನಾಡಿನ ಈರೋಡ್ ಜಿಲ್ಲೆಯ ಬಣ್ಣಾರಿಯಮ್ಮ ದೇವಾಲಯಕ್ಕೆ ತೆರಳಿ ತಲೆ ಮುಡಿಕೊಟ್ಟಿದ್ದಾರೆ. ಆದಾದ ಬಳಿಕ ಕೊಡಗಿಗೆ ಬಂದು ಅಲ್ಲಿಂದ ಬೆಂಗಳೂರಿಗೆ ಬಂದಿದ್ದಾರೆ.
ಇನ್ನೂ ಎ1 ಆರೋಪಿ ಪವಿತ್ರಾಗೌಡರ ಎರಡು ಪೋಟೋಗಳನ್ನು ಜೈಲು ಅಧಿಕಾರಿಗಳು ತೆಗೆದಿದ್ದಾರೆ. ಒಂದು ಪೋಟೋದಲ್ಲಿ ನಗುತ್ತಲೇ ಪವಿತ್ರಾಗೌಡ ಪೋಟೋಗೆ ಪೋಸ್ ಕೊಟ್ಟಿದ್ದಾರೆ. ಮತ್ತೊಂದು ಪೋಟೋದಲ್ಲಿ ಗಂಭೀರವದನೆಯಾಗಿ ಪೋಟೋಗೆ ಪೋಸ್ ನೀಡಿದ್ದಾರೆ.