newsics.com
ಗೊಂಡಾ : 13 ವರ್ಷದ ಬಾಲಕನನ್ನು ಮೊಸಳೆಯೊಂದು ಘಾಗ್ರಾ ನದಿಗೆ ಎಳೆದೊಯ್ದ ಘಟನೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ.
ರಾಜಾ ಬಾಬು ಅಲಿಯಾಸ್ ನಾನ್ ಯಾದವ್ ಎಂದು ಗುರುತಿಸಲ್ಪಟ್ಟ ಬಾಲಕ ತನ್ನ ಎಮ್ಮೆಗಳನ್ನು ಸ್ನಾನ ಮಾಡಲು ನದಿಗೆ ಕರೆದೊಯ್ದಿದ್ದಾನೆ. ಎಮ್ಮೆಗಳಿಗೆ ಸ್ನಾನ ಮಾಡಿಸುವಾಗ ಈ ವೇಳೆ ಬಂದ ಮೊಸಳೆ ಬಾಲಕನನ್ನು ನದಿಗೆ ಎಳೆದೊಯ್ದಿದೆ. ಘಟನೆಯ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಘಟನೆ ಸೋನೌಲಿ ಮೊಹಮ್ಮದ್ಪುರ ಗ್ರಾಮದಲ್ಲಿ ನಡೆದಿದೆ. ವೈರಲ್ ದೃಶ್ಯಗಳಲ್ಲಿ ಮೊಸಳೆ ಮತ್ತು ಬಾಲಕನ ತಲೆ ಕಾಣುವುದನ್ನು ನೋಡಬಹುದು.
ಬಾಲಕನ ಮೃತದೇಹ ಪತ್ತೆಹಚ್ಚಲು ಅಧಿಕಾರಿಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಇಲ್ಲಿಯವರೆಗೆ ಯಾದವ್ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.