newsics.com
ಇಸ್ಲಾಮಾಬಾದ್: ‘ನಮ್ಮ ಜತೆ ಮಾತುಕತೆಗೆ ಭಾರತವನ್ನು ನೀವೇ ಒಪ್ಪಿಸಬೇಕು’ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಮನವಿ ಮಾಡಿದ್ದಾರೆ.
ಈ ಮೂಲಕ ಪಾಕಿಸ್ತಾನ ಹೊಸದೊಂದು ನಾಟಕ ಶುರು ಮಾಡಿದಂತಿದೆ.
ಈಗಾಗಲೇ ಭಾರತವು ಪಾಕಿಸ್ತಾನ ಭಯೋತ್ಪಾದನೆಗೆ ಸಹಕಾರ ನೀಡುವುದನ್ನು ಬಿಡುವವರೆಗೂ ಅವರೊಂದಿಗೆ ಬೇರೆ ಯಾವ ರೀತಿ ಮಾತುಕತೆಯೂ ಇಲ್ಲ. ಇನ್ನೇನಿದ್ದರೂ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ ಮಾತನಾಡುತ್ತೇವೆ ಎಂದು ಹೇಳಿತ್ತು.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪಾಕಿಸ್ತಾನ ಮೂಲದ ಉಗ್ರರು ಅಮಾಯಕ ಮೇಲೆ ದಾಳಿ ನಡೆಸಿ 26 ಮಂದಿಯನ್ನು ಹತ್ಯೆಗೈದಿದ್ದರು. ಇದಕ್ಕೆ ಪ್ರತಿಯಾಗಿ ಭಾರತವು ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು. ಅದಕ್ಕೂ ಮೊದಲು ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸಿತ್ತು, ಇದರಿಂದ ಭಾರತದ ಮೂಲಕ ಪಾಕಿಸ್ತಾನಕ್ಕೆ ಹೋಗುವ ನೀರಿಗೆ ತಡೆ ಬಿದ್ದಿತ್ತು.
ಈ ನಿರ್ಧಾರವು ಪಾಕಿಸ್ತಾನದಲ್ಲಿ ನೀರಿನ ಅಭಾವ ಸೃಷ್ಟಿಸಿದೆ. ಏರ್ಪೋರ್ಟ್ನಲ್ಲಿ ಕೂಡ ನೀರು ಇಲ್ಲದೆ ಜನ ಪರದಾಡುವಂತಾಗಿದೆ. ಮೇ 10ರಂದು ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ್ದವು. ಪಾಕಿಸ್ತಾನವು ಸಿಂಧೂ ನದಿ ಒಪ್ಪಂದದ ವಿಚಾರವಾಗಿ ಮಾತನಾಡಲು ಬಯಸಿತ್ತು ಆದರೆ ಭಾರತ ಅದಕ್ಕೆ ಸಿದ್ಧವಿರಲಿಲ್ಲ.
US news 12 ದೇಶಗಳನ್ನು ಅಪಾಯಕಾರಿ ವರ್ಗಕ್ಕೆ ಸೇರಿಸಿದ ಟ್ರಂಪ್, ಅಮೆರಿಕ ಪ್ರವೇಶ ನಿಷೇಧ
Virat-Anushka’s Temple Run | RCB ವಿಜಯಕ್ಕೆ ವಿರಾಟ್- ಅನುಷ್ಕಾ ದಂಪತಿಯ ಟೆಂಪಲ್ ರನ್ ಕಾರಣವಂತೆ… ಭಾರೀ ಚರ್ಚೆ!