newsics.com
ಭಾರತವನ್ನೇ ತೊರೆದು ಅಡಗಿಕೊಂಡಿರುವ ವಿಜಯ್ ಮಲ್ಯಗೆ ದೇವರ ಮೇಲೆ ಅಪಾರ ಭಕ್ತಿ. ಹೀಗಾಗಿ ದಕ್ಷಿಣ ಭಾರತದ ದೇವಸ್ಥಾನಗಳಿಗೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಸದ್ಯ ವಿಜಯ್ ಮಲ್ಯ ಮಾತನಾಡಿದ ಸಂದರ್ಶನ ವಿಡಿಯೋ ಟ್ರೆಂಡ್ ಆಗ್ತಿದೆ.
ಹೌದು, ಸಂದರ್ಶನವೊಂದರಲ್ಲಿ ಮಾತನಾಡಿದ ಉದ್ಯಮಿ ವಿಜಯ್ ಮಲ್ಯ, ತಾನು ಧಾರ್ಮಿಕ ವ್ಯಕ್ತಿ. ದೇವರನ್ನು ಹೆಚ್ಚು ನಂಬುತ್ತೇನೆ ಎಂದು ಮನಬಿಚ್ಚಿ ಮಾತಾಡಿದ್ದಾರೆ. ಅಲ್ಲದೇ, ದಕ್ಷಿಣ ಭಾರತದ ಬಹುತೇಕ ದೇವಸ್ಥಾನಗಳಿಗೆ ಭೇಟಿ ನೀಡಿದ್ದೇನೆ. ಭಕ್ತಿಯಿಂದ ದೇವರ ದರ್ಶನ ಪಡೆದಿದ್ದೇನೆ. ಭಕ್ತಿಯ ಸಂಕೇತವಾಗಿ, ಕೇರಳದ ಶಬರಿಮಲೆ ದೇವಸ್ಥಾನದ ಚಿನ್ನದ ಮೇಲ್ಜಾವಣಿ, ತಿರುಪತಿ ತಿರುಮಲ ದೇವಸ್ಥಾನದ ಗರ್ಭಗುಡಿಯ ಚಿನ್ನದ ಹೊದಿಕೆ, ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಗಳ ಧ್ವಜಸ್ಥಂಭಗಳನ್ನು ಕಾಣಿಕೆಯಾಗಿ ಸಮರ್ಪಿಸಿರುವುದಾಗಿ ತಿಳಿಸಿದ್ದಾರೆ. “ಈ ಕಾಣಿಕೆಗಳು ನನ್ನ ಭಕ್ತಿಯ ಸಂಕೇತ. ದೇವರು ನನ್ನ ಸಂಕಷ್ಟಗಳಿಂದ ರಕ್ಷಿಸುವ ಭರವಸೆ ಇದೆ,” ಎಂದು ಮಲ್ಯ ವಿಶ್ವಾಸದಿಂದ ಹೇಳಿದ್ದಾರೆ. ಸದ್ಯ ಮಲ್ಯ ಮಾತನಾಡಿದ ವಿಡಿಯೋ ಫುಲ್ ವೈರಲ್ ಆಗ್ತಿದೆ.
Vijay Mallya was a Crazy businessman. He wouldn't have allowed others to establish monopolies in many sectors
A debt of ₹9k crores was never a big deal for him, it seems he was strategically targeted to benefit certain individuals 👀🧐
— 𝗩eena Jain (@DrJain21) June 7, 2025
20 ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆ
ರಾಜ್ ಶಮಾನಿ ಪಾಡ್ಕ್ಯಾಸ್ಟ್ನಲ್ಲಿ ವಿಜಯ್ ಮಲ್ಯ ಮಾತಾಡಿದ್ದು, ಈ ವಿಡಿಯೋ 20 ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಭಾರತದಲ್ಲಿ ಪರಾರಿಯಾದ ಮಲ್ಯ ಇಮೇಜ್ ಕಡಿಮೆ ಆಗಿಲ್ವಾ ಎನ್ನುವ ಪ್ರಶ್ನೆ ಮೂಡಿದೆ.