newsics.com
ಬೆಂಗಳೂರು: ಪ್ರಜಾವಾಣಿಯಲ್ಲಿದ್ದ, ಸ್ವಯಂ ನಿವೃತ್ತಿ ಪಡೆದಿದ್ದ ಕುಸುಮಾ ಶಾನಭಾಗ ಇಂದು ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಅವರು ಕ್ಯಾನ್ಸರ್ ಆಗಿದ್ದಾಗ ಅದರ ವಿರುದ್ಧ ಹೋರಾಡಿ ಗೆದ್ದವರು.
ಕುಸುಮಾ ಅವರು ಕಾದಂಬರಿಕಾರ ಭಾರತೀಸುತ ಅವರ ಮಗಳು. ಭಾರತೀಸುತ ಅವರ ಖ್ಯಾತ ಕಾದಂಬರಿಗಳು; ಎಡಕಲ್ಲು ಗುಡ್ಡದ ಮೇಲೆ, ಹುಲಿಯ ಹಾಲಿನ ಮೇವು, ಗಿರಿಕನ್ಯೆ, ಬಯಲುದಾರಿ. ಇವು ಸಿನಿಮಾಗಳಾಗಿಯೂ ಪ್ರಸಿದ್ಧ
ಕುಸುಮಾ ಶಾನಭಾಗ ಅವರು ಮಂಡ್ಯದಲ್ಲಿ ಪ್ರಜಾವಾಣಿಯ ವರದಿಗಾರರಾಗಿದ್ದ ಸಂದರ್ಭ. ವಕೀಲರೂ ಲಂಕೇಶ್ ಪತ್ರಿಕೆಯ ವರದಿಗಾರರೂ ಆಗಿದ್ದ ಕಂಚನಹಳ್ಳಿ ಗಂಗಾಧರ ಮೂರ್ತಿ ಅವರ ಕೊಲೆಯಾಯಿತು. ಕೊಲೆಗೆ ಸಂಬಂಧಿಸಿದಂತೆ ಆರೋಪಿಯೆಂದು ಆಗ ಶಾಸಕರಾಗಿದ್ದವರಿಗೆ ಕೋಳ ಹಾಕಿ ಬಂಧಿಸಿದ ಫೋಟೋವನ್ನು ತೆಗೆದವರು ಕುಸುಮಾ ಶಾನಭಾಗ. ಆಗ ಅವರು ತಮ್ಮ ಲೂನಾದಲ್ಲಿ ಓಡಾಡುತ್ತಿದ್ದರು. ಗಲ್ಲಿಗಳನ್ನು ಸುತ್ತಿಕೊಂಡು ಹೋಗಿ ಶಾಸಕರಿಗೆ ಕೋಳ ಹಾಕಿದ ಫೋಟೋ ತೆಗೆದರು. ಅವರು ಫೋಟೋ ತೆಗೆಯಬಾರದೆಂದು ಶಾಸಕರ ಕಡೆ ಬೆನ್ನತ್ತಿದವರಿಂದ ತಪ್ಪಿಸಿಕೊಂಡಿದ್ದರು. ಶಾಸಕರನ್ನು ಬಂಧಿಸಿದ ಸುದ್ದಿ ಪ್ರಜಾವಾಣಿಯ ಮೊದಲ ಪುಟದಲ್ಲಿ ಪ್ರಕಟವಾಗಿತ್ತು. ತರುವಾಯ ಶಾಸಕರು ಆರೋಪಮುಕ್ತರಾದರು