newsics.com
ಕೋಲಾರ: ಬಸ್ಗಳ ಮುಷ್ಕರದ ನಡುವೆಯೇ ಅತ್ತ ಕೆಎಸ್ಆರ್ಟಿಸಿ ಬಸ್ ಚಾಲಕನೊಬ್ಬ ಪ್ರಯಾಣಿಕರನ್ನು ಅರ್ಧ ದಾರಿಯಲ್ಲೇ ಬಿಟ್ಟು ಹೋದ ಪರಿಣಾಮ ಮಹಿಳಾ ಪ್ರಯಾಣಿಕರು ‘ಫ್ರೀ ಸ್ಕೀಂ ಬೇಡವಾಗಿತ್ತು’ ಎಂದು ಗೊಣಗಿದ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ಬಸ್ ಡಿಪೋದ 126 ಬಸ್ಗಳ ಸಂಚಾರ ಬಂದ್ ಮಾಡಲಾಗಿದ್ದು, ಶ್ರೀನಿವಾಸಪುರ ಮಾರ್ಗವಾಗಿ ಕೋಲಾರ ನಗರಕ್ಕೆ ಆಗಮಿಸಲು ಮಹಿಳೆಯೊಬ್ಬರು ಟಿಕೆಟ್ ಖರೀದಿಸಿದ್ದರು. ಆದರೆ ಬಸ್ ನಿಲ್ದಾಣಕ್ಕೆ ಪ್ರಯಾಣಿಕರನ್ನ ಬಿಡದೆ, ಬಸ್ ಡಿಪೋ ಬಳಿ ಚಾಲಕ ನಿಲ್ಲಿಸಿ ಬಸ್ ಮುಂದೆ ಹೋಗಲ್ಲ ಎಂದು ಪ್ರಯಾಣಿಕರನ್ನ ಚಾಲಕ ಮತ್ತು ನಿರ್ವಾಹಕ ಇಳಿಸಿದ್ದಾರೆ.
ಹೀಗಾಗಿ ಬಸ್ ಡಿಪೋನಿಂದ ಪ್ರಯಾಣಿಕರು ನಡೆದುಕೊಂಡು ಹೋಗ್ತಿದ್ದು, ಈತನ್ಮಧ್ಯೆ ರಾಜ್ಯ ಸರ್ಕಾರದ ವಿರುದ್ದ ಮಹಿಳೆಯರು ‘ಫ್ರೀ ಸ್ಕೀಂ ಬೇಡವಾಗಿತ್ತು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕೋಲಾರ ಬಸ್ ಡಿಪೋ ಎದುರು ಪ್ರತಿಕ್ರಿಯೆ ನೀಡಿರುವ ಪ್ರಯಾಣಿಕ ಮಹಿಳೆ ‘ಫ್ರೀ ಸ್ಕೀಂ ಬೇಡವಾಗಿತ್ತು, ಇದರಿಂದ ನಮಗೆ ಸಮಸ್ಯೆ ಆಗ್ತಿದೆ, ವಯಸ್ಸಾದವರಿಗೆ, ಅಶಕ್ತರಿಗೆ, ವಯಸ್ಸಾದವರಿಗೆ ಕೊಡಬೇಕಿತ್ತು. ಇದರಿಂದ ಸರ್ಕಾರಕ್ಕೆ ಹೊರೆಯಾಗ್ತಿದೆ. ಸರ್ಕಾರ ಕೂಡಲೇ ಸಾರಿಗೆ ನೌಕರರ ಕಷ್ಟಕ್ಕೆ ಸ್ಪಂದಿಸಲಿ’ ಎಂದು ಆಗ್ರಹಿಸಿದ್ದಾರೆ.
Actor Santosh Balaraj no more ಯುವ ನಟ ಸಂತೋಷ್ ಬಾಲರಾಜ್ ಇನ್ನಿಲ್ಲ