newsics.com
ಬಿಹಾರ: ಶಿಕ್ಷಕರೊಬ್ಬರು ವಿದ್ಯಾರ್ಥಿಯ ಮೇಲೆ ಕೈ ಎತ್ತಿದ್ದಕ್ಕಾಗಿ ವಿದ್ಯಾರ್ಥಿಯ ಕುಟುಂಬಸ್ಥರು ಶಿಕ್ಷಕರ ಮೇಲೆಯೇ ಹಲ್ಲೆ ಮಾಡಿದ ಘಟನೆ ಬಿಹಾರದ ಗಯಾ ಜಿಲ್ಲೆಯ ಖಿಜರ್ಸರಾಯ್ ಠಾಣೆ ವ್ಯಾಪ್ತಿಯ ಶಾಹಬಾಜ್ಪುರದ ಸರಕಾರಿ ಶಾಲೆಯೊಂದರಲ್ಲಿ ನಡೆದಿದೆ.
5 ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಪರಸ್ಪರ ಜಗಳವಾಡುತ್ತಿದ್ದಾಗ, ಮತ್ತೊಬ್ಬ ವಿದ್ಯಾರ್ಥಿ ಶಿಕ್ಷಕರಿಗೆ ಈ ಬಗ್ಗೆ ದೂರು ನೀಡಿದ್ದಾನೆ. ಈ ವೇಳೆ ಶಿಕ್ಷಕ ರಾಕೇಶ್ ರಂಜನ್ ಶ್ರೀವಾಸ್ತವ ತರಗತಿಗೆ ಹೋಗಿ ಮಕ್ಕಳ ನಡುವಿನ ಜಗಳವನ್ನು ನಿಲ್ಲಿಸಿ ಇಬ್ಬರಿಗೂ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ.
ಇಬ್ಬರಿಗೂ ಗದರಿಸಿದಾಗ, ಅವರಲ್ಲಿ ಒಬ್ಬ ಶಾಲೆಯಿಂದ ಓಡಿಹೋಗಿ ತನ್ನ ಕುಟುಂಬಕ್ಕೆ ಶಿಕ್ಷಕನು ತನಗೆ ಕಪಾಳಮೋಕ್ಷ ಮಾಡಿದರೆಂದು ತಿಳಿಸಿದ್ದಾನೆ.
ಇದನ್ನು ಕೇಳಿ ಕೋಪಗೊಂಡ ಕುಟುಂಬಸ್ಥರು ಶಾಲೆಗೆ ಧಾವಿಸಿ, ಶಿಕ್ಷಕ ರಾಕೇಶ್ ರಂಜನ್ ಶ್ರೀವಾಸ್ತವ ಮತ್ತು ಇತರ ಕೆಲವು ಶಿಕ್ಷಕರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ದಾಳಿಯಿಂದ ಶಿಕ್ಷಕರಿಗೆ ಗಾಯಗಳಾಗಿದ್ದು, ಕೆಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.