newsics.com
ಬೆಂಗಳೂರು: ಇತ್ತೀಚೆಗೆ ಪ್ರೇಯಸಿ ಹರಿಣಿಯನ್ನು 17 ಬಾರಿ ಇ*ರಿದು ಹ*ತ್ಯೆಗೈದಿದ್ದ ಆರೋಪಿ ಯಶಸ್ ನನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಯು ಎರಡು ತಿಂಗಳ ಹಿಂದೆಯೇ ಕೊ*ಲೆಗೆ ಸಂಚು ರೂಪಿಸಿದ್ದ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸುಬ್ರಹ್ಮಣ್ಯಪುರದ ಬಳಿಯ ಪೂರ್ಣಪ್ರಜ್ಞ ಲೇಔಟ್ನ ಓಯೋರೂಮ್ನಲ್ಲಿ ಪ್ರೇಯಸಿ ಹರಿಣಿ ಯನ್ನು ಕಳೆದ ಶುಕ್ರವಾರ ಆರೋಪಿ ಹತ್ಯೆಗೈದಿದ್ದ. ಬಿಸಿಎ ಪದವೀಧರನಾದ ಯಶಸ್, ವೈಟ್ಫೀಲ್ಡ್ನ ಸಾಫ್ಟ್ವೇರ್ ಕಂಪನಿಯಲ್ಲಿ ಎಂಜಿನಿಯರ್ ಆಗಿದ್ದ. ಆತನ ತಂದೆ ಬಿಎಂಟಿಸಿ ನೌಕರರಾಗಿದ್ದಾರೆ ಮತ್ತು ತಾಯಿ ಶಿಕ್ಷಕಿಯಾಗಿದ್ದಾರೆ.
ದಂಪತಿಯ ಒಬ್ಬನೇ ಮಗನಾದ ಯಶಸ್ಗೆ ಲಕ್ಷಾಂತರ ರೂ. ಸಂಬಳ ಬರುತ್ತಿತ್ತು. ಕೊಲೆಯಾದ ಗೃಹಿಣಿ ಹರಿಣಿ 2 ತಿಂಗಳ ಹಿಂದೆ ಯಶಸ್ನನ್ನು ಭೇಟಿಯಾಗಿ, ನಮ್ಮ ಅನೈತಿಕ ಸಂಬಂಧದ ವಿಚಾರ ಕುಟುಂಬ ಸದಸ್ಯರಿಗೆ ಗೊತ್ತಾಗಿದೆ. ಸಂಬಂಧ ಮುಂದುವರಿಸಿದರೆ ಇಬ್ಬರಿಗೂ ಸಮಸ್ಯೆಯಾಗುತ್ತದೆ. ಹೀಗಾಗಿ, ನಾವಿಬ್ಬರು ದೂರವಾಗೋಣ. ಮತ್ತೆ ನನ್ನನ್ನು ಭೇಟಿ ಮಾಡಬೇಡ. ಮುಂದೆ ಎಂದಿಗೂ ನಾನು ನಿನಗೆ ಸಿಗುವುದಿಲ್ಲ ಎಂದು ಹೇಳಿದ್ದರು. ಅದರಿಂದ ವಿಚಲಿತನಾಗಿದ್ದ ಯಶಸ್, ಹರಿಣಿ ಅವರನ್ನು ಅಂದೇ ಕೊಲ್ಲಲು ಸಂಚು ರೂಪಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬುದ್ದಿ ಹೇಳಿದರೂ ಬದಲಾಗದ ಮಗ!
ಹರಿಣಿಯ ಅನೈತಿಕ ಸಂಬಂಧದ ವಿಚಾರ ಅವರ ಆಕೆಯ ಸಹೋದರನಿಗೆ ಗೊತ್ತಾಗಿ, ಅವರು ಕೆಂಗೇರಿ ಉಪನಗರದಲ್ಲಿನ ಯಶಸ್ ನ ಮನೆಗೆ ಹೋಗಿ ಬುದ್ಧಿ ಹೇಳಿದ್ದರು. ಅಲ್ಲದೆ, ಆತನ ಪೋಷಕರಿಗೂ ಈ ವಿಷಯ ತಿಳಿಸಿ ಮಗನನ್ನು ಹದ್ದುಬಸ್ತಿನಲ್ಲಿ ಇಡುವಂತೆ ಸೂಚಿಸಿದ್ದರು. ಬಳಿಕ ಯಶಸ್ನ ಪೋಷಕರು, ಹರಿಣಿಯ ಸಹವಾಸ ಬಿಟ್ಟು ಬಿಡು. ಬೇರೆ ಹುಡುಗಿ ನೋಡಿ ಮದುವೆ ಮಾಡುತ್ತೇವೆ ಎಂದು ಮಗನಿಗೆ ಬುದ್ಧಿವಾದ ಹೇಳಿದ್ದರು. ಆದರೂ ಆತ ಹರಿಣಿ ಭೇಟಿಗೆ ಹಪಹಪಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.