newsics.com
ಮೇಘಾಲಯಕ್ಕೆ ಹನಿಮೂನ್ಗೆಂದು ಕರೆದೊಯ್ದು ಪತ್ನಿಯೇ ಗಂಡನನ್ನು ಕೊಲೆ ಮಾಡಿಸಿರುವ ಪ್ರಕರಣದ ಪ್ರಮುಖ ಆರೋಪಿಗೆ ಇಂದೋರ್ ಏರ್ಪೋರ್ಟ್ನಲ್ಲಿ ಪ್ರಯಾಣಿಕರೊಬ್ಬರು ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ.
ಲಗೇಜ್ನೊಂದಿಗೆ ಕಾಯುತ್ತಿದ್ದ ಪ್ರಯಾಣಿಕನೊಬ್ಬ ಅವರು ನಡೆದುಕೊಂಡು ಹೋಗುವುದನ್ನು ನೋಡಿ, ಇದ್ದಕ್ಕಿದ್ದಂತೆ ಆರೋಪಿಗಳಲ್ಲಿ ಒಬ್ಬನಿಗೆ ಕಪಾಳಮೋಕ್ಷ ಮಾಡಿದ್ದಾರೆ.
ರಾಜಾ ರಘುವಂಶಿ ಹಾಗೂ ಸೋನಮ್ ಕಳೆದ ತಿಂಗಳು ಮುದವೆಯಾಗಿದ್ದರು. ಸೋನಮ್ಗೆ ರಾಜ್ ಕುಶ್ವಾಹ ಎಂಬುವವರ ಜತೆ ಅಕ್ರಮ ಸಂಬಂಧವಿತ್ತು. ಹೀಗಾಗಿ ರಾಜಾರನ್ನು ಕೊಲೆ ಮಾಡಲು ನಿರ್ಧರಿಸಿದ್ದರು. ಕೊಲೆ ಮಾಡಿ ಪ್ರಿಯಕರ ರಾಜ್ನನ್ನು ಹುಡುಕಿಕೊಂಡು ಇಂದೋರ್ಗೆ ಆಕೆ ವಾಪಸ್ ಬಂದಿದ್ದಳು.