newsics.com
ಜಮ್ಮುವಿನ ಪಹಲ್ಗಾಮ್ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆಸಿದ ಅಟ್ಟಹಾಸಕ್ಕೆ ಬರೋಬ್ಬರಿ 28 ಜನರು ಮೃತಪಟ್ಟಿದ್ದಾರೆ. ಸದ್ಯ ಈ ಘಟನೆಯಿಂದ ಇಡೀ ಭಾರತ ಬೆಚ್ಚಿ ಬಿದ್ದಿದೆ.
ಈ ನಡುವೆ ಪಹಲ್ಗಾಮ್ ಪ್ರದೇಶದ ಕುರಿತು ಕೂಡ ಅನೇಕ ಚರ್ಚೆಗಳು ಆರಂಭವಾಗಿದೆ. ಹಾಗಿದ್ರೆ, ಪಹಲ್ಗಾಮ್ ಅಂದ್ರೇನು? ಏನಿದರ ವಿಶೇಷ?
ಪಹಲ್ಗಾಮ್ ಸುಂದರ ಹುಲ್ಲುಗಾವಲು ಪ್ರದೇಶ. ಆಗಾಗ ಬೀಳುವ ಮಂಜು ಕೂಡ ಈ ಸ್ಥಳದ ಆಕರ್ಷಣೆಯನ್ನು ಹೆಚ್ಚಿಸಿದೆ. ಹಿಮಾಲಯದ ಗಾಳಿ ಈ ಪ್ರದೇಶದ ಆಧ್ಯಾತ್ಮಿಕತೆಯ ಶಕ್ತಿಯನ್ನು ಹೆಚ್ಚಿಸಿದೆ. ಇದು ಮನುಷ್ಯ ಪ್ರಕೃತಿಯೊಂದಿಗೆ ಒಂದಾಗುವ ಸ್ಥಳ ಎಂದು ನಂಬಲಾಗಿದೆ. ಇಡೀ ದೇಶ ಇದನ್ನು ಪ್ರೀತಿಯಿಂದ ‘ಮಿನಿ ಸ್ವಿಡ್ಜರ್ಲ್ಯಾಂಡ್’ ಎಂದು ಕರೆಯುತ್ತಿದೆ. ಆದರೆ. ಏಪ್ರಿಲ್ 22ರಂದು ನಡೆದ ದಾಳಿ ಪಹಲ್ಗಾಮ್ನ ಶಾಂತಿಯನ್ನು ಕದಡಿದ್ದು. ಗುಂಡಿನ ಸದ್ದು ಮೊಳಗಿದೆ. ಪ್ರಕೃತಿಯ ಮಡಿಲಲ್ಲ ಮಾನವೀಯತೆ ಸತ್ತು ಹೋದ ದಿನ ಎಂದು ಬಣ್ಣಿಸಲಾಗುತ್ತಿದೆ.
‘ಪಹಲ್ಗಾಮ್’ ಎಂಬ ಹೆಸರು ಎರಡು ಕಾಶ್ಮೀರಿ ಪದಗಳ ಸಂಯೋಜನೆಯಾಗಿದೆ. ‘ಪಹಲ್’ ಎಂದರೆ ಕುರುಬ, ಮತ್ತು ‘ಗಾಮ್’ ಎಂದರೆ ಹಳ್ಳಿ ಎಂಬ ಅರ್ಥವನ್ನು ನೀಡುತ್ತದೆ. ಅದು ಕುರುಬರ ಹಳ್ಳಿ. ಆದರೆ ಇದು ಕೇವಲ ಒಂದು ಹಳ್ಳಿಯಲ್ಲ,
ಈ ಪ್ರದೇಶ ಪುರಾಣಗಳಲ್ಲೂ ಹೆಚ್ಚಿನ ಮಹತ್ವ ಹೊಂದಿದೆ. ಪೌರಾಣಿಕ ಕಥೆಯ ಪ್ರಕಾರ, ಶಿವನು ತನ್ನ ವೃಷಭ ನಂದಿಯನ್ನು ಇಲ್ಲಿ ಬಿಟ್ಟು, ಪಾರ್ವತಿಗೆ ಅಮರತ್ವದ ರಹಸ್ಯವನ್ನು ಹೇಳಿದನು. ಅಂದಿನಿಂದ, ಇದು ಅಮರನಾಥ ಯಾತ್ರೆಗೆ ದ್ವಾರವಾಗಿದೆ. ಪ್ರತಿ ವರ್ಷ ಸಾವಿರಾರು ಯಾತ್ರಿಕರು ಇಲ್ಲಿಂದ ಪವಿತ್ರ ಗುಹೆಗೆ ಪ್ರಯಾಣಿಸುತ್ತಾರೆ. ಆದರೆ ಈ ಬಾರಿ, ಬೈಸರನ್ ವ್ಯಾಲಿ ಯಾತ್ರಿಕರ ಹೆಜ್ಜೆ ಸದ್ದಿಗಿಂತ ಗುಂಡುಗಳ ಸದ್ದಿನ ಸುದ್ದಿ ಹೆಚ್ಚಾಗಿದೆ.
ಲಿಡ್ಡರ್ ನದಿಯ ದಡದಲ್ಲಿ ಮಾಮಲೇಶ್ವರ ದೇವಸ್ಥಾನ ಇದ್ದು, ಶಿವನಿಗೆ ಅರ್ಪಿತವಾದ ಪವಿತ್ರ ಸ್ಥಳವಾಗಿದೆ. ಮೊಘಲ್ ಚಕ್ರವರ್ತಿ ಅಕ್ಬರ್ನಿಂದ ಹಿಡಿದು ಬ್ರಿಟಿಷ್ ಅಧಿಕಾರಿಗಳವರೆಗೆ ಹಾಗೂ ಜನರು ಕೂಡ ಸುಡುವ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಇಲ್ಲಿಗೆ ಬರುತ್ತಿದ್ದರು. ಅನೇಕ ಚಲನಚಿತ್ರಗಳನ್ನು ಇಲ್ಲಿ ಚಿತ್ರೀಕರಿಸಿದ್ದಾರೆ. ಆದರೆ ಈಗ, ಅಲ್ಲಿನ ಬಯಲು ಪ್ರದೇಶಗಳು ಮೌನವಾಗಿವೆ.
ಲಿಡ್ಡರ್ವಾಟ್, ಪಂಜತಾರ್ನಿ, ಚಂದನ್ವರಿ. ಇವೆಲ್ಲವೂ ಈ ಕಣಿವೆಯಲ್ಲಿನ ನೈಸರ್ಗಿಕ ರತ್ನಗಳು ಎಂದೇ ಕರೆಯಲಾಗಿದೆ. 2,400 ಮೀಟರ್ ಎತ್ತರದಲ್ಲಿ ವಿಶ್ವ ದರ್ಜೆಯ ಗಾಲ್ಫ್ ಕೋರ್ಸ್ ಕೂಡ ಇದೆ. ರೈಲು ಮಾರ್ಗಗಳು ಕೂಡ ಶೀಘ್ರದಲ್ಲೇ ಬರಲಿವೆ. ಪಹಲ್ಗಾಮ್, ಕೇವಲ ಪ್ರವಾಸಿ ತಾಣವಲ್ಲ, ಇದು ನಮ್ಮ ದೇಶದ ಆತ್ಮ. ನಮ್ಮ ಸಂಸ್ಕೃತಿ, ನಮ್ಮ ಭಕ್ತಿ, ನಮ್ಮ ನಂಬಿಕೆಯ ಸಂಕೇತ.
Pahalgam Terror Attack: ಉಗ್ರರ ದಾಳಿಯ ನಂತರ ಕಾಶ್ಮೀರದಲ್ಲಿ ಕಾರ್ಯಾಚರಣೆ, 1500 ಕ್ಕೂ ಹೆಚ್ಚು ಶಂಕಿತರ ಬಂಧನ