newsics.com
ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು 265 ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಲಂಡನ್ಗೆ ಹೊರಟಿದ್ದ ಬೋಯಿಂಗ್ ಡ್ರೀಮ್ಲೈನರ್ ವಿಮಾನದಲ್ಲಿ 242 ಪ್ರಯಾಣಿಸುತ್ತಿದ್ದರು. ಅದರಲ್ಲಿ ಅಚ್ಚರಿ ಎಂಬಂತೆ ಬ್ರಿಟಿಷ್ ಪ್ರಜೆ ವಿಶ್ವಾಸ್ ಕುಮಾರ್ ರಮೇಶ್ ಮಾತ್ರ ಬದುಕಿ ಉಳಿದಿದ್ದಾರೆ.ಸದ್ಯ ಅಹ್ಮದಾಬಾದ್ನ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯಲ್ಲಿ ಬದುಕುಳಿದ ವಿಶ್ವಾಸ್ಕುಮಾರ್ ರಮೇಶ್ಗೆ ಇದೀಗ ವಿಜಯ್ ಮಲ್ಯ ಪರಿಹಾರ ಘೋಷಿಸಿದ್ದಾರೆ ಎಂಬ ಟ್ವೀಟ್ ಹರಿದಾಡಿದೆ. ಏರ್ಇಂಡಿಯಾ ದುರಂತದಲ್ಲಿ ಬದುಕುಳಿದ ಓರ್ವನಿಗೆ ತಮ್ಮ ಮಲ್ಯ ಫೌಂಡೇಷನ್ ವತಿಯಿಂದ 11 ಲಕ್ಷ ರೂಪಾಯಿಗಳನ್ನು ಘೋಷಿಸಿದೆ ಎಂಬ ಟ್ವೀಟ್ ಡಾ ವಿಜಯ್ ಮಲ್ಯ ಎಂಬ ಖಾತೆಯಿಂದ ಬಂದಿದೆ.30 ಸಾವಿರಕ್ಕೂ ಹೆಚ್ಚಿನ ಹಿಂಬಾಲಕರು ಇರುವ ಈ ಖಾತೆ ವಿಜಯ್ ಮಲ್ಯ ಅವರ ಅಧಿಕೃತ ಖಾತೆಯಲ್ಲ.