newsics.com
ನವದೆಹಲಿ : ಕಳೆದ ನಾಲ್ಕು ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಸ್ಟಾರ್ಟ್ಅಪ್ ಕಂಪನಿ,ಯಾವುದೇ ಸೂಚನೆ, ನೋಟಿಸ್ ಏನೂ ಇಲ್ಲದೆ ಅರ್ಜೆಂಟಾಗಿ ವಿಡಿಯೋ ಮೀಟಿಂಗ್ ಕರೆದ ಕಂಪನಿ ಬಾಸ್, ನಮ್ಮಲ್ಲಿ ಕಾಸಿಲ್ವಮ್ಮಾ ಎಂದು ಒಂದೇ ಮಾತು ಹೇಳಿ ಕಂಪನಿಯ 19 ಉದ್ಯೋಗಿಗಳನ್ನು ಕಿತ್ತು ಹಾಕಿದ ಘಟನೆ ನಡೆದಿದೆ.
ಈ ಕುರಿತು ಉದ್ಯೋಗಿಯೊಬ್ಬರು ರೆಡ್ಡಿಟ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದ್ದಕ್ಕಿದ್ದಂತೆ ಕಂಪನಿ ಸಿಇಒನಿಂದ ಇಮೇಲ್ ಎಲ್ಲಾ ಉದ್ಯೋಗಿಗಳ ಖಾತೆಗೆ ರವಾನೆಯಾಗಿತ್ತು. ತುರ್ತಾಗಿ ವಿಡಿಯೋ ಮೀಟಿಂಗ್ ಕರೆಯಲಾಗಿದೆ ಎಂಬ ಸಂದೇಶ ಅದರಲ್ಲಿತ್ತು. ಜೊತೆಗೆ ವಿಡಿಯೋ ಮೀಟಿಂಗ್ ಲಿಂಕ್ ಹಾಕಲಾಗಿತ್ತು. ಈ ರೀತಿಯ ಮೀಟಿಂಗ ಇರಲಿಲ್ಲ. ಟೀಮ್ ಲೀಟರ್, ಮ್ಯಾನೇಜರ್ ಸೇರಿದಂತೆ ಹಲವರು ಪ್ರತಿ ದಿನ,ವಾರದಲ್ಲಿ ಮೀಟಿಂಗ್ ಮಾಡುತ್ತಾರೆ. ಆದರೆ ಸಿಇಒ ಈ ರೀತಿ ಎಲ್ಲಾ ಉದ್ಯೋಗಿಗಳಿಗೆ ಇನ್ನು ಅರ್ಧ ಗಂಟೆಯಲ್ಲಿ ಮೀಟಿಂಗ್ ಎಂದರೆ ಏನು ಎಂದರು ಎಲ್ಲರೂ ಅಚ್ಚರಿಗೊಂಡಿದ್ದಾರೆ.
ಕಂಪನಿ ತೀವ್ರ ನಷ್ಟದಲ್ಲಿದೆ. ಈ ತಿಂಗಳು ವೇತನ ನೀಡಲು ಹಣವಿಲ್ಲ. ಕಂಪನಿಯ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಹೀಗಾಗಿ ಉದ್ಯೋಗ ಕಡಿತ ಮಾಡುತ್ತಿದ್ದೇವೆ ಎಂದಿದ್ದಾರೆ.
ಬಾಸ್ ಮಾತುಗಳನ್ನು ಕೇಳಿಸಿಕೊಂಡ ಉದ್ಯೋಗಿಗಳು ತಮ್ಮ ತಮ್ಮ ಪರ್ಫಾಮೆನ್ಸ್ ನೆನೆಪಿಸಿಕೊಂಡಿದ್ದಾರೆ. ಕೆಲವರು ಏನೇ ಮಾಡಿದರೂ ತಾನು ಸೇಫ್, ಆದರೆ ಉದ್ಯೋಗ ಕಡಿತದಲ್ಲಿ ಕೆಲಸ ಕಳೆದುಕೊಳ್ಳುವವರು ಯಾರು ಅನ್ನೋ ಆತಂಕ ಮುಖದಲ್ಲಿ ಕಾಣುತ್ತಿದ್ದಂತೆ ಬಾಸ್ ಮಾತು ಮುಂದುವರಿಸಿದ್ದಾರೆ. ಕಂಪನಿಯಲ್ಲಿ ಇದ್ದದ್ದು ಒಟ್ಟು 19 ಮಂದಿ. ಕಂಪನಿ ಸಂಪೂರ್ಣ ನಷ್ಟದಲ್ಲಿರುವ ಕಾರಣ ಸ್ಟಾರ್ಟ್ಅಪ್ ಕಂಪನಿ ಬಾಗಿಲು ಮುಚ್ಚುತ್ತಿದೆ ಎಂದಿದ್ದಾರೆ.
https://www.newsics.com/2025/07/09/shubhaanshu-shukla-will-return-to-earth-after-tomorrow/