newsics.com
ನವದೆಹಲಿ: ಭಾರತವು ಪಾಕಿಸ್ತಾನದ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ‘ಆಪರೇಷನ್ ಸಿಂಧೂರ್’ ಕಾಯರ್ಯಚರಣೆ ಮೂಲಕ ಯಶಸ್ವಿ ವಾಯುದಾಳಿ ನಡೆಸಿದೆ. ಭಾರತೀಯ ಸೇನೆಯ ಈ ದಿಟ್ಟ ಕ್ರಮಕ್ಕೆ ದೇಶದಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದೆ.
ನಿನ್ನೆ ದಾಳಿಯ ಮಾಹಿತಿ ನೀಡಿದ ಕರ್ನಲ್ ಸೋಫಿಯಾ ಖುರೆಷಿ ಕರ್ನಾಟಕದ ಸೊಸೆ ಎಂದು ಗೊತ್ತಾಗಿದೆ. ಕರ್ನಲ್ ಸೋಫಿಯ ಕರ್ನಾಟಕದ ಬೆಳಗಾವಿ ಮೂಲದವರು ಎಂದು ತಿಳಿದುಬಂದಿದೆ. ಸೋಫಿಯ ಬೆಳಗಾವಿಯ ಸೊಸೆ ಎಂಬುವುದೇ ಹೆಮ್ಮೆಯಾಗಿದೆ. ಅಲ್ಲದೇ ಸೋಫಿಯಾ ಪತಿ ಕೂಡ ಭಾರತೀಯ ಸೇನಾಧಿಕಾರಿ ಎನ್ನುವುದು ಮತ್ತೊಂದು ಹೆಮ್ಮೆಯ ಸಂಗತಿಯಾಗಿದೆ.
ಗುಜರಾತ್ನ ವಡೋದರಾದಲ್ಲಿ 1981ರಲ್ಲಿ ಸೋಫಿಯಾ ಖುರೇಷಿ ಅವರು ಜನಿಸಿದ್ದರು. ಜೀವರಸಾಯನಶಾಸ್ತ್ರದಲ್ಲಿ ಸೋಫಿಯಾ ಅವರು ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ವಿಶೇಷ ಎಂದರೆ, ಸೋಫಿಯಾ ಅವರ ತಂದೆ ಹಾಗೂ ಅಜ್ಜ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು.
1999ರಲ್ಲಿ ಲೆಫ್ಟಿನೆಂಟ್ ಪದವಿಯೊಂದಿಗೆ ಭಾರತೀಯ ಸೇನೆಗೆ ಸೇರಿದ ಕರ್ನಲ್ ಖುರೇಷಿ ಅವರು ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಅಪಾರ ಅನುಭವ ಹೊಂದಿದ್ದಾರೆ. 2006ರಲ್ಲಿ ಕಾಂಗೋದಲ್ಲಿ ನಡೆದ ಭಾರತೀಯ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ವಿಶ್ವಸಂಸ್ಥೆಯ ಶಾಂತಿಪಾಲನಾ ಪ್ರಯತ್ನಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ
ಸೋಫಿಯ ಪತಿ ಹೆಸರು, ತಾಜುದ್ದೀನ್ ಬಾಗೇವಾಡಿ ಎಂದು ತಿಳಿದುಬಂದಿದೆ. 2015ರಲ್ಲಿ ಇಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ ಸದ್ಯ ಸೋಫಿಯಾ ಜಮ್ಮುನಲ್ಲಿ ಕರ್ನಲ್ ಆಗಿ ಸೇವಿ ಸಲ್ಲಿಸುತ್ತಿದ್ದು, ಪತಿ ತಾಜುದ್ದೀನ್ ಜಾನ್ಸಿ ಅಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.ಗೋಕಾಕಿನ ಕೊಣ್ಣೂರು ನಿವಾಸಿಯಾಗಿದ್ದು, ಭಾರತೀಯ ಸೇನೆಯಲ್ಲಿ ಇಬ್ಬರು ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.