newsics.com
ಕಳೆದ 17 ವರ್ಷಗಳಿಂದ ಆಗದಿದ್ದನ್ನ ಆ್ಯಂಡಿ ಫ್ಲವರ್ ಕೋಚ್ ಆಗುತ್ತಿದ್ದಂತೆ ಆರ್ಸಿಬಿ ಟ್ರೋಫಿ ಎತ್ತಿ ಹಿಡಿದಿದೆ. ಇದೀಗ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಅವರು ಇನ್ನು ಭಾರತದಲ್ಲಿದ್ದು ಉತ್ತರಾಖಂಡದ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.
ಜಿಂಬಾಬ್ವೆ ತಂಡದ ಮಾಜಿ ಕ್ಯಾಪ್ಟನ್ ಹಾಗೂ ಆರ್ಸಿಬಿ ತಂಡದ ಹೆಡ್ ಕೋಚ್ ಆ್ಯಂಡಿ ಫ್ಲವರ್, ಉತ್ತರಾಖಂಡದ ಪುಣ್ಯಕ್ಷೇತ್ರ ಋಷಿಕೇಶಕ್ಕೆ ಭೇಟಿ ನೀಡಿದ್ದಾರೆ. ಋಷಿಕೇಶದ ಪರ್ಮಾರ್ಥ ನಿಕೇತನ ಆಶ್ರಮದ ಆಧ್ಯಾತ್ಮಿಕ ಗುರುಗಳಾದ ಸ್ವಾಮಿ ಚಿದಾನಂದ ಸರಸ್ವತಿ ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ.
ಋಷಿಕೇಶಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಆರ್ಸಿಬಿ ತಂಡದ ಹೆಡ್ ಕೋಚ್ ಆ್ಯಂಡಿ ಫ್ಲವರ್ ಅವರು, ಕಳೆದ ಎರಡು ವಾರಗಳಿಂದ ನಾನು ಇಲ್ಲಿ ಇದ್ದೇನೆ. ಇಲ್ಲಿ ಯೋಗ ಕುರಿತು ಸಾಕಷ್ಟು ತಿಳಿದುಕೊಳ್ಳುತ್ತಿದ್ದೇನೆ. ಆದರೆ ಯೋಗ ಕೇವಲ ಒಂದು ಗಂಟೆಯಲ್ಲಿ ಕಲಿತುಕೊಳ್ಳುವುದು ಅಲ್ಲ. ಇದು ಲಕ್ಷಾಂತರ ಜನರ ಜೀವನದ ವಿಧಾನ ಆಗಿದೆ. ನಾನು ನಿಜವಾಗಲೂ ದೈಹಿಕವಾಗಿ ಮಾಡಿದ ಅಭ್ಯಾಸಗಳನ್ನು ಎಂಜಾಯ್ ಮಾಡಿದ್ದೇನೆ ಎಂದು ಹೇಳಿದ್ದಾರೆ.