newsics.com
ಬೆಂಗಳೂರು: ಸೋನು ನಿಗಮ್ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಕನ್ನಡ ಚಿತ್ರರಂಗ ಸೋನು ನಿಗಮ್ಗೆ ಯಾವುದೇ ಅವಕಾಶ ನೀಡದಂತೆ ನಿರ್ಧಾರ ಕೈಗೊಂಡಿತ್ತು, ಅತ್ತ ಪೊಲೀಸರು ಕೂಡಾ ನೋಟಿಸ್ ನೀಡಿದ್ದಾರೆ.
ಇದರ ಬೆನ್ನಲ್ಲೇ ಸಿಂಗರ್ ಸೋನು ನಿಗಮ್ ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿಯೊಂದನ್ನು ಹಾಕಿದ್ದಾರೆ.
ನೀವು ಯಾವ ತೀರ್ಪು ನೀಡಿದರೂ ನಾನು ಅದನ್ನು ಗೌರವದಿಂದ ಸ್ವೀಕರಿಸುತ್ತೇನೆ’ ಎಂದು ಅವರು ಹೇಳಿದ್ದಾರೆ
ನಾನು ಕನ್ನಡ ಭಾಷೆ, ಸಂಸ್ಕೃತಿ, ಸಂಗೀತ, ಸಂಗೀತಗಾರರು, ರಾಜ್ಯ ಮತ್ತು ಜನರಿಗೆ ಕರ್ನಾಟಕದಲ್ಲಿರುವಾಗ ಮಾತ್ರವಲ್ಲ, ವಿಶ್ವದ ಎಲ್ಲೆಡೆಯೂ ಅಪಾರವಾದ ಪ್ರೀತಿಯನ್ನು ತೋರಿದ್ದೇನೆ. ವಾಸ್ತವವಾಗಿ, ನನ್ನ ಹಿಂದಿ ಸೇರಿದಂತೆ ಇತರ ಭಾಷೆಗಳ ಹಾಡುಗಳಿಗಿಂತ ಕನ್ನಡ ಹಾಡುಗಳನ್ನು ನಾನು ಹೆಚ್ಚು ಗೌರವಿಸಿದ್ದೇನೆ. ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಸಾಕ್ಷಿಯಾಗಿ ನೂರಾರು ವೀಡಿಯೊಗಳು ಪ್ರಸಾರವಾಗುತ್ತಿವೆ. ಕರ್ನಾಟಕದಲ್ಲಿ ನಡೆಯುವ ಪ್ರತಿ ಸಂಗೀತ ಕಾರ್ಯಕ್ರಮಕ್ಕೆ ನಾನು ಒಂದು ಗಂಟೆಗೂ ಹೆಚ್ಚು ಕಾಲದ ಕನ್ನಡ ಹಾಡುಗಳನ್ನು ಸಿದ್ಧಪಡಿಸುತ್ತೇನೆ.
ಆದರೆ, ನಾನು ಯಾವುದೇ ಅವಮಾನವನ್ನು ಸಹಿಸಿಕೊಳ್ಳುವ ಯುವಕನಲ್ಲ. ನಾನು 51 ವರ್ಷದವನಾಗಿದ್ದೇನೆ. ನನ್ನ ಮಗನ ವಯಸ್ಸಿನವನು ಭಾಷೆಯ ಹೆಸರಿನಲ್ಲಿ, ಅದರಲ್ಲೂ ನನ್ನ ಕೆಲಸದ ಎರಡನೇ ಭಾಷೆಯಾದ ಕನ್ನಡದ ಹೆಸರಿನಲ್ಲಿ, ಸಾವಿರಾರು ಜನರ ಮುಂದೆ ನನ್ನನ್ನು ನೇರವಾಗಿ ಬೆದರಿಸಿದರೆ ಅದಕ್ಕೆ ಆಕ್ಷೇಪ ತೆಗೆದುಕೊಳ್ಳುವ ಹಕ್ಕು ನನಗಿದೆ. ಅದೂ ಕೂಡ ಕನ್ಸರ್ಟ್ನ ಮೊದಲ ಹಾಡಿನ ನಂತರ! ಅವನು ಇನ್ನೂ ಕೆಲವರನ್ನು ಪ್ರಚೋದಿಸಿದ್ದಾನೆ. ಅವರದೇ ಜನರು ಇದರಿಂದ ಮುಜುಗರಕ್ಕೊಳಗಾಗಿ ಅವರಿಗೆ ಸುಮ್ಮನಿರಲು ಹೇಳುತ್ತಿದ್ದರು. ನಾನು ಅವರಿಗೆ ಬಹಳ ಸೌಮ್ಯವಾಗಿ ಮತ್ತು ಪ್ರೀತಿಯಿಂದ, ಕಾರ್ಯಕ್ರಮ ಈಗಷ್ಟೇ ಆರಂಭವಾಗಿದೆ, ಇದು ನನ್ನ ಮೊದಲ ಹಾಡು, ನಾನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ, ಆದರೆ ನಾನು ಯೋಜಿಸಿರುವಂತೆ ಕನ್ಸರ್ಟ್ ಮುಂದುವರಿಯಲು ನೀವು ಬಿಡಬೇಕೆಂದು ಹೇಳಿದೆ. ಪ್ರತಿ ಕಲಾವಿದನೂ, ಸಂಗೀತಗಾರರು ಮತ್ತು ತಂತ್ರಜ್ಞರು ಸಿಂಕ್ ಆಗಿರಲು ಹಾಡುಗಳ ಪಟ್ಟಿಯನ್ನು ಸಿದ್ಧಪಡಿಸಿರುತ್ತಾನೆ. ಆದರೆ ಅವರು ಗಲಾಟೆ ಮಾಡಲು ಮತ್ತು ಬೆದರಿಸಲು ಶುರುಮಾಡಿದ್ದಾರೆ. ಹಾಗಿದ್ರೆ ಇಲ್ಲಿ ಯಾರು ತಪ್ಪು ಮಾಡಿದ್ದಾರೆ ಎಂದು ಹೇಳಿ?
ಯಾರು ತಪ್ಪಿತಸ್ಥರು ಎಂದು ಕರ್ನಾಟಕದ ಜನರು ನಿರ್ಧರಿಸಲಿ. ನಿಮ್ಮ ತೀರ್ಪನ್ನು ನಾನು ಗೌರವದಿಂದ ಸ್ವೀಕರಿಸುತ್ತೇನೆ. ಕರ್ನಾಟಕದ ಕಾನೂನು ಏಜೆನ್ಸಿಗಳು ಮತ್ತು ಪೊಲೀಸರನ್ನು ನಾನು ಸಂಪೂರ್ಣವಾಗಿ ಗೌರವಿಸುತ್ತೇನೆ. ಕರ್ನಾಟಕದಿಂದ ನನಗೆ ದೈವಿಕ ಪ್ರೀತಿ ಸಿಕ್ಕಿದೆ, ನಿಮ್ಮ ತೀರ್ಪು ಏನೇ ಇರಲಿ, ಯಾವುದೇ ಕೆಡುಕಿಲ್ಲದೆ ನಾನು ಅದನ್ನು ಯಾವಾಗಲೂ ಆದರಿಸುತ್ತೇನೆ.‘ ಎಂದು ಬರೆದುಕೊಂಡಿದ್ದಾರೆ
https://www.instagram.com/p/DJRJzkdtgTb/?igsh=MWw1NmEzaG03MzEwbA==